Thursday, January 30, 2014


Shri. A. B. Ibrahim, IAS took charge as the 126th Deputy Commissioner of Dakshina Kannada district on 26-12-2013.

Wednesday, May 8, 2013

ದಕ್ಷಿಣಕನ್ನಡ ಜಿಲ್ಲೆಯ ವಿಧಾನಸಭೆ ಕ್ಷೇತ್ರಗಳ ಚುನಾವಣೆಯ ಫಲಿತಾಂಶ

ಮಂಗಳೂರು, ಮೇ.08 :-ಕರ್ನಾಟಕ ರಾಜ್ಯ ವಿಧಾನಸಭೆಗೆ ಮೇ 5,2013 ರಂದು ನಡೆದ ಚುನಾವಣೆಯಲ್ಲಿ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ವಿಜಯಿ ಅಭ್ಯರ್ಥಿಗಳು ಪಡೆದ ಮತಗಳ ವಿವರ.
200  ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ 74530 ಮತಗಳನ್ನು ಪಡೆದ  ಭಾರತೀಯ ರಾಷ್ಟ್ರೀಯ ಕಾಂಗ್ರೆಸಿನ ಅಭ್ಯರ್ಥಿ ಕೆ. ವಸಂತ ಬಂಗೇರಾರವರು ಚುನಾಯಿತರಾಗಿರುತ್ತಾರೆ. ಇವರ ಸಮೀಪದ ಸ್ಪರ್ಧಿ ಭಾರತೀಯ ಜನತಾ ಪಕ್ಷದ ರಂಜನ್ ಜಿ.ಗೌಡ ಅವರು 58,789 ಮತಗಳನ್ನು ಗಳಿಸಿದ್ದಾರೆ.
201 ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ  ಕೆ.ಅಭಯಚಂದ್ರ ಇವರು 53180   ಮತಗಳನ್ನು                  ಪಡೆದು  ಚುನಾಯಿತರಾಗಿರುತ್ತಾರೆ. ಅವರ ಸಮೀಪ ಸ್ಪರ್ಧಿ ಬಿಜೆಪಿಯ ಉಮಾನಾಥ ಕೋಟ್ಯಾನ್ 48,630 ಮತಗಳನ್ನು ಪಡೆದಿರುತ್ತಾರೆ.
202 ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಭ್ಯರ್ಥಿ ಬಿ.ಎ.ಮೊಯಿದ್ದಿನ್  ಬಾವಾ ಅವರು 69,897   ಮತಗಳನ್ನು  ಪಡೆದು  ಜಯಶಾಲಿಯಾಗಿರುತ್ತಾರೆ. ಅವರ ಸಮೀಪ ಸ್ಪರ್ಧಿ ಕೃಷ್ಣ ಜೆ.ಪಾಲೇಮಾರ್ ರವರು 64,524 ಮತಗಳನ್ನು ಪಡೆದಿರುತ್ತಾರೆ.
203 ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ  ಚುನಾವಣೆಯಲ್ಲಿ  ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೋ ರವರು 67,829   ಮತಗಳನ್ನು  ಪಡೆದು  ಚುನಾಯಿತರಾಗಿರುತ್ತಾರೆ. ಸಮೀಪ ಸ್ಪರ್ಧಿ ಎನ್.ಯೋಗೀಶ್ ಭಟ್ ಇವರು 55554 ಮತಗಳನ್ನು ಪಡೆದಿರುತ್ತಾರೆ.
204 ಮಂಗಳೂರು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಯು.ಟಿ.ಖಾದರ್ 69,450   ಮತಗಳನ್ನು ಪಡೆದು  ಚುನಾಯಿತರಾಗಿರುತ್ತಾರೆ. ಸಮೀಪ  ಸ್ಪರ್ಧಿ ಚಂದ್ರಹಾಸ ಉಳ್ಳಾಲ  40,339 ಮತಗಳನ್ನು ಪಡೆದಿರುತ್ತಾರೆ.
205 ಬಂಟ್ವಾಳ ವಿಧಾನಸಭಾ ಕ್ಷೇತ್ರದ  ಚುನಾವಣೆಯಲ್ಲಿ  ಕಾಂಗ್ರೆಸ್ ಅಭ್ಯರ್ಥಿ ಬಿ.ರಮಾನಾಥ ರೈಯವರು 81,655  ಮತಗಳನ್ನು  ಪಡೆದು  ಚುನಾಯಿತರಾಗಿರುತ್ತಾರೆ. ಸಮೀಪ ಸ್ಪರ್ಧಿ ರಾಜೇಶ್ ನಾಯಕ್ ಉಳ್ಳಿಪ್ಪಾಡಿ ಇವರು 63815 ಮತಗಳನ್ನು ಪಡೆದಿರುತ್ತಾರೆ.
206 ಪುತ್ತೂರು ವಿಧಾನಸಭಾ ಕ್ಷೇತ್ರದ  ಚುನಾವಣೆಯಲ್ಲಿ  ಕಾಂಗ್ರೆಸ್ ಅಭ್ಯರ್ಥಿ ಶಕುಂತಳಾ ಟಿ.ಶೆಟ್ಟಿ ರವರು 66,345   ಮತಗಳನ್ನು  ಪಡೆದು  ಚುನಾಯಿತರಾಗಿರುತ್ತಾರೆ. ಸಮೀಪ ಸ್ಪರ್ಧಿ ಸಂಜೀವ ಮಟಂದೂರು ಇವರು 62056 ಮತಗಳನ್ನು ಪಡೆದಿರುತ್ತಾರೆ.
207 ಸುಳ್ಯ ವಿಧಾನಸಭಾ ಕ್ಷೇತ್ರದ  ಚುನಾವಣೆಯಲ್ಲಿ  ಬಿಜೆಪಿ ಅಭ್ಯರ್ಥಿ ಅಂಗಾರ .ಎಸ್.ರವರು 65,913   ಮತಗಳನ್ನು         ಪಡೆದು  ಚುನಾಯಿತರಾಗಿರುತ್ತಾರೆ. ಸಮೀಪ ಸ್ಪರ್ಧಿ ಡಾ..ರಘು ಇವರು 64,540 ಮತಗಳನ್ನು ಪಡೆದಿರುತ್ತಾರೆ.

