Tuesday, April 30, 2013

ಅಕ್ರಮ ಹಣ ವಶ

ಮಂಗಳೂರು, ಏಪ್ರಿಲ್.30: ಮೇ5 ರ ಚುನಾವಣಾ ದಿನಾಂಕ ಹತ್ತಿರವಾಗುತ್ತಿದ್ದಂತೆ  ಕಾನೂನು ಬಾಹಿರ ಚಟುವಟಿಕೆಗಳ ಮೇಲೆ ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತ ನಿರಂತರವಾಗಿ ಕಣ್ಣಿರಿಸಿದೆ. ಸೆಕ್ಟರ್ ಮ್ಯಾಜಿಸ್ಟ್ರೇಟ್ ಮತ್ತು ಪೋಲಿಸ್ ಇಲಾಖೆಗೆ ಸಿಕ್ಕಿದ ಖಚಿತ ಮಾಹಿತಿ ಮೇರೆಗೆ ನಗರದ ಅತ್ತಾವರ ಕಟ್ಟೆಯ ಗೋಲ್ಡನ್ ಕ್ಯಾಸಲ್  ವಸತಿ ಸಮುಚ್ಚಾಯದಲ್ಲಿನ ಯು.ಎನ್. ಅಬ್ದುಲ್ ರಜಾಕ್ ಅವರ ನಿವಾಸದ ಮೇಲೆ ಸೋಮವಾರ ರಾತ್ರಿ ದಾಳಿ ನಡೆಸಿದ ಅಧಿಕಾರಿಗಳು ಯಾವುದೇ ದಾಖಲೆ ಪತ್ರಗಳಿಲ್ಲದ 63 ಲಕ್ಷ ರೂಪಾಯಿ ನಗದು ಹಣವನ್ನು ವಶಕ್ಕೆ ಪಡೆದಿದ್ದಾರೆ.  ಹೆಚ್ಚಿನ ವಿಚಾರಣೆಗಾಗಿ ಪ್ರಕರಣವನ್ನು ಆದಾಯ ತೆರಿಗೆ ಅಧಿಕಾರಿಗಳಿಗೆ ವರ್ಗಾಯಿಸಲಾಗಿದೆ.

ಮೇ 3ರಂದು ಬಹಿರಂಗ ಪ್ರಚಾರ ಅಂತ್ಯ: ಜಿಲ್ಲಾಧಿಕಾರಿ

ಮಂಗಳೂರು, ಏಪ್ರಿಲ್. 30:ಚುನಾವಣಾ ಪ್ರಚಾರ ತಂತ್ರಗಳ ಮೇಲೆ ಜಿಲ್ಲಾಡಳಿತ ನಿರಂತರವಾಗಿ ಕಣ್ಣಿರಿಸಿದ್ದು ಮೇ 5ರಂದು ಮತದಾನ ನಡೆಯಲಿರುವ ಹಿನ್ನಲೆಯಲ್ಲಿ ಮೇ 3ರಂದು 5ಗಂಟೆಯ ನಂತರ ಎಲ್ಲ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ.
ಮೇ 3ರ ಐದು ಗಂಟೆಯ ನಂತರದೃಶ್ಯ ಮತ್ತು ಮುದ್ರಣ ಮಾದ್ಯಮದ ಮೂಲಕ  ಜಾಹೀರಾತು ಪ್ರಕಟಣೆಯನ್ನು ಕಡ್ಡಾಯವಾಗಿ ನಿಷೇಧಿಸಿದೆ. ಒಪಿನಿಯನ್ ಪೋಲ್ ಮತ್ತು ಎಕ್ಸಿಟ್ ಪೋಲ್ನ ಪ್ರಸಾರ ಹಾಗೂ ವಿಶ್ಲೇಷಣೆಗಳ ಮೇಲೆ ಈ ಅವಧಿಯಲ್ಲಿ ನಿರ್ಬಂಧ ಹೇರಲಾಗಿದೆ. ಅಭ್ಯರ್ಥಿಗಳ ಅಥವಾ ಪಕ್ಷದ ಸಂದರ್ಶನಗಳು ಮತ್ತು ಸುದ್ದಿ ಪ್ರಕಟಣೆಯನ್ನು ಈ ಅವಧಿಯಲ್ಲಿ ಪ್ರಸಾರ ಮಾಡಬಾರದಾಗಿ ಕೋರಲಾಗಿದೆ.
ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಆಯೋಗದ ನಿರ್ದೇಶನದಂತೆ ಜಿಲ್ಲಾ ಚುನಾವಣಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದು ಯಾವುದೇ ಸಮೀಕ್ಷೆಗಳನ್ನು ಪ್ರಕಟಿಸಲು ಅವಕಾಶ ಇಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ  ಹರ್ಷಗುಪ್ತ ಅವರು ಸ್ಪಷ್ಟ ಪಡಿಸಿದ್ದಾರೆ.ಮುದ್ರಣ ಮತ್ತು ದೃಶ್ಯ ಮಾಧ್ಯಮಗಳು ಈ ನಿಟ್ಟಿನಲ್ಲಿ ಜಿಲ್ಲಾಡಳಿತಕ್ಕೆ ಸಂಪೂರ್ಣ ಸಹಕಾರ ನೀಡಬೇಕೆಂದು ಅವರು ಸೂಚಿಸಿದ್ದಾರೆ.

ಮತದಾನ ಪ್ರಕ್ರಿಯೆಯಲ್ಲಿ ಯುವಜನತೆ

ಮಂಗಳೂರು, ಎಪ್ರಿಲ್.30:-ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ದಿನಾಂಕ 5-5-13 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯ ಪ್ರಕ್ರಿಯೆಯನ್ನು ಸೆರೆ ಹಿಡಿಯಲು ಮತ್ತು ಅಂತರ್ಜಾಲದಲ್ಲಿ ಅಳವಡಿಸಲು ಜಿಲ್ಲೆಯ ವಿವಿಧ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳ ಸೇವೆಯನ್ನು ಬಳಸಿಕೊಂಡು ವೆಬ್ ಕಾಸ್ಟಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ.  ಇದನ್ನು ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿನ ಕನಿಷ್ಟ 25 ಮತಗಟ್ಟೆಗಳಲ್ಲಿ ಅಳವಡಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಈ ವ್ಯವಸ್ಥೆಯ ಮೂಲಕ ಮತದಾನದ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ತರುವ ಮತ್ತು ಯುವಜನತೆಯನ್ನು ಮತದಾನದ ವ್ಯವಸ್ಥೆಯಲ್ಲಿ ಆಸಕ್ತಿ ಮೂಡಿಸುವಂತೆ ಮಾಡಲು ಈ ವ್ಯವಸ್ಥೆಯನ್ನು  ಜಿಲ್ಲಾಡಳಿತ ಕೈಗೊಂಡಿರುತ್ತದೆಯೆಂದು ದಕ್ಷಿಣಕನ್ನಡ  ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳು ತಿಳಿಸಿರುತ್ತಾರೆ.
ಮದ್ಯ ಮಾರಾಟ ನಿಷೇಧ:
ರಾಜ್ಯ ಚುನಾವಣಾ ಆಯೋಗವು ವಿಧಾನಸಭಾ ಸಾರ್ವತ್ರಿಕ ಚುನಾವಣೆ 2013 ನ್ನು ಘೋಷಿಸಿದ್ದು,ಇದಕ್ಕೆ ಸಂಬಂಧಿಸಿದಂತೆ ದಕ್ಷಿಣಕನ್ನಡ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಿಗೆ ದಿನಾಂಕ 5-5-13 ರಂದು ಮತದಾನ ಮತ್ತು ದಿನಾಂಕ 8-5-13 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.
     ಆದ್ದರಿಂದ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಹಾಗೂ ದಕ್ಷಿಣಕನ್ನಡ ಜಿಲ್ಲೆಯ ಗಡಿ ಪ್ರದೇಶದಿಂದ 3 ಕಿಲೋಮೀಟರ್ ಪರಿಧಿಯಲ್ಲಿ ದಿನಾಂಕ 3-5-13 ಸಂಜೆ 5.00 ಗಂಟೆಯಿಂದ ದಿನಾಂಕ 5-5-13 ರ ರಾತ್ರಿ 12.00 ಗಂಟೆಯ ವರೆಗೆ ಹಾಗೂ ಮತ ಎಣಿಕೆಯ ಸಲುವಾಗಿ ದಿನಾಂಕ 7-5-13 ರ ರಾತ್ರಿ 12.00 ಗಂಟೆಯಿಂದ 8-5-13 ರ ರಾತ್ರಿ 12.00 ಗಂಟೆಯ ವರೆಗಿನ ಅವಧಿಯನ್ನು ಮದ್ಯ ಮುಕ್ತ ದಿನಗಳೆಂದು (ಡ್ರೈಡೇಸ್) ಘೋಷಿಸಿ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಆದೇಶಿಸಿರುತ್ತಾರೆ.
 ಬೋಗಸ್ ಮತದಾನ ಕಡಿವಾಣಕ್ಕೆ ಕ್ರಮ:
ರಾಜ್ಯ ವಿಧಾಸಬಾ ಚುನಾವಣೆಯಲ್ಲಿ ಜಿಲ್ಲೆಯ ಮತದಾನ ಕೇಂದ್ರಗಳಲ್ಲಿ ಬೋಗಸ್ ಮತದಾನವಾಗುವುದನ್ನು ತಪ್ಪಿಸಲು ದಿನಾಂಕ 05-05-2013ರಂದು ನಡೆಯಲಿರುವ ಚುನಾವನಾ ಮತದಾರರ ಪಟ್ಟಿಯನ್ನು ಬಿ ಎಲ್ ಒ ರವರ ಮೂಲಕ ಪರಿಶೀಲಿಸಿದಾಗ, ಸದ್ರಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿರುವ ಮತದಾರರ ಪೈಕಿ ಸುಮಾರು 37904 ಗೈರು ಮತದಾರರ ಪಟ್ಟಿಯನ್ನು ತಯಾರಿಸಲಾಗಿದೆ.
      ಆದುದರಿಂದ ಬೋಗಸ್ ಮತದಾನವಾಗುದಕ್ಕೆ ಕಡಿವಾಣ ಹಾಕಲು, ಗೈರು ಮತದಾರರ ಪಟ್ಟಿಯನ್ನು ಚುನಾವಣೆಯ ದಿನಾಂಕದಂದು ಮತಗಟ್ಟೆಗಳಿಗೆ ಸರಬರಾಜು ಮಾಡಲಾಗುವುದು. ಹಾಗೂ ಗೈರು ಮತದಾರರ ಪಟ್ಟಿಯಲ್ಲಿರುವ ಮತದಾರರನ್ನು ಸರಿಯಾಗಿ ತನಿಖೆ ನಡೆಸಿ, ಅವರಿಗೆ ಮತದಾನದ ಹಕ್ಕು ನೀಡುವ ಅಥವಾ ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ಎಲ್ಲಾ ಅಧ್ಯಕ್ಷಾಧಿಕಾರಿಗಳಿಗೆ ಸೂಕ್ತ ತರಬೇತಿಯನ್ನು ನೀಡಲಾಗಿದೆ ಎಂದು ಹರ್ಷಗುಪ್ತ ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ,ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಇವರು ತಿಳಿಸಿದ್ದಾರೆ.
       ಗೈರು ಮತದಾರರ ತಾಲ್ಲೂಕುವಾರು ವಿವರ ಇಂತಿದೆ; ಬೆಳ್ತಂಗಡಿ 4259, ಮೂಡಬಿದ್ರಿ 5255, ಮಂಗಳೂರುನಗರ ಉತ್ತರ 4775, ಮಂಗಳೂರು ನಗರ ದಕ್ಷಿಣ 10724, ಮಂಗಳೂರು 4959, ಬಂಟವಾಳ 3195, ಪುತ್ತೂರು 1981 ಹಾಗೂ ಸುಳ್ಯ 2756.   
 