Tuesday, May 7, 2013

ಮತ ಎಣಿಕೆ ಸಂಬಂಧ ಅಂತಿಮ ಸುತ್ತಿನ ಮಾಕ್ ಡ್ರಿಲ್

ಮಂಗಳೂರು ಮೇ 7 : ಮೇ 5 ರಂದು ನಡೆದ ರಾಜ್ಯ ವಿಧಾನ ಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಗೆ ದಕ್ಷಿಣಕನ್ನಡ ಜಿಲ್ಲೆ ಸಜ್ಜಾಗಿದ್ದು, ಈ ಸಂಬಂಧ ಅಂತಿಮ ಸುತ್ತಿನ ಮಾಕ್ ಡ್ರಿಲ್(ಅಣುಕು ಪ್ರದರ್ಶನ) ಜಿಲ್ಲಾಧಿಕಾರಿಗಳ ನೇತ್ರತ್ವದಲ್ಲಿಂದು ನಗರದ  ಕೆನರಾ ಕಾಲೇಜಿನಲ್ಲಿ ನಡೆಯಿತು.




ಮತ ಎಣಿಕೆಗೆ ಸಜ್ಜು- ಜಿಲ್ಲಾಧಿಕಾರಿ

ಮಂಗಳೂರು, ಮೇ.07 :ಮತ ಎಣಿಕೆ ಪ್ರಕ್ರಿಯೆಗೆ ದಕ್ಷಿಣಕನ್ನಡ ಜಿಲ್ಲೆ ಸಜ್ಜಾಗಿದ್ದು,ಇಂದು ಈ ಸಂಬಂಧ ಅಂತಿಮ ಸುತ್ತಿನ ಮಾಕ್ ಡ್ರಿಲ್(ಅಣುಕು ಪ್ರದರ್ಶನ)ಸಹ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕೆನರಾ ಕಾಲೇಜಿನಲ್ಲಿ ನಡೆಯಿತು. ಚುನಾವಣಾ ಮಾಹಿತಿಯನ್ನು ಪಬ್ಲಿಕ್ ಎಡ್ರೆಸ್ ವ್ಯವಸ್ಥೆ ಮೂಲಕ (ಮೈಕ್ ) ಸಾರ್ವಜನಿಕರಿಗೆ ತಿಳಿಸಲಾಗುವುದೆಂದು ಅವರು ತಿಳಿಸಿದರು.
           ಮತ ಎಣಿಕಾ ಕೇಂದ್ರ ದಲ್ಲಿ ಮೊಬೈಲ್ ಫೋನ್ ಗಳ ಬಳಕೆಗೆ  ಚುನಾ ವಣಾ ಅಧಿ ಕಾರಿ ಗಳು,  ವೀಕ್ಷ ಕರು, ಜಿಲ್ಲಾ ಚುನಾ ವಣಾ ಅಧಿ ಕಾರಿ ಗಳಿಂದ ಅನು ಮತಿ ಪಡೆದ ವರಿಗೆ ಮಾತ್ರ ಅವ ಕಾಶ ವಿರು ತ್ತದೆ.
ಮಾದ್ಯಮ ಪ್ರತಿ ನಿಧಿಗಳು ಮೊಬೈಲ್ ಫೋನ್ ಗಳನ್ನು ಮಾದ್ಯಮ ಕೊಠಡಿ ಯಲ್ಲಿ ಮಾತ್ರ ಬಳಸ ಬಹುದಾ ಗಿದೆ. ಎಣಿಕಾ ಕೇಂದ್ರದ ಆವ ರಣ ಗಳಲ್ಲಿ ಯಾರೂ ಮೊಬೈಲ್ ಫೋನ್ ಗಳನ್ನು ಕೊಂಡೊ ಯ್ಯಬಾ ರದೆಂದು ಹಾಗೂ ಮೊಬೈಲ್ ಫೋನ್ ಗಳ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆಯೆಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ  ಹರ್ಷಗುಪ್ತ ಇವರು ತಿಳಿಸಿರುತ್ತಾರೆ.
ಎಣಿಕಾ ಕೇಂದ್ರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಹಾಗೂ ಅವರ ಎಣಿಕಾ  ಒಬ್ಬ ಏಜೆಂಟ್ ಮಾತ್ರ  ಮೊಬೈಲ್  ಫೋನ್ನ್ನು  ಕೊಂಡೊಯ್ಯಲು ಅವಕಾಶವಿದ್ದು ಅವರು ಅವುಗಳ ಬಳಕೆಯನ್ನು ತಮಗೆ ಮೀಸಲಾದ ಕೊಠಡಿಯಲ್ಲಿ ಮಾತ್ರ ಮಾಡಬಹುದಾಗಿದೆ. ಅನಾವಶ್ಯಕವಾಗಿ ಎಣಿಕಾ ಕೇಂದ್ರದ ಅಂಗಳದಲ್ಲಿ( ಕಾರಿಡಾರ್) ಅತ್ತಿಂದತ್ತ ಓಡಾಡುವುದನ್ನು ಫೋನ್ನಲ್ಲಿ ಮಾತನಾಡುವುದನ್ನು ನಿಷೇಧಿಸಲಾಗಿದೆ.
ಚುನಾವಣಾ ಎಣಿಕೆ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಅಂದರೆ ಮತಯಂತ್ರವನ್ನು ಸ್ಟ್ರಾಂಗ್ ರೂಮಿನಿಂದ ಎಣಿಕಾ ಕೊಠಡಿಗೆ ಸಾಗಿಸುವುದು ಅದನ್ನು ತೆರೆಯುವುದು ಎಣಿಕೆ ಮಾಡುವುದು ಇನ್ನಿತರೆ ಎಲ್ಲಾ ಪ್ರಕ್ರಿಯೆಗಳನ್ನು ವಿಡಿಯೋ ಕ್ಯಾಮರಾ ಮೂಲಕ ದಾಖಲಿಸುವ ವ್ಯವಸ್ಥೆ ಮಾಡಲಾಗಿದೆ.
ಅಂಚೆ ಮತಪತ್ರಗಳ ಎಣಿಕೆಯ ಬಗ್ಗೆ ಚುನಾವಣಾಧಿಕಾರಿ ಸಹಾಯಕ ಚುನಾವಣಾಧಿಕಾರಿಗಳಿಗೆ ವಿಶೇಷ ತರಬೇತಿಯನ್ನು ನೀಡಲಾಗಿದ್ದು, ಅವರ ನಿರ್ಧಾರವೇ ಅಂತಿಮವಾಗಿರುತ್ತದೆಯೆಂದು ಜಿಲ್ಲಾ ಚುನಾವಣಾಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.
ನಿಷೇದಾಜ್ಞೆ ಜಾರಿ :
  ರಾಜ್ಯ ವಿಧಾನ ಸಭಾ ಚುನಾವಣೆ - 2013 ರಂದು ಮಂಗಳೂರು ನಗರದ ಕೊಡಿಯಾಲ್ ಬೈಲ್ ಕೆನರಾ ವಿದ್ಯಾಲಯದಲ್ಲಿ ನಡೆಯಲಿರುವ  ಮತ ಎಣಿಕೆ ನಂತರ ಫಲಿತಾಂಶದಲ್ಲಿ ವಿಜಯಿಯಾದ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ತಮ್ಮ ಕ್ಷೇತ್ರಗಳೆಡೆಗೆ ತಮ್ಮ ವಿಜಯೋತ್ಸವ ಆಚರಿಸುತ್ತಾ ಮೆರವಣಿಗೆಯಲ್ಲಿ ತೆರಳುತ್ತಾರೆ.ಸಾರ್ವಜನಿಕ ಹಿತದೃಷ್ಟಿಯಿಂದ ವಿಜಯೋತ್ಸವ ಮೆರವಣಿಗೆಯನ್ನು ಪ್ರತಿಬಂಧಿಸುವ ಸಲುವಾಗಿ  ದಿನಾಂಕ 8-5-13 ರಂದು ಬೆಳಿಗ್ಗೆ 6.00 ಗಂಟೆಯಿಂದ ದಿನಾಂಕ 11-5-13 ರಂದು ಬೆಳಿಗ್ಗೆ 6.00 ಗಂಟೆಯ  ವರೆಗೆ ಯಾವುದೇ ಸಭೆ ಸಮಾರಂಭ ಮತ್ತು ಪ್ರತಿಭಟನಾ ಮೆರವಣಿಗೆಯನ್ನು ನಡೆಸದಂತೆ ನಿಷೇದಾಜ್ಞೆಯನ್ನು   ಪೋಲೀಸ್ ಆಯುಕ್ತರು ಹಾಗೂ ಎಡಿಷನಲ್ ಡಿಸ್ಟ್ರಿಕ್ಟ್ ಮೆಜಿಸ್ಟ್ರೇಟ್  ಮನೀಷ್ ಖರ್ಬಿಕರ್ ಘೋಷಿಸಿರುತ್ತಾರೆ.
 ವಾಹನ ಸಂಚಾರದಲ್ಲಿ ಬದಲಾವಣೆ:
ರಾಜ್ಯ ವಿಧಾನ ಸಭಾ ಚುನಾವಣೆ  -2013  ಮತ ಎಣಿಕೆದಿನಾಂಕ 8-5-13 ರಂದು ಬೆಳಿಗ್ಗೆ 7.00 ಗಂಟೆಯಿಂದ ಮಂಗಳೂರು ನಗರದ ಕೊಡಿಯಾಲ್ ಬೈಲ್ ಕೆನರಾ ವಿದ್ಯಾಲಯದಲ್ಲಿ ನಡೆಯಲಿದ್ದು, ಈ ಸಂದರ್ಭದಲ್ಲಿ ಮತ ಎಣಿಕಾ ಕೇಂದ್ರದ ಸುತ್ತಮುತ್ತ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಬದಲಿ ಸಂಚಾರ ವ್ಯವಸ್ಥೆಯನ್ನು ಮಾಡಿ ಪೋಲೀಸ್ ಆಯುಕ್ತರು ಆದೇಶಿಸಿರುತ್ತಾರೆ.ಜೈಲ್ ಜಂಕ್ಷನ್ ಕಡೆಯಿಂದ ಬೆಸೆಂಟ್ ಜಂಕ್ಷನ್ ಕಡೆಯಿಂದ, ಕೆನರಾ ಕಾಲೇಜು ಕಡೆಗೆ ಚುನಾವಣೆ ಅಧಿಕಾರಿಯವರ ಹಾಗೂ ಪೋಲೀಸ್ ಅಧಿಕಾರಿಗಳ ವಾಹನ ಹೊರತು ಪಡಿಸಿ ಇತರೆ ವಾಹನಗಳ ಪ್ರವೇಶ ನಿಷೇಧಿಸಿದೆ.
ಪಿವಿಎಸ್ ನಿಂದ ಬಳ್ಳಾಲ್ ಭಾಗ್ ತನಕ ರಸ್ತೆಯ ಎರಡೂ ಬದಿ ಯಲ್ಲಿ ಯಾವುದೇ ತೆರ ನಾದ ವಾಹನ ನಿಲು ಗಡೆ ಯನ್ನು ಕಡ್ಡಾಯ ವಾಗಿ ನಿಷೇ ಧಿಸಿದೆ. ಕಪು ಚಿನ್ ಪ್ರಾದ್ ಹಾಗೂ ಕ ರಂಗಲ್ ಪಾಡಿ ಕಡೆ ಯಿಂದ ಜೈಲು ಜಂಕ್ಷನ್ ಕಡೆಗೆ ಎಲ್ಲಾ ತೆರ ನಾದ ವಾಹನ ಸಂಚಾರ ನಿಷೇ ಧಿಸಿದೆ. ಜೈಲ್ ಜಂಕ್ಷನ್ ನಿಂದ ಕೋರಿರೊಟ್ಟಿ ಕ್ರಾಸ್ ರಸ್ತೆ ವಾಣಿಜ್ಯ ಕಟ್ಟಡ ಗಳ ಪಾರ್ಕಿಂ ಗ್ ಹೊರತು ಪಡಿಸಿ ರಸ್ತೆ ಯಲ್ಲಿ ಯಾವುದೇ ವಾಹನ ನಿಲು ಗಡೆಗೆ ಅವ ಕಾಶವಿ ರುವು ದಿಲ್ಲ. ಜೈಲು ಜಂಕ್ಷನ್ ನಿಂದ ವೆಟರ್ನರಿ ಜಂಕ್ಷನ್ ತನಕ ರಸ್ತೆಯ ಎಡಬದಿಯಲ್ಲಿ ಮಾತ್ರ ವಾಹನಗಳನ್ನು ರಸ್ತೆಗೆ ಸಮಾನಾಂತರವಾಗಿ ಪಾರ್ಕ್ ಮಾಡಬಹುದಾಗಿದೆ. ಈ ಆದೇಶದನ್ವಯ ಸದರಿ ರಸ್ತೆಯಲ್ಲಿ ವಾಹನ ಸಂಚಾರ ವ್ಯವಸ್ಥೆ ಬಗ್ಗೆ ಆವಶ್ಯವರುವ ಸೂಚನಾ ಫಲಕ ಅಳವಡಿಸಲು ಹಾಗೂ ಸಂಚಾರ ನಿಯಂತ್ರಣ ಸಿಬ್ಬಂದಿಗಳನ್ನು ನೇಮಕ ಗೊಳಿಸಲು ಸಹಾಯಕ ಪೋಲೀಸ್ ಆಯುಕ್ತರು ಅಧಿಕಾರವುಳ್ಳವರಾಗಿರುತ್ತಾರೆ. .