ಮತದಾರರ ಜಾಗೃತಿ ಆಂದೋಲನ ಜನ ಸಾಮಾನ್ಯರ ಶಕ್ತಿ - ಮತದಾನದ ಹಕ್ಕು:
ಅಪ್ನಾದೇಶ್ ಮಾದರಿ ಗ್ರಾಮಾಭಿವೃದ್ಧಿ ಆಂದೋಲನ, ಜನ ಶಿಕ್ಷಣ ಟ್ರಸ್ಟ್, ಗ್ರಾಮ ವಿಕಾಸ ಕೇಂದ್ರ ಹಾಗೂ ಗ್ರಾಮ ಪಂಚಾಯತ್ಗಳ ಸಹಭಾಗಿತ್ವದಲ್ಲಿ ವಿವಿದೆಡೆ ನಡೆದ ಮತದಾರರ ಜಾಗೃತಿ ಅಭಿಯಾನದಲ್ಲಿ ಶೀನಶೆಟ್ಟಿ, ನರೇಗಾ ಒಂಬುಡ್ಸ್ಮನ್ರವರು ಭಾಗವಹಿಸಿ ಮಾಹಿತಿ ನೀಡಿದರು.
ಬಂಟ್ಟಾಳ ತಾಲೂಕಿನ ನರಿಂಗಾನ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೊಟ್ಟೊಳಿಕೆ ಆದಿವಾಸಿ ಪ್ರದೇಶ ಮತ್ತು ಜನತಾ ನಿವೇಶನ ವ್ಯಾಪ್ತಿಯಲ್ಲಿ ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಆದಿವಾಸಿ ಜನರ ಜಾಗೃತಿ ಜಾಥ ಇತ್ತೀಚೆಗೆ ನಡೆಯಿತು. ನರೇಗಾ ಒಂಬುಡ್ಸ್ಮನ್ ಶೀನ ಶೆಟ್ಟಿ ಮತದಾನದ ಮಹತ್ವ ಮತ್ತು ಅಗತ್ಯದ ಬಗ್ಗೆ ಮಾಹಿತಿ ನೀಡಿದರು. ಜನ ಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ, ಸಂಯೋಜಕಿ ಲಾವಣ್ಯ ಹಾಗೂ ಆದಿವಾಸಿ ಮುಖಂಡರಾದ ಬೇಬಿ, ಬಾಬು, ಮುದರ, ಶೇಖರ ಮತ್ತಿತರರು ಭಾಗವಹಿಸಿದ್ದರು.
    ಬಂಟ್ಟಾಳ ತಾಲೂಕಿನ ಕನ್ಯಾನ ಗ್ರಾಮ ಪಂಚಾಯತ್ ವ್ಯಾಪ್ತಿಯ ಜನತಾ ನಿವೇಶನದಲ್ಲಿ ಮತದಾರರ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಆದಿವಾಸಿ ಮುಖಂಡರಾರ ಸುಂದರಿ, ಅಂಗಾರೆ, ಪಂಚಾಯತ್ ಸಿಬ್ಬಂದಿ ಪಾರ್ವತಿ ಮೊದಲಾದವರು ಭಾಗವಹಿಸಿ ಸಹಕರಿಸಿದ್ದರು.
ಮಂಗಳೂರು ತಾಲೂಕಿನ ಮುನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಹಿಳಾ ಜಾಗೃತಿ ವೇದಿಕೆಯ ಮಾಸಿಕ ಪ್ರೇರಣಾ ಶಿಬಿರದಲ್ಲಿ ಮತದಾನದ ಮಹತ್ವದ ಬಗ್ಗೆ ಮಾಹಿತಿ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಜನ ಶಿಕ್ಷಣ ಟ್ರಸ್ಟ್ ಸಂಯೋಜಕಿ ಚಂಚಲ, ಮಹಿಳಾ ಜಾಗೃತಿ ವೇದಿಕೆಯ ಮುಖಂಡರಾದ ಶಶಿಕಲ, ಮಾಲತಿ, ಯಮುನ, ಪಂಪಾವತಿ, ತುಳಸಿ ಮೊದಲಾದವರು ಮಾಹಿತಿ/ಜಾಗೃತಿ ಕಾರ್ಯಕ್ರಮಕ್ಕೆ ಸಹಕರಿಸಿದ್ದರೆಂದು ಜನಶಿಕ್ಷಣ ಟ್ರಸ್ಟ್ನ     ನಿರ್ದೇಶಕರುತಿಳಿಸಿರುತ್ತಾರೆ.
                                       