Monday, May 6, 2013

ದ.ಕ. ಮತ ಎಣಿಕೆಗೆ ಸಜ್ಜು: ಜಿಲ್ಲಾಧಿಕಾರಿ

ಮಂಗಳೂರು, ಮೇ 6: ದಕ್ಷಿಣ ಕನ್ನಡ  ಜಿಲ್ಲಾ 8 ವಿಧಾನಸಭೆಗಳ ಚುನಾವಣಾ ಫಲಿತಾಂಶ ಮೇ 8ರಂದು ನಡೆಸಲು ಜಿಲ್ಲಾಡಳಿತ ಸಜ್ಜಾಗಿದ್ದು ಅಂದು 11.30 ರ ಸುಮಾರಿಗೆ  ಫಲಿತಾಂಶ ಲಭ್ಯವಾಗಲಿದೆಎಂದು ದ.ಕ. ಜಿಲ್ಲಾಧಿಕಾರಿ ಹರ್ಷಗುಪ್ತಾ ಹೇಳಿದ್ದಾರೆ.
                  ಕೆನರಾ ಕಾಲೇ ಜಿನಲ್ಲಿ ಬೆಳಗ್ಗೆ 7  ಗಂಟೆಗೆ ಮತ ಎಣಿಕೆ ಪ್ರ ಕ್ರಿಯೆ ಆರಂಭ ಗೊಳ್ಳ ಲಿದ್ದು, ಪ್ರತಿ ಯೊಂದು ಕ್ಷೇತ್ರಕ್ಕೆ ತಲಾ ನಾಲ್ಕು ಟೇಬಲ್  ಗಳಲ್ಲಿ ಸುಪರ್ ವೈಸರ್, ಅಸಿಸ್ಟೆಂಟ್ ಹಾಗೂ ಮೈಕ್ರೋ ಒಬ್ಸರ್ವರ್ ನೇತೃತ್ವದಲ್ಲಿ  ಮತ ಎಣಿಕೆ ಕಾರ್ಯ ನಡೆಯಲಿದೆ. 15ರಿಂದ 17 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಆರಂಭದಲ್ಲಿ ಅಂಚೆ ಮತಗಳ ಎಣಿಕೆ ನಡೆಯಲಿದೆ. ಒಟ್ಟಿನಲ್ಲಿ ಮಧ್ಯಾಹ್ನ 11.30ರಿಂದ 12 ಗಂಟೆಯ ವೇಳೆಗೆ ಮತ ಎಣಿಕೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.
ಮತ ಎಣಿಕೆ ಕೇಂದ್ರದೊಳಗೆ ಅಭ್ಯರ್ಥಿ ಹಾಗೂ ಅಭ್ಯರ್ಥಿಪರವಾಗಿ ಏಜೆಂಟ್ ಭೇಟಿ ನೀಡಲು ಅವಕಾಶವಿದ್ದು, ಮೊಬೈಲ್ ನಿಷೇಧಿಸಲಾಗಿದೆ ಎಂದು ಅವರು ಹೇಳಿದರು.
ದ.ಕ.: ಶೇ. 74.48 ಮತದಾನ:
ದ.ಕ. ಜಿಲ್ಲೆಯಲ್ಲಿ ಅಂಚೆ ಮತ ಸೇರಿದಂತೆ ಒಟ್ಟು ಶೇ. 74.48 ಮತದಾನವಾಗಿದೆ.  15,01,024 ಮತದಾರರಲ್ಲಿ 11,18,025 ಮಂದಿ ಮತ ಚಲಾಯಿಸಿದ್ದಾರೆ.
ಮತಚಲಾವಣೆಯಲ್ಲಿ ಮಹಿಳೆಯರು ಮುಂದು!
ದ.ಕ. ಜಿಲ್ಲೆಯ ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾವಣೆಯಲ್ಲಿ ಮಹಿಳಾ ಮತದಾರರೇ ಮುಂದಿದ್ದಾರೆ. 7,43,463 ಪುರುಷ ಮತದಾರರಲ್ಲಿ 5,54,544  ಮಂದಿ ಮತ ಚಲಾಯಿಸಿದ್ದರೆ, 7,57,561 ಮಹಿಳಾ ಮತದಾರರಲ್ಲಿ 5,63,481 ಮಂದಿ ಮತ ಚಲಾಯಿಸಿದ್ದಾರೆ.
81 ನೋಟಾ ಮತ ಚಲಾವಣೆ:
ಯಾವುದೇ ಅಭ್ಯರ್ಥಿಗಳಿಗೆ ಮತ ಚಲಾಯಿಸಲು ಮನಸ್ಸಿಲ್ಲದೆ ನೋಟಾ ಮತ ಚಲಾಯಿಸಿದರ ಸಂಖ್ಯೆ ಜಿಲ್ಲೆಯಲ್ಲಿ ಒಟ್ಟು 81. ಮೂಡಬಿದ್ರೆಯ ಮತಗಟ್ಟೆ ಸಂಖ್ಯೆ 155ರಲ್ಲಿ ಶೇ. 41.05 ಮತದಾನದ ಮೂಲಕ ಅತೀ ಕಡಿಮೆ ಮತದಾನವಾಗಿದೆ. ಮಂಗಳೂರು ಕ್ಷೇತ್ರದ ರಾಣಿಪುರ ಮುನ್ನೂರು ಮತಗಟ್ಟೆ ಸಂಖ್ಯೆ 38 (ಎ)ಯಲ್ಲಿ ಅತೀ ಹೆಚ್ಚು ಶೇ. 95.23 ಮತದಾನವಾಗಿದೆ ಎಂದು ಹರ್ಷಗುಪ್ತಾ ತಿಳಿಸಿದರು.
ವೆಬ್ ಕಾಸ್ಟಿಂಗ್ ಯಶಸ್ವಿ:
ಮಂಗಳೂರಿನ 208 ಕಂಡೆ ಸೇರಿದಂತೆ ದ.ಕ. ಜಿಲ್ಲೆಯ 272 ಮತಗಟ್ಟೆಗಳಲ್ಲಿ ಪ್ರಥಮ ಬಾರಿಗೆ ಪ್ರಾಯೋಗಿಕವಾಗಿ ಜಿಲ್ಲೆಯ ವಿವಿಧ ಇಂಜನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ಸಹಕಾರದಲ್ಲಿ ನಡೆಸಲಾದ ವೆಬ್ ಕಾಸ್ಟಿಂಗ್ ಯಶಸ್ವಿಯಾಗಿದೆ. ಕೆಲವೆಡೆ ವಿದ್ಯುಚ್ಛಕ್ತಿ ಕೈಕೊಟ್ಟು ಕೆಲ ಹೊತ್ತು ಈ ವ್ಯವಸ್ಥೆಗೆ ತಡೆಯಾಗಿದ್ದರೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮತದಾರರಿಗೆ ಮತಗಟ್ಟೆಗಳಿಗೆ ತೆರಳಿ ಹಿಂತಿರುವ ನಿಟ್ಟಿನಲ್ಲಿ ಮಾಡಲಾದ ವಾಹನದ ವ್ಯವಸ್ಥೆಗೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗದಿದ್ದರೂ ಗ್ರಾಮಾಂತರ ಪ್ರದೇಶವಾದ ಸುಬ್ರಹ್ಮಣ್ಯ ಸೇರಿದಂತೆ ಹಲವು ಕಡೆಗಳಲ್ಲಿ ಮತದಾರರು ಈ ವ್ಯವಸ್ಥೆಯನ್ನು ಉಪಯೋಗಿಸಿಕೊಂಡಿದ್ದಾರೆ.
ಗ್ರಾಮಾಂತರ ಪ್ರದೇಶದಲ್ಲಿ ಸ್ವೀಪ್ ಯಶಸ್ವಿ:
ದ.ಕ. ಜಿಲ್ಲೆಯಲ್ಲಿ ಸ್ವೀಪ್ ಕಾರ್ಯಕ್ರಮ ಯಶಸ್ವಿಯಾಗಿಲ್ಲವಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ನಗರ ಪ್ರದೇಶದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸ್ವೀಪ್ ಕಾರ್ಯಕ್ರಮಕ್ಕೆ ಮನ್ನಣೆ ದೊರೆಯದಿದ್ದರೂ, ಗ್ರಾಮಾಂತರ ಪ್ರದೇಶಗಳಲ್ಲಿ ಈ ಕಾರ್ಯಕ್ರಮ ಸಾಕಷ್ಟು ಪರಿಣಾಮ ಬೀರಿದ್ದು, ಯಶಸ್ವಿಯಾಗಿದೆ ಎಂದು ಹೇಳಿದರು.
ಸ್ವೀಪ್ ಕಾರ್ಯಕ್ರಮಕ್ಕೆ ಕ್ಷೇತ್ರವೊಂದಕ್ಕೆ ತಲಾ 2.50 ಲಕ್ಷ ರೂ.ಗಳನ್ನು ಸರಕಾರ ನಿಗದಿಪಡಿಸಿತ್ತು. ಇದರಲ್ಲಿ 1.25 ಲಕ್ಷ ರೂ.ಗಳನ್ನು ಆಯಾ ಕ್ಷೇತ್ರದ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ಬಿಎಲ್ಒಗಳಿಗೆ ಪ್ರೋತ್ಸಾಹ ಧನವಾಗಿ ವಿತರಿಸಲು ತೀರ್ಮಾನಿಸಲಾಗಿದೆ ಎಂದು ಹರ್ಷಗುಪ್ತ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ದಯಾನಂದ, ಮಹಾನಗರ ಪಾಲಿಕೆ ಆಯುಕ್ತ ಹರೀಶ್ ಕುಮಾರ್ ಉಪಸ್ಥಿತರಿದ್ದರು.