Daily report on Voilation of Model Code of Conduct

please click here

Monday, April 29, 2013

1077ಗೆ ಎಲ್ಲಾ ದೂರವಾಣಿಗಳಿಂದಲೂ ಕರೆಗೆ ಅವಕಾಶ


ಮತದಾನಕ್ಕೆ ಮತದಾರರ ಪಟ್ಟಿಯಲ್ಲಿ ಹೆಸರು ಕಡ್ಡಾಯ-ಹರ್ಷಗುಪ್ತಾ

ಮಂಗಳೂರು, ಎಪ್ರಿಲ್. 29:-ಮೇ 5ರ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರಿದ್ದರೆ ಮಾತ್ರ ಮತದಾನಕ್ಕೆ ಅವಕಾಶ ಎಂದು ದಕ್ಷಿಣಕನ್ನಡ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ  ಹರ್ಷಗುಪ್ತಾ ಅವರು ಸ್ಪಷ್ಟಪಡಿಸಿದ್ದಾರೆ.
        ಅವರು ಇಂದು ಜಿಲ್ಲೆಯ ವಿಧಾನಸಭಾ ಚುನಾವಣೆಯಲ್ಲಿ ಕಾರ್ಯ ನಿರ್ವಹಿಸಲಿರುವ ಚುನಾವಣಾ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದ್ದು, ಎಲ್ಲಾ ತರಬೇತಿ ಕೇಂದ್ರಗಳಿಗೆ ಖುದ್ದು ತೆರಳಲು ಸಾಧ್ಯವಾಗದ ಕಾರಣ ವಿವಿಧ ತರಬೇತಿಕೇಂದ್ರಗಳ ಚುನಾವಣಾ ಸಿಬ್ಬಂದಿಗಳನ್ನು ತಮ್ಮ ಕಚೇರಿಯಿಂದಲೇ ವಯರ್ ಲೆಸ್ ಮೂಲಕ ಏಕಕಾಲಕ್ಕೆ ಸಂಪರ್ಕ ಪಡೆದು ಮಾತನಾಡಿದರು.
ಫೋಟೋ ಇರುವ ಎಪಿಕ್ ಕಾರ್ಡ್  ಇದ್ದು,ಅಂತಹವರ ಹೆಸರು ಮತದಾರರ ಪಟ್ಟಿಯಲ್ಲಿ  ಇಲ್ಲದಿದ್ದರೆ ಅವರಿಗೆ ಮತದಾನಕ್ಕೆ ಅವಕಾಶ ನೀಡಬಾರದು.ಮತದಾರರ ಪಟ್ಟಿಯಲ್ಲಿ ಹೆಸರಿದ್ದು,23 ಗುರುತಿನ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಮತಗಟ್ಟೆ ಅಧಿಕಾರಿಗಳಿಗೆ ಸಲ್ಲಿಸದ್ದಿದ್ದಲ್ಲಿ, ಅಂತಹವರಿಗೂ ಮತದಾನಕ್ಕೆ ಅವಕಾಶ ನೀಡದಿರಲು ಜಿಲ್ಲಾ ಚುನಾವಣಾಧಿಕಾರಿಗಳು ಸೂಚಿಸಿದ್ದಾರೆ.
ಚುನಾವಣೆ ಕಾರ್ಯಕ್ಕೆ ನಿಯೋಜಿಸಿರುವ ಎಲ್ಲಾ ಸಿಬ್ಬಂದಿಗಳು ನಿರ್ಭೀತಿಯಿಂದ ನ್ಯಾಯಯುತ,ನಿಷ್ಪಕ್ಷಪಾತವಾಗಿ ಹಾಗೂ ಇತರರಿಗೆ ಮಾದರಿಯಾಗುವಂತೆ ತಮ್ಮ ಚುನಾವಣಾ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸುವಂತೆ ಕರೆ ನೀಡುವ ಮೂಲಕ ಸಿಬ್ಬಂದಿಗಳಲ್ಲಿ ಹುರುಪು ವಿಶ್ವಾಸ ತುಂಬಿದರು.ಜಿಲ್ಲಾಡಳಿತ ಚುನಾವಣಾ ಸಿಬ್ಬಂದಿಗಳ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ಸನ್ನದ್ಧವಾಗಿದೆ.ಆದಕಾರಣ ಸಿಬ್ಬಂದಿಗಳು ಚುನಾವಣೆ ಕಾರ್ಯಕ್ಕೆ ಸಂಬಂಧಿಸಿದ ತಮ್ಮ ದೂರುಗಳನ್ನು ದೂರವಾಣಿ ಸಂಖ್ಯೆ 1077 ಕ್ಕೆ ಕರೆಮಾಡಿ ಸಲ್ಲಿಸಬಹುದಾಗಿದೆ.  ಪೋಲೀಸ್ ,ಅರೆಸೇನಾ ಪಡೆ ಇನ್ನಿತರೆ ಸಿಬ್ಬಂದಿಯನ್ನು ರಕ್ಷಣಾ ಕಾರ್ಯಕ್ಕೆ ನಿಯೋಜಿಸಿರುವ ಕಾರಣ ಕಾನೂನು ಸುವ್ಯವಸ್ಥೆ ಸಮಸ್ಯೆ ತಲೆದೋರುವುದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಚುನಾವಣೆ ಕಾರ್ಯದಲ್ಲಿ  ಯಾವುದೇ ಚುನಾವಣಾ ನೀತಿ ಉಲ್ಲಂಘನೆಯಂತಹ ಘಟನೆಗಳು ಕಂಡುಬಂದಲ್ಲಿ ಕೂಡಲೇ 1077 ಕ್ಕೆ ಪೋನ್ ಮೂಲಕ ತಿಳಿಸಲು ಸೂಚಿಸಿದ್ದಲ್ಲದೆ,ಸಿಬ್ಬಂದಿಗಳು ಯಾವ ದಾಕ್ಷಿಣ್ಯಕ್ಕೂ ಒಳಗಾಗದೇ ಆತ್ಮವಿಶ್ವಾಸದಿಂದ ಕಾರ್ಯಾಚರಿಸುವಂತೆ ಕರೆ ನೀಡಿದರು. ಚುನಾವಣಾ ಸಿಬ್ಬಂದಿಗಳಿಗೆ ಮತಗಟ್ಟೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ,ಕುರ್ಚಿಗಳ ವ್ಯವಸ್ಥೆ ಕಲ್ಪಿಸುವಂತೆ ಸಂಬಂಧಿಸಿದ ಕ್ಷೇತ್ರದ ಚುನಾವಣಾಧಿಕಾರಿಗಳಿಗೆ ಸೂಚಿಸಿದ ಜಿಲ್ಲಾ ಚುನಾವಣಾಧಿಕಾರಿಗಳು,ಮೇ 4 ಹಾಗೂ ಮೇ 5 ರಂದು ಚುನಾವಣಾ ಸಿಬಂದಿಗಳು ಆವಶ್ಯಕತೆ ಇದ್ದರೆ ಊಟ ,ತಿಂಡಿ,ಕಾಫಿ ವ್ಯವಸ್ಥೆ ಮುಂಚಿತವಾಗಿ ಆಯಾ ಮತಗಟ್ಟೆ ವ್ಯಾಪ್ತಿಯ ಕಂದಾಯ ನಿರೀಕ್ಷಕರಿಗೆ ತಿಳಿಸಿದಲ್ಲಿ ವ್ಯವಸ್ಥೆಯನ್ನು ಮಾಡಲಿದ್ದು ಇದರ ವೆಚ್ಚವನ್ನು ಸಿಬ್ಬಂದಿಯ ಚುನಾವನಾ ಕಾರ್ಯ ಗೌರವಧನದಲ್ಲಿ ಕಡಿತಗೊಳಿಸಲಾಗುವುದೆಂದರು.ಚುನಾವಣಾ ಸಿಬ್ಬಂದಿ ಮಸ್ಟರಿಂಗ್ ದಿನ ಮೇ 4 ರಂದು ಬೆಳಿಗ್ಗೆ 6.30 ಗಂಟೆಗೆ ಸರಿಯಾಗಿ ಮಸ್ಟರಿಂಗ್ ಸ್ಥಳದಲ್ಲಿ ಕಡ್ಡಾಯವಾಗಿ ಹಾಜರಿರಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ಅಂಧ ಮತ್ತು ಅಶಕ್ತ ಮತದಾರರ ಸಹಾಯಕ್ಕಾಗಿ ಜೊತೆಯಲ್ಲಿ ಒಬ್ಬರು ಸಹಾಯಕರನ್ನು ಮತಗಟ್ಟೆಗೆ ಕರೆದೊಯ್ಯಲು ಅವಕಾಶವಿದೆ ಎಂದರು.
ಸಿಬ್ಬಂದಿಗಳಿಗೆ ಮತಗಟ್ಟೆಗಳಲ್ಲಿ ಏನಾದರೂ ಸಣ್ಣಪುಟ್ಟ ಲೋಪಗಳಿದ್ದರೂ ಅವುಗಳನ್ನು ನಿವಾರಿಸಿಕೊಂಡು ಚುನಾವಣಾ ಕಾರ್ಯವನ್ನು ಒಮ್ಮತದಿಂದ ಸಮರ್ಪಕವಾಗಿ ನಿರ್ವಹಿಸುವಂತೆ ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾ ಚುನಾವಣಾಧಿಕಾರಿಗಳ ಜೊತೆಯಲ್ಲಿ ಮಂಗಳೂರು ಮಹಾನಗರಪಾಲಿಕೆ ಆಯುಕ್ತ ಡಾ. ಹರೀಶ್ ಕುಮಾರ್ ಉಪಸ್ಥಿತರಿದ್ದರು.   

Daily report on voilation of Model Code of Conductp

please click here

Daily report on voilation of Model Code of Conduct.p

please click here

Sunday, April 28, 2013

ಪಣಂಬೂರು ಕಡಲಕಿನಾರೆಯಲ್ಲಿ ಮತದಾನ ಜಾಗೃತಿ

ಮಂಗಳೂರು, ಎಪ್ರಿಲ್. 28:- ಎಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಪ್ರಜಾಪ್ರಭುತ್ವ ತತ್ವ ಸಿದ್ದಾಂತಗಳ ಸಮರ್ಪಕ ಅನುಷ್ಟಾನಕ್ಕೆ ನಾಂದಿಯಾಗಬೇಕೆಂಬ ಭಾರತ ಚುನಾವಣಾ ಆಶಯದಂತೆ ಸ್ವೀಪ್ ಕಾರ್ಯಕ್ರಮದಡಿ ಇಂದು ಮಂಗಳೂರಿನ ಪಣಂಬೂರು ಕಡಲಕಿನಾರೆಯಲ್ಲಿ ಜಿಲ್ಲಾಡಳಿತ ಮತ್ತು ಬೀಚ್ ಡೆವಲಪ್ಮೆಂಟ್ ಇವರ ಸಹಯೋಗದಲ್ಲಿ ನಡೆದ ಗಾಳಿಪಟವನ್ನು ಹಾರಿಸುವ ಮುಖಾಂತರ ಮತದಾನ ಜಾಗೃತಿಗೆ ಚಾಲನೆ ನೀಡಿದರು.
      ಈ ಕಾರ್ಯ ಕ್ರಮ ದಲ್ಲಿ ಭಾಗ ವಹಿ ಸಿದ್ದ ಜಿಲ್ಲಾ ಚುನಾ ವಣಾ ಧಿಕಾರಿ ಹಾಗೂ ಜಿಲ್ಲಾ ದಂಡಾ ಧಿಕಾ ರಿಗ ಳಾದ ಹರ್ಷ ಗುಪ್ತ ಅವರು ಮಾತ ನಾಡಿ, ಪ್ರತಿ ಯೊಬ್ಬರೂ ಮತದಾನ ಮಾಡುವ ಮೂಲಕ ಉತ್ತಮ ಸರ್ಕಾರ ರಚನೆ ಯಂತಹ ಪ್ರಜಾಸತ್ತಾತ್ಮಕ ಕಾರ್ಯದಲ್ಲಿ ಪಾಲ್ಗೊಳ್ಳಬೇಕೆಂದು  ಜನತೆಗೆ ಕರೆ ನೀಡಿದ್ದಾರೆ.
     ಮಕ್ಕಳ ಮೂಲಕ ಮತ ದಾನದ ಅರಿವು ಮೂಡಿ ಸುವ ವಿನೂ ತನ ಕಾರ್ಯ ಕ್ರಮ ದಲ್ಲಿ ಮಕ್ಕ ಳಿಂದ ಪೋಷ ಕರಿಗೆ ಅರಿವು ಮೂಡಿ ಸುವ ಪ್ರಯ ತ್ನವೂ ನಡೆ ಯಿತು. ಮೇ ಐದರ ಮತ ದಾನ ಮಿಸ್ ಮಾಡ ಬೇಡಿ ಎಂದು ಮಕ್ಕಳು ಘೋಷಣೆ ಗಳನ್ನು  ಕೂಗಿ ದರು. ತಮ್ಮ ಹೆತ್ತವ ರನ್ನು ಮತ ದಾನಕ್ಕೆ ಅಂದು ಕಳು ಹಿಸುವ ಪ್ರತಿಜ್ಞೆ ಯನ್ನು ಮಾಡಿದರು. ಮಕ್ಕಳಿಗಾಗಿ ಈ ಸಂಧರ್ಭದಲ್ಲಿ ವಿವಿಧ ಆಟೋಟಗಳನ್ನು ಏರ್ಪಡಿಸಿ  ಬಹುಮಾನಗಳನ್ನು,  ಗಣ್ಯರಿಂದ ವಿತರಿಸುವ ಕಾರ್ಯಕ್ರಮವೂ ನಡೆಯಿತು. ಕಾರ್ಯಕ್ರಮದಲ್ಲಿ ಸಿಡಿಪಿಒ  ಶ್ಯಾಮಲ, ಎ ಎಸ್ ಗೋಪಾಲಕೃಷ್ಣ ಹಾಗೂ ಇತರ ಅಧಿಕಾರಿಗಳು ಪಾಲ್ಗೊಂಡಿದ್ದರು. ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ||ಕೆ.ಎನ್.ವಿಜಯಪ್ರಕಾಶ್, ಮಂಗಳೂರು ಮಹಾನಗರಪಾಲಿಕೆ ಆಯುಕ್ತರಾದ ಡಾ||ಹರೀಶ್ ಕುಮಾರ್ ಮುಂತಾದವರು ಹಾಜರಿದ್ದರು. ಮದು ಮತ್ತು ವಿಸ್ಮಯ ವಿನಾಯಕ್ ಅವರು ಮಕ್ಕಳಿಗೆ ಆಟೋಟಗಳನ್ನು ಹಾಗೂ ಪ್ರಾಣಿ ಪಕ್ಷಿಗಳ ಅನುಕರಣೆ ಮುಂತಾದ ಮನರಂಜನೆ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಪ್ರಕಟಣೆ


ಚುನಾವಣಾ ದೂರು ದಾಖಲಿಸಲು ಮತ್ತೊಂದು ದೂರವಾಣಿ ಸಂಖ್ಯೆ


Daily report on voilation of Model Code of Conductp

lease click here

Daily report on voilation of Model Code of Conduct...p

please click here

Saturday, April 27, 2013

ಶಿಸ್ತುಬದ್ಧ ಆಕರ್ಷಕ ಮತದಾರರ ಜಾಗೃತಿ ಜಾಥಾ

ಮಂಗಳೂರು, ಎಪ್ರಿಲ್. 27:-ಮತದಾರರಲ್ಲಿ ಅವರ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ,ತಾಲೂಕು ಮತ್ತು ಗ್ರಾಮ ಪಂಚಾಯತ್ ಗಳು ಬೆಳ್ ತಂಗಡಿ ತಾಲೂ ಕಿನಾ ದ್ಯಂತ ಹಮ್ಮಿ ಕೊಂಡಿದ್ದ ಮತ ದಾರರ ಜಾಥಾ ಸಮಾ ರೋಪವು ನೂರಾರು ವಾಹನ ಗಳಲ್ಲಿ ಅಧಿ ಕಾರಿ ಗಳು ಸಾರ್ವ ಜನಿಕರು ಹೆಚ್ಚಿನ ಉತ್ಸಾಹ ದಿಂದ ಪಾಲ್ಗೊಂ ಡಿದ್ದರು. ಬೆಳ್ತಂ ಗಡಿ ಪೇಟೆ ಯಿಂದ ಕಕ್ಕಿಂಜೆ ವರೆಗೆ ನಡೆದ ಮತ ದಾರರ ಜಾಥಾ ಮೆರ ವಣಿಗೆ ಅತ್ಯಾ ಕರ್ಷಕ ವಾಗಿ ಜನ ರನ್ನು ರಂಜಿ ಸಿತು.
ಜಾಥಾ ಮೆರ ವಣಿಗೆ ನಂತರ ಸಮಾ ರೋಪ ಭಾಷಣ ಮಾಡಿದ ಜಿಲ್ಲಾ ಪಂಚಾ ಯತ್ ಮುಖ್ಯ ಕಾರ್ಯ ನಿರ್ವ ಹಣಾ ಧಿಕಾರಿ ಡಾ .ಕೆ.ಎನ್.ವಿಜಯ ಪ್ರಕಾಶ್ ಅವರು ಮಾತ ನಾಡಿ ಪ್ರತಿ ಯೊಬ್ಬ ನಾಗರೀ ಕನೂ ತನ್ನ ಮತ ದಾನದ ಹಕ್ಕನ್ನು ಚಲಾ ಯಿಸಿ ಪರಿಣಾ ಮಕಾರಿ ಆಡ ಳಿತ ನೀಡುವ ಮೂಲಕ ಸರ್ಕಾರ ರಚನೆ ಯಲ್ಲಿ ಭಾಗ ವಹಿಸಿ ದೇಶದ ಅಭಿ ವೃದ್ಧಿಗೆ ನಾಂದಿ ಹಾಡ ಬೇಕೆಂದು ಕರೆ ಯಿತ್ತರು.
ತಹಶೀಲ್ದಾರ್ ಶ್ರೀನಿವಾಸ್,ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನರೇಂದ್ರ,ಕ್ಷೇತ್ರ ಶಿಕ್ಷಣಾಧಿಕಾರಿ ಸುಮಂಗಲಾ.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪುಟ್ಟಸ್ವಾಮಿ,ತಾಲೂಕು ಆರೋಗ್ಯಾಧಿಕಾರಿ ಡಾ.ಕಲಾಮಧು ವೇದಿಕೆಯಲ್ಲಿದ್ದರು.
ಲಾಯಿಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ಸ್ವಾಗತಿಸಿದರು. ತಾಲೂಕು ಪಂಚಾಯತ್ ಸಂಯೋಜಕ ಜಯಾನಂದ ಲಾಯಿಲಾ ಕಾರ್ಯಕ್ರಮ ನಿರ್ವಹಿಸಿದರು.  ಅಧಿಕಾರಿಗಳಾದ ಡಾ.ಸುಧಾಕರ ಶೆಟ್ಟಿ,ಪ್ರವೀಣ್ ಕುಮಾರ್ ಶೆಟ್ಟಿ ,ಸುಭಾಶ್ಚಂದ್ರ ಹಾಗೂ ವಿವಿಧ ಇಲಾಖೆಗಳ ಮುಖ್ಯಸ್ಥರು ಜಾಥಾದಲ್ಲಿ ಪಾಲ್ಗೊಂಡರು.

Friday, April 26, 2013

3 ಲಕ್ಷ ಮಕ್ಕಳು ಮತದಾನ ಜಾಗೃತಿ ಕಾರ್ಯದಲ್ಲಿ

ಮಂಗಳೂರು, ಎಪ್ರಿಲ್. 26:-ಮತದಾರರ ಕ್ರಮಬದ್ಧ ಶಿಕ್ಷಣ ಹಾಗೂ ಮತದಾರರು ಚುನಾವಣೆಯಲ್ಲಿ ಭಾಗವಹಿಸುವ ಕಾರ್ಯಕ್ರಮ ಸ್ವೀಪ್(Systamatic voters education and electorals participation- sveep) ಯೋಜನೆಯಡಿ ದಕ್ಷಿಣಕನ್ನಡ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯು ಸಮುದಾಯದತ್ತ ಶಾಲೆ ಯೋಜನೆಯಡಿ ಎಲ್ಲಾ ಶಾಲೆಗಳಲ್ಲಿ 3 ಲಕ್ಷ ಮಕ್ಕಳಿಂದ ಮತದಾರರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತೆಂದು ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಸ್ವೀಪ್ ಯೋಜನೆಯ ಅಧ್ಯಕ್ಷರಾದ ಡಾ.ಕೆ.ವಿ.ವಿಜಯಪ್ರಕಾಶ್ ಅವರು ತಿಳಿಸಿದ್ದಾರೆ.
           ಅವರು ಇಂದು ತಮ್ಮ ಕಚೇರಿಯ ಮಿನಿ ಸಭಾಂಗಣದಲ್ಲಿ ಸ್ವೀಪ್ ಅನುಷ್ಠಾನದ ಪ್ರಗತಿ ಪರಿಶೀಲನೆ ನಡೆಸಿದರು.
        ನಿರಂತರವಾಗಿ ಕಾರ್ಯ ನಿರ್ವಹಿಸುವ ಕಾರ್ಖಾನೆಗಳಾದ ಎಂಆರ್ ಪಿ ಎಲ್ ,ಎಂಸಿಎಫ್,ಇನ್ನಿತರೆ ಕಾರ್ಖಾನೆಗಳ ಕಾರ್ಮಿಕರಿಗೆ ಮೇ 5 ರ ಚುನಾವಣೆಯಲ್ಲಿ ಮತ ಚಲಾಯಿಸಲು ಅನುಮತಿ ನೀಡಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ 34 ಕಾರ್ಖಾನೆಗಳ 2161 ಕಾರ್ಮಿಕರಿಗೆ ಮತದಾನದ  ಕುರಿತು ಜಾಗೃತಿ ಮೂಡಿಸಲಾಗಿದೆ. 998 ಮಂದಿ ಮತದಾನ ಮಾಡುವ ವಾಗ್ದಾನ ಕೈಗೊಂಡಿದ್ದಾರೆ ಎಂದು ಫ್ಯಾಕ್ಟರೀಸ್ ಆಂಡ್ ಬಾಯ್ಲರ್ಸ್ ಇಲಾಖೆ ಅಧಿಕಾರಿ ಅಧ್ಯಕ್ಷರಿಗೆ ತಿಳಿಸಿದರು.
     ಕೃಷಿ, ತೋಟಗಾರಿಕೆ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕೆಎಂಎಫ್,ಆರೋಗ್ಯ ಮುಂತಾದ ಇಲಾಖೆಗಳು  ಸಹ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಸ್ವೀಪ್ ಕಾರ್ಯಕ್ರಮ ಮುಖಾಂತರ ಮತದಾರರ ಜಾಗೃತಿ ಉಂಟುಮಾಡಿದೆ ಎಂದು ತಿಳಿಸಿದರು.
         ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸ್ವೀಪ್ ಕಾರ್ಯಕ್ರಮ ಅತ್ಯುತ್ತಮವಾಗಿ ಅನುಷ್ಠಾನವಾಗುತ್ತಿರುವ ಬಗ್ಗೆ ಭಾರತ ಚುನಾವಣಾ ಆಯುಕ್ತರು ಪ್ರಶಂಸೆ ಮಾಡಿದ್ದಾರೆ. ಆದ್ದರಿಂದ  ಈ ಬಾರಿ ಜಿಲ್ಲೆಯಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ಮತದಾನ ಆಗುವಂತೆ ಎಲ್ಲರೂ ಕಾಯರ್ೋನ್ಮುಖರಾಗಲು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ತಿಳಿಸಿದ್ದಾರೆ.
        ಸಭೆಯಲ್ಲಿ ಮಹಾನಗರಪಾಲಿಕೆಯ ಆಯುಕ್ತರಾದ ಡಾ. ಹರೀಶ್ ಕುಮಾರ್,ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ  ಮಲ್ಲಿಕಾರ್ಜುನ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಮೋಸೆಸ್ ಜಯಶೇಖರ್ ಮುಂತಾದವರು ಹಾಜರಿದ್ದರು.