ಮಂಗಳೂರು ನಗರ ಕೆನರಾ ಕಾಲೇಜಿನಲ್ಲಿ ಮತ ಎಣಿಕೆ

ಮಂಗಳೂರು,ಮೇ.06:- ದಕ್ಷಿಣಕನ್ನಡ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯವು ನಗರದ ಕೊಡಿಯಾಲ್ಬೈಲ್ನಲ್ಲಿರುವ ಕೆನರಾ ಪದವಿ ಪೂರ್ವ ಮತ್ತು ಕೆನರಾ ಪದವಿ ಕಾಲೇಜಿನಲ್ಲಿ ಮೇ 8ರಂದು ಬೆಳಿಗ್ಗೆ 8.00 ಗಂಟೆಗೆ ಆರಂಭವಾಗಲಿದೆ.
ಕೆನರಾ ಪದವಿ ಪೂರ್ವ ಕಾಲೇಜಿನಲ್ಲಿ ಬೆಳ್ತಂಗಡಿ,ಮೂಡಬಿದ್ರಿ,ಮಂಗಳೂರು ನಗರ ದಕ್ಷಿಣ,ಮಂಗಳೂರು ನಗರ ಉತ್ತರ,ಮಂಗಳೂರು ಹಾಗೂ ಬಂಟ್ವಾಳ ಕ್ಷೇತ್ರಗಳ ಮತಗಳ ಎಣಿಕೆ ಕಾರ್ಯ ನಡೆಯಲಿದೆ.  ಪುತ್ತೂರು ಮತ್ತು ಸುಳ್ಯ ಕ್ಷೇತ್ರ ಗಳ ಮತಗಳ ಎಣಿಕೆ ಕಾರ್ಯ ಕೆನರಾ ಪದವಿ ಕಾಲೇಜಿ ನಲ್ಲಿ ನಡೆಯ ಲಿದೆ.
ಪ್ರತೀ ಕ್ಷೇತ್ರಕ್ಕೂ 14 ಮೇಜು ಗಳಿದ್ದು ಒಂದೊಂದು ಮೇಜಿಗೆ ಒಬ್ಬರು ಸೂಪರ್ ವೈಸರ್, ಒಬ್ಬರು ಎಣಿಕೆ ಸಹಾಯಕರು,ಒಬ್ಬರು ಮೈಕ್ರೋ ವೀಕ್ಷಕ ಹಾಗೂ ಡಿ ಗ್ರೂಪ್ ನೌಕರರನ್ನು ನಿಯೋಜಿಸಲಾಗಿದೆ.ಒಟ್ಟು 132 ಸೂಪರ್ ವೈಸರ್ ಗಳು,131 ಎಣಿಕಾ ಸಹಾಯಕರು ,121 ಡಿ  ಗ್ರೂಪ್ ನೌಕರರು ಹಾಗೂ 129 ಮೈಕ್ರೋ ವೀಕ್ಷಕರು ಸೇರಿದಂತೆ 513 ಸಿಬ್ಬಂದಿಗಳು ಎಣಿಕೆ ಕಾರ್ಯದಲ್ಲಿ ಭಾಗವಹಿಸುವರು. ಇವರಲ್ಲದೆ 82 ಸಿಬ್ಬಂದಿಗೆ ಭದ್ರತಾ ಕೊಠಡಿ ಸೀಲಿಂಗ್ ಜವಾಬ್ದಾರಿ,ಅನ್ಯ ಕೆಲಸ ಕಾರ್ಯಗಳಿಗೆ 23,ಟ್ಯಾಬುಲೇಶನ್ 30 ಸೇರಿದಂತೆ ಒಟ್ಟಿಗೆ ಸುಮಾರು 820 ಸಿಬ್ಬಂದಿಯನ್ನು ಮತಗಳ ಎಣಿಕಾ ಕಾರ್ಯಕ್ಕೆ ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹರ್ಷಗುಪ್ತಾ ತಿಳಿಸಿದ್ದಾರೆ.
 (ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮತ ಎಣಿಕಾ ಕಾರ್ಯಕ್ಕೆ ನಿಯೋಜಿಸಿರುವ ಸಿಬ್ಬಂದಿಗಳಿಗೆ ಕೊನೇ ಕ್ಷಣದ ತರಬೇತಿಯನ್ನು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಹರ್ಷಗುಪ್ತಾ ,ಅಪರ ಜಿಲ್ಲಾಧಿಕಾರಿಗಳಾದ ದಯಾನಂದ ಮತ್ತು ಮಹಾನಗರಪಾಲಿಕೆಯ ಆಯುಕ್ತರಾದ  ಹರೀಶ್ ಕುಮಾರ್  ನಡೆಸಿಕೊಟ್ಟರು)