ಶಿಸ್ತುಬದ್ಧ ಆಕರ್ಷಕ ಮತದಾರರ ಜಾಗೃತಿ ಜಾಥಾ

ಮಂಗಳೂರು, ಎಪ್ರಿಲ್. 26:-ಮತದಾರರಲ್ಲಿ ಅವರ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ,ತಾಲೂಕು ಮತ್ತು ಗ್ರಾಮ ಪಂಚಾಯತ್ ಗಳು ಬೆಳ್ತಂಗಡಿ ತಾಲೂಕಿನಾದ್ಯಂತ ಹಮ್ಮಿಕೊಂಡಿದ್ದ ಮತದಾರರ ಜಾಥಾ ಸಮಾರೋಪವು ನೂರಾರು ವಾಹನಗಳಲ್ಲಿ ಅಧಿಕಾರಿಗಳು ಸಾರ್ವಜನಿಕರು ಹೆಚ್ಚಿನ ಉತ್ಸಾಹದಿಂದ ಪಾಲ್ಗೊಂಡಿದ್ದರು. ಬೆಳ್ತಂಗಡಿ ಪೇಟೆಯಿಂದ ಕಕ್ಕಿಂಜೆ ವರೆಗೆ ನಡೆದ ಮತದಾರರ ಜಾಥಾ ಮೆರವಣಿಗೆ ಅತ್ಯಾಕರ್ಷಕವಾಗಿ ಜನರನ್ನು ರಂಜಿಸಿತು.
ಜಾಥಾ ಮೆರವಣಿಗೆ ನಂತರ ಸಮಾರೋಪ ಭಾಷಣ ಮಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ . ಕೆ.ಎನ್.ವಿಜಯಪ್ರಕಾಶ್ ಅವರು ಮಾತನಾಡಿ ಪ್ರತಿಯೊಬ್ಬ ನಾಗರೀಕನೂ ತನ್ನ ಮತದಾನದ ಹಕ್ಕನ್ನು ಚಲಾಯಿಸಿ ಪರಿಣಾಮಕಾರಿ ಆಡಳಿತ ನೀಡುವ ಮೂಲಕ ಸರ್ಕಾರ ರಚನೆಯಲ್ಲಿ ಭಾಗವಹಿಸಿ ದೇಶದ ಅಭಿವೃದ್ಧಿಗೆ ನಾಂದಿ ಹಾಡಬೇಕೆಂದು ಕರೆಯಿತ್ತರು.
ತಹಶೀಲ್ದಾರ್ ಶ್ರೀನಿವಾಸ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನರೇಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ಸುಮಂಗಲಾ.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪುಟ್ಟಸ್ವಾಮಿ,ತಾಲೂಕು ಆರೋಗ್ಯಾಧಿಕಾರಿ ಡಾ.ಕಲಾಮಧು ವೇದಿಕೆಯಲ್ಲಿದ್ದರು.
ಲಾಯಿಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ಸ್ವಾಗತಿಸಿದರು. ತಾಲೂಕು ಪಂಚಾಯತ್ ಸಂಯೋಜಕ ಜಯಾನಂದ ಲಾಯಿಲಾ ಕಾರ್ಯಕ್ರಮ ನಿರ್ವಹಿಸಿದರು.  ಅಧಿಕಾರಿಗಳಾದ ಡಾ.ಸುಧಾಕರ ಶೆಟ್ಟಿ,ಪ್ರವೀಣ್ ಕುಮಾರ್ ಶೆಟ್ಟಿ, ಸುಭಾಶ್ಚಂದ್ರ ಹಾಗೂ ವಿವಿಧ ಇಲಾಖೆಗಳ ಮುಖ್ಯಸ್ಥರು ಜಾಥಾದಲ್ಲಿ ಪಾಲ್ಗೊಂಡರು.

ಚುನಾವಣಾ ದೂರುಗಳನ್ನು ಎಸ್.ಎಂ.ಎಸ್ ಮಾಡಿ


ಮಂಗಳೂರು, ಎಪ್ರಿಲ್. 26:-ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ದೂರುಗಳನ್ನು ಸಾರ್ವಜನಿಕರು,ಅಭ್ಯರ್ಥಿಗಳು ತಮ್ಮ ಮೊಬೈಲ್ ಮೂಲಕ 8123666266 ಸಂಖ್ಯೆಗೆ ಎಸ್ಎಂಎಸ್ ಮಾಡುವ ಮೂಲಕ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ದೂರುಗಳನ್ನು ಎಸ್ಎಂಎಸ್ ಮಾಡಬಹುದಾಗಿದೆ.

Daily report on voilation of Model Code of Conduct.

please click here

Thursday, April 25, 2013

ಶಾಂತ ಮತ್ತು ನ್ಯಾಯಯುತ ಚುನಾವಣೆಗೆ ಜಿಲ್ಲಾಡಳಿತ ಸಜ್ಜು: ಜಿಲ್ಲಾಧಿಕಾರಿ

ಮಂಗಳೂರು, ಏಪ್ರಿಲ್. 25.: ರಾಜ್ಯ ವಿಧಾನಸಭಾ ಚುನಾವಣೆ -2013 ನ್ನು ನಿಷ್ಪಕ್ಷಪಾತ ಹಾಗೂ ನ್ಯಾಯಯುತವಾಗಿ ನಡೆಸಲು ಸಮಗ್ರ ಜಿಲ್ಲಾಡಳಿತ ಕಾರ್ಯೋನ್ಮುಖವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹರ್ಷಗುಪ್ತ ಅವರು ಹೇಳಿದರು.
                 ಇಂದು ಮಂಗಳೂರು ಆಕಾಶವಾಣಿಯಲ್ಲಿ ನೇರಫೋನ್ ಇನ್ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಜಿಲ್ಲೆಯಾದ್ಯಂತ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನಿಗಾ ವಹಿಸಲು 2,500 ಅಧಿಕಾರಿಗಳು ಕಾರ್ಯತತ್ಪರರಾಗಿದ್ದಾರೆ.
          ಚುನಾವಣಾ ಕೆಲಸದಲ್ಲಿ ನಿರತವಾಗಿರುವ ಸುಮಾರು 8,500 ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮೊದಲ ಸುತ್ತಿನ ತರಬೇತಿ ನೀಡಲಾಗಿದೆ. ಜನರ ಸಮಸ್ಯೆಗೆ ಸ್ಪಂದಿಸಲು ಹಾಗೂ ಚುನಾವಣೆ ಸಂಬಂಧಿ ಯಾವುದೇ ದೂರುಗಳನ್ನು ಸ್ವೀಕರಿಸಲು ಜಿಲ್ಲಾ ಕಂಟ್ರೋಲ್ ರೂಮ್ 1077 ಸ್ಥಾಪಿಸಲಾಗಿದೆ.
ಮತದಾನದ ಪ್ರಮಾಣದಲ್ಲಿ ಹೆಚ್ಚಳ ದಾಖಲಿಸಲು ಮತದಾರರಲ್ಲಿ ಜಾಗೃತಿ ಮೂಡಿಸಲು ವಿಶೇಷ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಗೌಪ್ಯ ಮತದಾನಕ್ಕೆ ಹಾಗೂ ಯಾವುದೇ ಆಮಿಷಗಳಿಗೆ ಮತ್ತು ಬೆದರಿಕೆಗೆ ಮಣಿದು ಮತದಾನ ಮಾಡದಿರಲು ಮತಗಟ್ಟೆಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಎಲ್ಲದಕ್ಕೂ ಪುರಾವೆ ಬೇಕಿರುವುದಕ್ಕೆ ವಿಡಿಯೊಗ್ರಫಿ ನಡೆಯಲಿದೆ ಎಂದು ಕೇಳುಗಳ ಪ್ರಶ್ನೆಗೆ ಜಿಲ್ಲಾಧಿಕಾರಿಗಳು ಉತ್ತರಿಸಿದರು.
ಬಿಎಲ್ ಒ ಗಳು ವೋಟರ್ ಸ್ಲಿಪ್ ವಿತರಿಸುವಲ್ಲಿ ಯಾವುದೇ ನ್ಯೂನತೆಗಳಿಗೆ ಅವಕಾಶ ನೀಡದಿರಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಒಂದು ವೇಳೆ ಅಕಸ್ಮಾತ್ ಆಗಿ ವಿತರಣೆಯಲ್ಲಿ ತೊಂದರೆಯಾದರೂ ಮತದಾನದಂದು ಬಿಎಲ್ ಒಗಳ ಮತದಾನ ಕೇಂದ್ರದ ಬಳಿ ಇರುವುದರಿಂದ ಅರ್ಹ ಮತದಾರರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಆದರೆ ಮತದಾರರ ಪಟ್ಟಿಯಲ್ಲಿ ಹೆಸರಿರಬೇಕಾದುದು ಕಡ್ಡಾಯ. ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ಮತದಾನಕ್ಕೆ ಅವಕಾಶವಿರುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಕೇಳುಗರ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಿದರು.
ಮತದಾರರು ಮತದಾನ ಕೇಂದ್ರಕ್ಕೆ ತೆರಳಲು ತಮ್ಮ ವಾಹನಗಳನ್ನು ಉಪಯೋಗಿಸಬಹುದು. ಪಕ್ಷಗಳಿಂದ ವಾಹನ ವ್ಯವಸ್ಥೆ ಮಾಡುವುದು ಹಾಗೂ ಮತದಾರರನ್ನು ಮತಗಟ್ಟೆಗೆ ತಲುಪಿಸುವುದು ಅಪರಾಧ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದರು.
ಕನರ್ಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳನ್ನು ಚುನಾವಣಾ ಕರ್ತವ್ಯಕ್ಕೆ ಉಪಯೋಗಿಸುವುದರಿಂದ ಗ್ರಾಮಾಂತರ ಪ್ರದೇಶಗಳಲ್ಲಿ ಮತದಾನದ ದಿನ ಮತದಾರರಿಗೆ ಆಗುವ ಅನಾನುಕೂಲಗಳನ್ನು ತಪ್ಪಿಸುವ ಉದ್ದೇಶದಿಂದ ಕಾಲೇಜು ಬಸ್ಸುಗಳ ನೆರವು ಪಡೆಯಲು ಜಿಲ್ಲಾಡಳಿತ ಕ್ರಮಕೈಗೊಂಡಿದೆ.
ಅಂಗವಿಕಲರು ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ. ಅಶಕ್ತರು ಮತ್ತು ಅಂಗವಿಕಲರು ಮತದಾನ ಮಾಡಲು ಪೂರಕವಾಗುವಂತೆ ರಾಂಪ್ ಗಳನ್ನು ಹಾಗೂ 18 ವರ್ಷ ಮೇಲ್ಪಟ್ಟವರ ನೆರವು ಪಡೆಯಬಹುದು. ಮತದಾನ ಕೇಂದ್ರಗಳಲ್ಲಿ ನೀರು ಮತ್ತು ನೆರಳಿನ ವ್ಯವಸ್ಥೆಯನ್ನು ಮಾಡಲಾಗಿದೆ.
ಕಾರ್ಮಿಕರಿಗೆ ವೇತನ ಸಹಿತ ರಜೆ ಘೋಷಿಸಲು ಕಾರ್ಮಿಕ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ. ಹಾಗಾಗಿ ಎಲ್ಲ ಕಾರ್ಮಿಕರ ಮತದಾನ ಮಾಡಿ ಎಂದು ಕಾರ್ಮಿಕರೊಬ್ಬರ ಫೋನ್ ಕರೆಗೆ ಉತ್ತರಿಸಿದರು.
ಯಾವುದೇ ಅಕ್ರಮಗಳಿಗೆ ಸಂಬಂಧಿಸಿದ ಪುರಾವೆ ನೀಡಲು 1077 ಗೆ ಕರೆ ಮಾಡಿ ಇಂತಹ ವಿಷಯಕ್ಕೆ ಜಿಲ್ಲಾಧಿಕಾರಿಯೊಂದಿಗೆ ಮಾತನಾಡಬೇಕಿದೆ ಎಂದರೆ ತಾನು ಲಬ್ಯ ಎಂದು ಕೇಳುಗರ ಪ್ರಶ್ನೆಗೆ ಉತ್ತರಿಸಿದರು.
ಮತದಾನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿರುವ ಎಲ್ಲರೂ ಮತದಾನ ಮಾಡಲು ಅನುಕೂಲವಾಗುವಂತೆ ಪೋಸ್ಟಲ್ ಬ್ಯಾಲೆಟ್ ಮೂಲಕ ಮತದಾನಕ್ಕೆ ಅವಕಾಶ ನೀಡಲಾಗಿದೆ ಎಂದರು.
ಮಂಗಳೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥರಾದ ಡಾ ವಸಂತಕುಮಾರ್ ಪೆರ್ಲ ಅವರು ಫೋನ್ ಇನ್ ಕಾರ್ಯಕ್ರಮ ನಡೆಸಿಕೊಟ್ಟರು.

Daily report on voilation of Model Code of Conduct

please click here

ಸಹಾಯಕ ಖರ್ಚು ವೆಚ್ಚ ವೀಕ್ಷಕರ ವಿಶೇಷ ಸಭೆ

ಮಂಗಳೂರು, ಏಪ್ರಿಲ್. 25 : ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯನ್ನು ಸಮರ್ಪಕವಾಗಿ ನಡೆಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕೈಗೊಂಡಿರುವ ವಿನೂತನ ಕ್ರಮಗಳ ಬಗ್ಗೆ ಸಹಾಯಕ ಖರ್ಚುವೆಚ್ಚ ವೀಕ್ಷಕರಿಗೆ ಜಿಲ್ಲಾಧಿಕಾರಿ ಹರ್ಷಗುಪ್ತ ಅವರು ಮಾಹಿತಿ ನೀಡಿದರು.
           ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾಗಿದ್ದ ವಿಶೇಷ ಸಭೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು ಚುನಾವಣೆಯಲ್ಲಿ ಖಚರ್ುವೆಚ್ಚ ವೀಕ್ಷಕರ ಪಾತ್ರ ಅತ್ಯಂತ ಪ್ರಮುಖವಾಗಿದ್ದು ಅವರಿಗೆ ಅಗತ್ಯವಿರುವ ಎಲ್ಲ ಪೂರಕ ಮಾಹಿತಿಗಳನ್ನು ನೀಡಲು ಜಿಲ್ಲಾಡಳಿತ ಕೈಗೊಂಡಿರುವ ಆನ್ ಲೈನ್ ಮಾಹಿತಿಯ ಬಗ್ಗೆ ವಿವರಿಸಿದರು.
ಇದರಿಂದ ಖರ್ಚು ವೆಚ್ಚ ವೀಕ್ಷಕರಿಗೆ ಶ್ಯಾಡೋ ರಿಜಿಸ್ಟರ್ ನಿರ್ವಹಣೆಗೆ ಅನುಕೂಲವಾಗಲಿದೆ. ಪ್ರತಿಯೊಂದು ವರದಿಗೂ ವಿವಿಧ ಕರ್ತವ್ಯಗಳಲ್ಲಿ ನಿರತವಾಗಿರುವ ಅಧಿಕಾರಿಗಳನ್ನು ನಿರಂತರ ಸಂಪಕರ್ಿಸುವ ಹಾಗೂ ಮಾಹಿತಿ ಕೋರುವ ಕೆಲಸ ತಪ್ಪಲಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಅಧಿಕಾರಿಗಳು ತಮ್ಮ ಅಧಿಕಾರ ವ್ಯಾಪ್ತಿಯನ್ನು ಅರಿತು ಸಂಪೂರ್ಣವಾಗಿ ಕ್ರಮಕೈಗೊಳ್ಳಲು ಪ್ರೇರೇಪಿಸಿದ ಜಿಲ್ಲಾಧಿಕಾರಿಗಳು, ಕೆಲಸವನ್ನು ಸುಸೂತ್ರವಾಗಿ ನಿರ್ವಹಿಸಲು ತಾಂತ್ರಿಕತೆಯ ನೆರವಿನಿಂದ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. 

ಸಾರ್ವಜನಿಕರ ಮಾಹಿತಿಗಾಗಿ

ಮಂಗಳೂರು, ಏಪ್ರಿಲ್. 25: ರಾಜ್ಯ ವಿಧಾನಸಭಾ ಚುನಾವಣೆ-2013 ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು ಯಾವುದೇ ವ್ಯಕ್ತಿ ಯಾವುದೇ ಉದ್ದೇಶಕ್ಕೆ ರೂ.50,000 ರೂ.ಗಳಿಗಿಂತ ಹೆಚ್ಚು ನಗದು ತಮ್ಮ ಜೊತೆ ಇರಿಸಿಕೊಂಡಿದ್ದರೆ ಅದಕ್ಕೆ ಪೂರಕ ದಾಖಲೆಗಳನ್ನಿರಿಸಿಕೊಳ್ಳಬೇಕು.
ಜಿಲ್ಲೆಯ ಎಲ್ಲೆಡೆ ಅಕ್ರಮ ತಡೆಗೆ ಕಣ್ಗಾವಲಿರಿಸಲಾಗಿದ್ದು, ಅನುಮಾನಕ್ಕೆಡೆಯಾದ ನಗದು ಅಥವಾ ಉಡುಗೊರೆ ವಸ್ತುಗಳಿದ್ದರೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ  ಹರ್ಷ ಗುಪ್ತ ಅವರು ಮತ್ತೊಮ್ಮೆ ಎಚ್ಚರಿಸಿದ್ದಾರೆ.



Tuesday, April 23, 2013

ಸಮನ್ವಯ ಸಮಿತಿ ಸಭೆ


ಮಂಗಳೂರು ಏಪ್ರಿಲ್ 23:- ರಾಜ್ಯ ಸಾರ್ವತ್ರಿಕ ಚುನಾವಣೆ- 2013 ಚುನಾವಣೆ ಯಲ್ಲಿ ಸಮನ್ವಯ ತೆಯಿಂದ ಕಾರ್ಯ ಸಾಧಿಸಲು ಜಿಲ್ಲಾಧಿಕಾರಿ ಶ್ರೀ ಹರ್ಷಗುಪ್ತ ಅವರ ಅಧ್ಯಕ್ಷತೆ ಯಲ್ಲಿ ಜಿಲ್ಲಾಧಿ ಕಾರಿಗಳ ಕಚೇರಿಯಲ್ಲಿ ಪ್ರಮುಖ ಇಲಾಖಾ ಅಧಿಕಾರಿಗಳ ಸಭೆ ನಡೆಯಿತು. ತೆರಿಗೆ ಇಲಾಖೆ, ವಾಣಿಜ್ಯ ತೆರಿಗೆ ಇಲಾಖೆ, ಚುನಾವಣಾ ವೀಕ್ಷಕರು ಮತ್ತು ಅಸಿಸ್ಟೆಂಟ್ ಎಕ್ಸಪೆಂಡಿಚರ್ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಚುನಾವಣೆಯಲ್ಲಿ ಯಾವುದೇ ಅಕ್ರಮಗಳು ನಡೆಯದಂತೆ ತಡೆಯಲು ತೆರಿಗೆ ಇಲಾಖೆ ಪ್ರಮುಖ ಅಧಿಕಾರಿಗಳು ಕಾರ್ಯೋನ್ಮುಖರಾಗಿದ್ದಾರೆ. ಚುನಾವಣೆ  ಸಮಯದಲ್ಲಿ  ತೆರಿಗೆ ಇಲಾಖೆ ಅಧಿಕಾರಿಗಳ ಜವಾಬ್ದಾರಿ ಹಾಗು ಕಾರ್ಯ ನಿರ್ವಹಿಸುವ ರೀತಿಯನ್ನು ಇನ್ಕಮ್ಟ್ಯಾಕ್ಸ್ ಅಧಿಕಾರಿ ಶ್ರೀಮತಿ ಲಕ್ಷ್ಮಿ ಹಂದೆ ಅವರು ಅಧಿಕಾರಿ ಗಳಿಗೆ ವಿವರಿಸಿದರು. ಹತ್ತು ಲಕ್ಷ ರೂಪಾಯಿ ಗಳಿ ಗಿಂತ ಹೆಚ್ಚಿನ ಮೊತ್ತವನ್ನು ಸೀಜ್ ಮಾಡಿದ ಸಂದರ್ಭದಲ್ಲಿ 50,000 ರೂಪಾಯಿಗಳಿಗಿಂತ ಹೆಚ್ಚಿನ ಸಂದರ್ಭದಲ್ಲಿ ಪೊಲೀಸ್ ನೆರವು ಪಡೆಯುವ ಬಗ್ಗೆಯೂ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದರು.
ಸಮುದ್ರದ ಮೂಲಕ, ವಿಮಾನನಿಲ್ದಾಣ ಮೂಲಕ, ರೈಲ್ವೇ ಮೂಲಕ ಯಾವುದೇ ರೀತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉಡುಗೊರೆ, ಹಣ, ಬಂಗಾರ ಸಾಗಾಣಿಕೆಯನ್ನು ಪತ್ತೆ ಹಚ್ಚಲು ವಾಣಿಜ್ಯತೆರಿಗೆ ಇಲಾಖೆಗಳ ಸಹಕಾರ ಅಗತ್ಯವಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಯಾವುದೇ ಕಾರಣಕ್ಕೂ ನೀತಿ ಸಂಹಿತೆ ಉಲ್ಲಂಘನೆಯಾಗಬಾರದು. ಹಾಗೂ ಎಲ್ಲ ಖರ್ಚು ವೆಚ್ಚಗಳು ಲೆಕ್ಕಕ್ಕೆ ಸಿಗಬೇಕೆಂಬ ಉದ್ದೇಶದಿಂದ ಸಮಗ್ರ ವ್ಯವಸ್ಥೆ ಮಾಡಲಾಗಿದೆ. ಚುನಾವಣಾ ಅಕ್ರಮ ತಡೆಗೆ ಎಲ್ಲ ಅಧಿಕಾರಿಗಳಿಗೆ ಪೂರಕ ಅಧಿಕಾರ ನೀಡಲಾಗಿದ್ದು, ಅಧಿಕಾರವನ್ನು ಸದ್ಬಳಕೆ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಅಡಿಷನಲ್ ಕಮಿಷನರ್ ಇನ್ಕಮ್ಟ್ಯಾಕ್ಸ್ ಶ್ರೀ ಡಿ ಕೆ ಝಾ, ಎನ್ಎಮ್ ಪಿ ಟಿ ಪೋರ್ಟ್ ಸೆಕ್ರೆಟರಿ ಕಸ್ಟಮ್ಸ್ ಅಧಿಕಾರಿಗಳು, ಏರ್ಪೋರ್ಟ್ ಡೈರೆಕ್ಟರ್ ಶ್ರೀ ರಾಧಾಕೃಷ್ಣ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

62 ಮಿಕ್ಸರ್ ಗ್ರ್ಯಂಡರ್ ವಶ

  ಮಂಗಳೂರು ಏಪ್ರಿಲ್ 23: ಮುಂಬಯಿ-ಮಂಗಳೂರು ರೈಲಿನಲ್ಲಿ ಮಂಗಳೂರು ಕೇಂದ್ರ ರೈಲು ನಿಲ್ದಾಣಕ್ಕೆ ತಲುಪಿದ 162 ಮಿಕ್ಸರ್ ರ್ಗ್ರೈಂಡರ್ ಗಳನ್ನು ಕಮರ್ಷಿಯಲ್ ಟ್ಯಾಕ್ಸ್ಎನ್ಫೋರ್ಸಮೆಂಟ್ ಅಧಿಕಾರಿ
ಬಿಲ್ ರಹಿತ ಮಾಲನ್ನು ಮುಟ್ಟುಗೋಲು ಹಾಕಿ ಕಮರ್ಷಿಯಲ್ ಟ್ಯಾಕ್ಸ್ ಕಚೇರಿಯಲ್ಲಿ ಇರಿಸಲಾಗಿದೆ ಎಂಬ ಮಾಹಿತಿ ಯನ್ನು ಅಧಿಕಾರಿ ಸಭೆಗೆ ನೀಡಿ ದರು.