ದಕ್ಷಿಣಕನ್ನಡ ಜಿಲ್ಲೆಯ 1.43 ಲಕ್ಷ ಅಧಿಕ ಮತದಾರರಿಂದ ಮತದಾನ


ಮಂಗಳೂರು,ಮೇ.06 :- ದಕ್ಷಿಣಕನ್ನಡ ಜಿಲ್ಲೆಯಲ್ಲಿ ರಾಜ್ಯ ವಿಧಾನಸಭೆಗೆ ಮೇ 5 ರಂದು ನಡೆದ ಸಾರ್ವತ್ರಿಕ ಚುನಾವಣೆಯು ಅತ್ಯಂತ ಸುವ್ಯವಸ್ಥಿತವಾಗಿ ಹಾಗೂ ಶಾಂತಿಯುತವಾಗಿ ನಡೆದಿದ್ದು, ಮತದಾರರು ಮತದಾನದ ಹಕ್ಕನ್ನು ಗೌರವಿಸಿದ್ದಾರೆ. ಕಳೆದ ಸಾಲಿನಲ್ಲಿ ಒಟ್ಟು 9,74,288 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದರೆ ಪ್ರಸಕ್ತ ಸಾಲಿನಲ್ಲಿ 11,18,025 ಜನರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
ಜಿಲ್ಲೆಯಲ್ಲಿ ಕಳೆದ ಸಾಲಿಗಿಂತ ಈ ಸಾಲಿನಲ್ಲಿ ಒಟ್ಟು 1,43,737 ಅಧಿಕ ಮತದಾರರು ಮತ ಚಲಾಯಿಸುವ ಮೂಲಕ ಅತ್ಯಂತ ಪ್ರಶಂಸನೀಯ ಮತದಾನವಾಗಿದೆ.  ಪ್ರಥಮ ಹಂತದಲ್ಲಿ 62,000 ಅರ್ಜಿಗಳನ್ನು ಸ್ವೀಕರಿಸಿ ನೋಂದಾಯಿಸಲಾಗಿದ್ದು,ಜನರು ತಮ್ಮ ಹಕ್ಕಿನ ಬಗ್ಗೆ ಹೆಚ್ಚು ಜಾಗ್ರತರಾಗಿದ್ದಾರೆ. ನೈತಿಕ ಮತದಾನಕ್ಕೆ ಪ್ರಾಶಸ್ತ್ಯದ ಜೊತೆಗೆ ಶಾಂತಿಯುತ ಮತದಾನ ಜಿಲ್ಲೆಯಲ್ಲಿ ದಾಖಲಾಗಿದೆ. ಜಿಲ್ಲೆಯಲ್ಲಿ 11,18,025 ಒಟ್ಟು ಮತ ಚಲಾವಣೆಯಾಗಿದ್ದು, ಇದು ಜಿಲ್ಲೆಯಲ್ಲಿ  ಸ್ವಿಪ್ ಕಾರ್ಯಕ್ರಮ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿದ್ದು ಕಾರಣವಾಗಿದೆ.
ಕಳೆದ 2008ರ ವಿಧಾನಸಭಾ ಚುನಾವಣೆಯಲ್ಲಿ ಇದ್ದ  ಒಟ್ಟು 13,33,092 ಮತದಾರರ ಪೈಕಿ 9,79,288 ಮತದಾರರು ಮತ ಚಲಾಯಿಸಿದ್ದರೆ,ಈ ಬಾರಿ ಹೆಚ್ಚುವರಿಯಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾದ ಸುಮಾರು 56,000 ಮತದಾರರು ಸೇರಿದಂತೆ ಒಟ್ಟು ಮತದಾರರ ಸಂಖ್ಯೆ 15,01,024 ಆಗಿತ್ತು.
 ಕಳೆದ ಬಾರಿಗಿಂತ ಈ ಬಾರಿಯು 72,713 ಮಹಿಳಾ ಮತದಾರರು  ಮತ ಚಲಾಯಿಸುವ ಮೂಲಕ ದಾಖಲೆ ಮಾಡಿದ್ದಾರೆ. ಕಳೆದ ಬಾರಿ ಪುರುಷರು 4,83,520 ಮತದಾರರು ಮತ ಚಲಾಯಿಸಿದ್ದರೆ 2013 ಮೇ 5 ರಂದು ನಡೆದ ಚುನಾವಣೆಯಲ್ಲಿ 5,54,544 ಮತದಾರ ಪುರುಷರು ಮತ ಚಲಾಯಿಸಿದ್ದಾರೆ.
ಬೆಳ್ತಂಗಡಿ ಕ್ಷೇತ್ರದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ 1,28,577 ಮತದಾರರು ಮತ ಚಲಾಯಿಸಿದ್ದರೆ ಈ ಬಾರಿ 1,45,594  ಮತ ಚಲಾಯಿಸಿದ್ದಾರೆ.
ಮೂಡಬಿದ್ರೆ ಕ್ಷೇತ್ರದಲ್ಲಿ ಕಳೆದ ಬಾರಿ 1,10,531 ಮತದಾರರು ಮತ ಚಲಾಯಿಸಿದ್ದರೆ ಈ ಬಾರಿ 1,28,241 ಮತದಾರರು ಮತ ಚಲಾಯಿಸಿದ್ದಾರೆ.
ಮಂಗಳೂರು ನಗರ ಉತ್ತರ ಕ್ಷೇತ್ರದಲ್ಲಿ 2008 ರ ವಿಧಾನಸಭಾ ಚುನಾವಣೆಯಲ್ಲಿ 1,31,468 ಮತದಾರರು ಮತ ಚಲಾಯಿಸಿದ್ದರೆ, ಈ ಬಾರಿ 1,45,238 ಮತದಾರರು ಮತ ಚಲಾಯಿಸಿದ್ದಾರೆ. 
ಮಂಗಳೂರು ನಗರ ದಕ್ಷಿಣ  ಕ್ಷೇತ್ರದಲ್ಲಿ 2008 ರ ವಿಧಾನಸಭಾ ಚುನಾವಣೆಯಲ್ಲಿ 1,18,430 ಮತದಾರರು ಮತ ಚಲಾಯಿಸಿದ್ದರೆ, ಈ ಬಾರಿ 1,32,177 ಮತದಾರರು ಮತ ಚಲಾಯಿಸಿದ್ದಾರೆ. 
ಮಂಗಳೂರು  ಕ್ಷೇತ್ರದಲ್ಲಿ 2008 ರ ವಿಧಾನಸಭಾ ಚುನಾವಣೆಯಲ್ಲಿ 1,04,329 ಮತದಾರರು ಮತ ಚಲಾಯಿಸಿದ್ದರೆ, ಈ ಬಾರಿ 1,2
4,205 ಮತದಾರರು ಮತ ಚಲಾಯಿಸಿದ್ದಾರೆ. 
ಬಂಟ್ವಾಳ  ಕ್ಷೇತ್ರದಲ್ಲಿ 2008 ರ ವಿಧಾನಸಭಾ ಚುನಾವಣೆಯಲ್ಲಿ 1,34,853 ಮತದಾರರು ಮತ ಚಲಾಯಿಸಿದ್ದರೆ, ಈ ಬಾರಿ 1,55,750  ಮತದಾರರು ಮತ ಚಲಾಯಿಸಿದ್ದಾರೆ. 
ಪುತ್ತೂರು  ಕ್ಷೇತ್ರದಲ್ಲಿ 2008 ರ ವಿಧಾನಸಭಾ ಚುನಾವಣೆಯಲ್ಲಿ 1,22,941 ಮತದಾರರು ಮತ ಚಲಾಯಿಸಿದ್ದರೆ, ಈ ಬಾರಿ 1,41,746 ಮತದಾರರು ಮತ ಚಲಾಯಿಸಿದ್ದಾರೆ. 
ಸುಳ್ಯ  ಕ್ಷೇತ್ರದಲ್ಲಿ 2008 ರ ವಿಧಾನಸಭಾ ಚುನಾವಣೆಯಲ್ಲಿ 1,23,159 ಮತದಾರರು ಮತ ಚಲಾಯಿಸಿದ್ದರೆ, ಈ ಬಾರಿ 1,45,074 ಮತದಾರರು ಮತ ಚಲಾಯಿಸಿದ್ದಾರೆ. 
 ಜಿಲ್ಲೆಯಲ್ಲಿ ಸ್ವಿಪ್ ಕಾರ್ಯಕ್ರಮದಿಂದ ಹೆಚ್ಚು ಮತದಾರರು ಜಾಗೃತಿ ಹೊಂದಿ ಮತದಾನ ಮಾಡಿರುವುದು.