ಮೆಹಮೂದ್ ಖಾನ್ ಅವರು ಮುಟ್ಟು ಗೋಲು ಹಾಕಿಕೊಂಡಿ ದ್ದಾರೆ ಎಂದು ಜಿಲ್ಲಾಧಿ ಕಾರಿ ಹರ್ಷಗುಪ್ತ ಅವರಿಗೆ ಸಭೆಯ ವೇಳೆ ಮಾಹಿತಿ ನೀಡಿ ದರು.

ರಾಜಕೀಯ ಪಕ್ಷ ಪ್ರತಿನಿಧಿಗಳೊಂದಿಗೆ ಸಭೆ


ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿವಿಧ ಪಕ್ಷಗಳ ಮುಖಂಡರ ಸಭೆ ನಡೆಯಿತು.

Daily Report on Violation Of Model Code of Conduct and Excise Related Cases

VIEW

ಏಪ್ರಿಲ್ 24 ರಿಂದ ವೀಕ್ಷಕರಿಂದ ಚುನಾವಣಾ ವೆಚ್ಚ ಪರಿಶೀಲನೆ

ಮಂಗಳೂರು, ಎಪ್ರಿಲ್. 23: ದಕ್ಷಿಣಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಚುನಾವಣಾ ವೆಚ್ಚ ವೀಕ್ಷಕರಾಗಿ ನೇಮಕವಾಗಿರುವ ವೀಕ್ಷಕರು, ಆಯಾ ಕ್ಷೇತ್ರಗಳ ಚುನಾವಣಾ ಅಧಿಕಾರಿಗಳ ಕಛೇರಿಯಲ್ಲಿ 24-4-2013 ರಿಂದ 3-5-2013 ರವರೆಗೆ ಚುನಾವಣೆಗೆ ಸ್ಪರ್ಧಿಸಿರುವ ಉಮೇದುವಾರರ ವಹಿಗಳ ಪರಿಶೀಲನೆ ಕಾರ್ಯ ನಡೆಸಲಿದ್ದಾರೆ.
               ವಿನೀಶ್ ಚೌಧರಿ ಅವರು 200- ಬೆಳ್ತಂಗಡಿ ಕ್ಷೇತ್ರದ ಉಮೇದುವಾರರ ವಹಿಗಳನ್ನು ದಿನಾಂಕ 24-04-2013, 28-4-2013 ಹಾಗೂ 02-05-2013 ರಂದು ಮಧ್ಯಾಹ್ನ 2.00 ರಿಂದ 5.00 ಗಂಟೆಯವರೆಗೆ ಪರಿಶೀಲಿಸುವರು.
    ಇದೇ ಮೇಲ್ಕಂಡ ದಿನಾಂಕಗಳನ್ನು ಶ್ರೀಯುತ ವಿನೀಶ್ಚೌದರಿ ಅವರು 201 - ಮೂಡಬಿದ್ರೆ ಕ್ಷೇತ್ರದ ಉಮೇದುವಾರರ ವಹಿಗಳನ್ನು ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1.00 ಗಂಟೆಯವರೆಗೆ ಪರಿಶೀಲಿಸುವರು.
         ಮೊಹ್ಮದ್ ಶಂಷದ್ ಆಲಂ ಅವರು 24-04-2013, 28-04-2013 ಹಾಗೂ 02-05-2013 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.00 ಗಂಟೆಯವರೆಗೆ ಮಂಗಳೂರು ಉತ್ತರ 202 ವಿಧಾನಸಭಾಕ್ಷೇತ್ರದ ಚುನಾವಣಾಧಿಕಾರಿಗಳ ಕಛೇರಿಯಲ್ಲಿ ನಿರ್ವಹಿಸಿರುವ ಅಭ್ಯರ್ಥಿಗಳ ಚುನಾವಣಾ ವೆಚ್ಚ ವಹಿಗಳನ್ನು ಪರಿಶೀಲಿಸುವರು. 203 - ಮಂಗಳೂರು ದಕ್ಷಿಣ ಕ್ಷೇತ್ರದ ಚುನಾವಣಾ ಅಭ್ಯರ್ಥಿಗಳ ವಹಿಗಳನ್ನು ದಿನಾಂಕ 25-4-2013 , 29-4-2013 ಮತ್ತು 3-5-2013 ರಂದು ಬೆಳಿಗ್ಗೆ 10.30 ರಿಂದ 1.00 ರವರೆಗೆ ಚುನಾವಣಾಧಿಕಾರಿಗಳ ಕಛೇರಿಯಲ್ಲಿ ತಪಾಸಣೆ ಮಾಡುವರು.
    204- ಮಂಗಳೂರು ವಿಧಾನಸಭಾಕ್ಷೇತ್ರದ ಅಭ್ಯರ್ಥಿಗಳ ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದ ವಹಿಗಳನ್ನು ದಿನಾಂಕ 24-4-2013 , 28-4-2013 ಹಾಗೂ 2-5-2013 ರಂದು ಬೆಳಿಗ್ಗೆ 10.00 ರಿಂದ ಸಂಜೆ 5.00 ರ ತನಕ ಚುನಾವಣಾ ವೀಕ್ಷಕರಾದ  ಆರ್.ಆರ್. ಅಗರವಾಲ್ ಅವರು ಪರಿಶೀಲನೆ ಮಾಡುವರು.
    205 - ಬಂಟ್ವಾಳ ವಿಧಾನಸಭಾಕ್ಷೇತ್ರದ ಅಭ್ಯರ್ಥಿಗಳ ಚುನಾವಣಾ ವೆಚ್ಚ ಬಿಲ್ಲುಗಳನ್ನು ದಿನಾಂಕ 25-4-2013 , 29-4-2013 ಹಾಗೂ 03-5-2013 ರಂದು ಬೆಳಿಗ್ಗೆ 10.00 ರಿಂದ ಸಂಜೆ 5.00 ರವರೆಗೆ ಆರ್.ಆರ್. ಅಗರವಾಲ್ ಅವರು ತಪಾಸಿಸಲಿರುವರು.
     206- ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಚುನಾವಣಾ ವೆಚ್ಚ ವಹಿಗಳನ್ನು ದಿನಾಂಕ 25-4-2013 , 29-4-2013 ಹಾಗೂ 03-5-2013 ರಂದು ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1.00ರ ವರೆಗೆ ಚುನಾವಣಾಧಿಕಾರಿಗಳ ಕಛೇರಿಯಲ್ಲಿ  ವಿನೀಶ್ ಚೌಧರಿ, ಚುನಾವಣಾ ವೀಕ್ಷಕರು ತಪಾಸಣೆ ಮಾಡುವರು.
      ವಿನೀಶ್ ಚೌಧರಿ ಅವರು 207 ಸುಳ್ಯ ವಿಧಾನಸಭಾಕ್ಷೇತ್ರದ ಅಭ್ಯರ್ಥಿಗಳ ಚುನಾವಣಾ ವೆಚ್ಚ ವಹಿಗಳನ್ನು ದಿನಾಂಕ 25-4-2013 , 29-4-2013 ಹಾಗೂ 3-5-2013 ರಂದು ಮಧ್ಯಾಹ್ನ 2.00ರಿಂದ 5.00 ರವರೆಗೆತಪಾಸಣೆ ಮಾಡಲಿರುವರು.

Monday, April 22, 2013

ಎಂ ಸಿ ಎಂ ಸಿ ಸಮಿತಿ ಸಭೆ

ಮಂಗಳೂರು,ಏಪ್ರಿಲ್.22 : ಮತದಾರರನ್ನು ತಲುಪಲು ಅಪರೋಕ್ಷವಾಗಿ ಸಮೂಹ ಮಾಧ್ಯಮಗಳ ನೆರವು ಪಡೆದು ಸುದ್ದಿಯಲ್ಲಿರುವ ಅಭ್ಯರ್ಥಿಗಳ ಪ್ರಕಟಿತ ಸುದ್ದಿಗಳ ಮೇಲೆ ನಿರಂತರ ನಿಗಾ ವಹಿಸಲಾಗಿದ್ದು, ಸೂಕ್ತ ಸಮಯದಲ್ಲಿ ಅವರಿಗೆ ನೋಟೀಸು ಜಾರಿಯ ಜೊತೆಗೆ ಖರ್ಚು ವೆಚ್ಚ ರಿಜಿಸ್ಟರ್ ನಲ್ಲೂ ನಮೂದಿಸುವ ಕಾರ್ಯದಲ್ಲಿ ಎಂ ಸಿ ಎಂ ಸಿ ಸಮಿತಿ ನಿರತವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳು ಆಗಿರುವ  ಹರ್ಷ ಗುಪ್ತ ಅವರು ಹೇಳಿದರು.
ಪ್ರತಿನಿತ್ಯ ಈ ಸಂಬಂಧ ಜಿಲ್ಲಾ ವಾರ್ತಾ ಇಲಾಖೆಯಲ್ಲಿ ನಡೆಯುವ ಎಂಸಿಎಂಸಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಮುಖ್ಯವಾಗಿ ಒಂದು ಕೇಬಲ್ ನ್ಯೂಸ್ ಚಾನೆಲ್ ಈ ಪ್ರಕ್ರಿಯೆಯಲ್ಲಿ ನಿರತವಾಗಿದ್ದು, ಅವರಿಗೆ ಎಚ್ಚರಿಕೆ ನೋಟೀಸು ಹಾಗೂ ಅಭ್ಯರ್ಥಿಗಳಿಗೆ ನೋಟೀಸು ನೀಡಲು ಅವರು ಸೂಚಿಸಿದರು.
ಅಭ್ಯರ್ಥಿಗಳು ತಮ್ಮ ಚುನಾವಣಾ ಪ್ರಚಾರದ ಫೋಟೋಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸಲು ಖುದ್ದಾಗಿ ಎಲ್ಲ ಪತ್ರಿಕೆಗಳಿಗೆ ತಲುಪಿಸುತ್ತಿರುವ ರೀತಿಯ ಬಗ್ಗೆಯೂ ಸಭೆ ಚರ್ಚಿಸಿತು. ಸುದ್ದಿಯ ಮಹತ್ವವಿಲ್ಲದ ಸುದ್ದಿಗಳು ಭಾವಚಿತ್ರಗಳೊಂದಿಗೆ ಸುದ್ದಿಯಾಗಿ ಪ್ರಕಟಗೊಳ್ಳುತ್ತಿರುವ ಬಗ್ಗೆ, ಸ್ಥಳೀಯ ಚಾನೆಲ್ ಗಳಲ್ಲಿ ಬಂದ ಸುದ್ದಿಗಳೇ ವಿವಿಧ ರೂಪದಲ್ಲಿ 24 ಗಂಟೆಯೂ ಕಳೆದ ಐದಾರು ದಿನಗಳಿಂದ ಮರುಪ್ರಸಾರಗೊಳ್ಳುತ್ತಿರುವ ಸಭೆ ಚರ್ಚೆ ನಡೆಸಿ ಕ್ರಮಕೈಗೊಳ್ಳಲು ತೀರ್ಮಾನಿಸಿತು.
ನೇರವಾಗಿ 'ಕಾಸಿಗಾಗಿ ಸುದ್ದಿ'ಯನ್ನಾಗಿ ಇಂತಹ ಸುದ್ದಿಗಳನ್ನು ಪರಿಗಣಿಸುವ ಬಗ್ಗೆಯೂ ಸಭೆ ಚರ್ಚಿಸಿತು.
ಚುನಾವಣಾ ಪ್ರಚಾರದಲ್ಲಿ ನಿರತವಾಗಿರುವ ಅಭ್ಯರ್ಥಿಗಳು ತಾವು ಮತದಾರರನ್ನು ಓಲೈಸಲು ಸುದಿಯಲ್ಲದ ಬಾವಚಿತ್ರಗಳನ್ನು ಸುದ್ದಿಯನ್ನಾಗಿ ಪ್ರಕಟಪಡಿಸುತ್ತಿರುವುದು ಖರ್ಚು ವೆಚ್ಚಕ್ಕೆ ಹಾಕುವುದಲ್ಲದೆ ಅದನ್ನು ಅಪರಾಧವೆಂದು ಪರಿಗಣಿಸುವ ಬಗ್ಗೆಯೂ ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯಲ್ಲಿ ಪಾಲಿಕೆ ಆಯುಕ್ತರಾದ ಡಾ ಹರೀಶ್ ಅವರನ್ನೊಳಗೊಂಡಂತೆ ಸಮಿತಿಯ ಸದಸ್ಯರು ಉಪಸ್ಥಿತರಿದ್ದು ತಮ್ಮ ಸಲಹೆ ಸೂಚನೆಗಳನ್ನು ನೀಡಿದರು.

ಅಧಿಕಾರಿಗಳು ಮತ್ತು ಚುನಾವಣಾ ವೀಕ್ಷಕರ ಸಭೆ

ಮಂಗಳೂರು, ಏಪ್ರಿಲ್. 22ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುವ್ಯವಸ್ಥಿತ ಚುನಾವಣೆ ನಡೆಸಲು ಹಾಗೂ ಜಿಲ್ಲೆಯಿಂದ ರಾಜ್ಯಕ್ಕೆ ಹೊಸದೊಂದು ಪೈಲೆಟ್ ಮಾದರಿ ನೀಡುವ ನಿಟ್ಟಿನಲ್ಲಿ ಚುನಾವಣಾ ಪ್ರಕ್ರಿಯೆಗೆ ತಾಂತ್ರಿಕತೆ ನೆರವಿನೊಂದಿಗೆ ಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹರ್ಷಗುಪ್ತ ಅವರು ಹೇಳಿದರು.
         ಭಾನುವಾರ ಜಿಲ್ಲೆಗೆ ಆಗಮಿಸಿರುವ ಎಲ್ಲ ಚುನಾವಣಾ ವೀಕ್ಷಕರು ಮತ್ತು ಚುನಾವಣಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸ್ಮಾರ್ಟ್  ಫೋನ್ ಮತ್ತು ವಾಕಿಟಾಕಿ, ಕಂಟ್ರೋಲ್ ರೂಮ್ ಹಾಗೂ ಎಂಸಿಎಂಸಿ ಸಮಿತಿಯನ್ನು ರಚಿಸಲಾಗಿದ್ದು, ಏಕಗವಾಕ್ಷಿ ಯೋಜನೆಯನ್ನು ರೂಪಿಸಲಾಗಿದೆ. ಜಿಲ್ಲೆಯಾದ್ಯಂತ ಒಂದೇ ಚುನಾವಣಾ ರೀತಿ-ನೀತಿ ರೂಪಿಸಲು ಎಲ್ಲರೊಂದಿಗೆ ಚರ್ಚಿಸಿ ಸಮಗ್ರ ಯೋಜನೆ ರೂಪಿಸಿದ್ದೇನೆ.
ಈ ಸಂಬಂದ ಚುನಾವಣಾ ಆಯೋಗದ ನಿರ್ದೇಶನದಡಿ ಹಲವು ಸುತ್ತೋಲೆಗಳನ್ನು ಜಿಲ್ಲಾ ಚುನಾವಣಾಧಿಕಾರಿಗಳು ಹೊರಡಿಸಿದ್ದು, ಆಡಿಯೋ ಕಾನ್ಫರೆನ್ಸ್ ಹಾಗೂ ಆರ್ ಒ ಗಳ ವಿಶೇಷ ಸಭೆ ನಡೆಸುವ ಮೂಲಕ ಕಾಲಕಾಲಕ್ಕೆ ಎಲ್ಲಿಯೂ ಮಾಹಿತಿಕೊರತೆ ಸಂಭವಿಸದಂತೆ ಚುನಾವಣಾ ಕರ್ತವ್ಯ ನಿರ್ವಹಿಸಲಾಗುತ್ತಿದೆ.
ಎಲ್ಲ ಚುನಾವಣಾಧಿಕಾರಿಗಳು ಎಲ್ಲ ಮಾಹಿತಿಯನ್ನು ಆನ್ ಲೈನ್ ಮೂಲಕ ವೀಕ್ಷಿಸುವಂತೆ ಅವರಿಗೆ ಲಾಗ್ ಇನ್ ನಂಬರ್ ನೀಡಲಾಗುತ್ತದೆ. ಎಲ್ಲರೂ ಚುನಾವಣಾ ಕರ್ತವ್ಯದಲ್ಲಿ ನಿರತವಾಗಿರುವ ಸಂದರ್ಭದಲ್ಲಿ ಪರಸ್ಪರ ತೊಂದರೆಯಾಗದಂತೆ ಮಾಹಿತಿ ಸಂಗ್ರಹಿಸಲು 
www.dk.nic.inಸೈಟ್ ಸಂಪರ್ಕಿಸಿ ಎಲ್ಲ ಮಾಹಿತಿಗಳನ್ನು ಒಂದೆಡೆ ಪಡೆಯಬಹುದಾಗಿದೆ.
ವಾಹನಕ್ಕೆ ಅನುಮತಿ, ಜಾಹೀರಾತಿಗೆ ಅನುಮತಿ, ಸಭೆ ಸಮಾರಂಭಗಳಿಗೆ ಅನುಮತಿ ನೀಡಿರುವ ಮಾಹಿತಿ ಎಲ್ಲವೂ ಇಲ್ಲಿ ಲಭ್ಯವಿದ್ದು, ಖರ್ಚು ವೆಚ್ಚ ವೀಕ್ಷಕರಿಗೆ ಶ್ಯಾಡೋ ರಿಜಿಸ್ಟರ್ ರಚಿಸುವ ಸಂದರ್ಭದಲ್ಲಿ ಇದು ನೆರವಾಗಲಿದೆ. ಇನ್ನು ಯಾವುದೇ ದೂರು ಅಥವಾ ಸಲಹೆಗಳನ್ನು ಕಂಟ್ರೋಲ್ ರೂಂ 1077 24 ಗಂಟೆಯೂ ತೆರೆದಿರುತ್ತದೆ.
ಇಂದು ಮಾಸ್ಟರ್ ಟ್ರೈನರ್ಸ್ ಹಾಗೂ ಚುನಾವಣಾಧಿಕಾರಿಗಳಿಗೆ ತರಬೇತಿಯನ್ನು ನೀಡಲಾಗಿದ್ದು, ಚುನಾವಣೆಯಲ್ಲಿ ಎಲ್ಲವನ್ನೂ ಸುವ್ಯವಸ್ಥಿತವಾಗಿ ನಿರ್ವಹಿಸಲು ವ್ಯವಸ್ಥೆ ಮಾಡಲಾಗಿದೆ. ಚುನಾವಣಾ ಪ್ರಕ್ರಿಯೆ ಇದೇ ಮಾದರಿಯಲ್ಲಿ ಮುಂದುವರಿದರೆ ಸ್ಮಾಟ್ರ್  ಫೋನ್ ವ್ಯವಸ್ಥೆ ತಮ್ಮ ಯೋಚನೆಯಂತೆ ಅನುಷ್ಠಾನಗೊಂಡರೆ ಇದು ಪೈಲೆಟ್ ಯೋಜನೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಸಭೆಯಲ್ಲಿ ಚುನಾವಣಾ ವೀಕ್ಷಕರಾದ ಪುಷ್ಪವತಿ ಸೆಕ್ಸೆನಾ, ರಾಮಕುಮಾರ್, ದಿನೇಶ್ ಗೋಯಲ್, ಜಗದೀಶ್ ಪಾಟೀಲ್, ಮುಖೇಶ್ ಕುಮಾರ್, ಆರ್ ಸಿ ವರ್ಮಾ ಉಪಸ್ಥಿತರಿದ್ದರು.  ಎಲ್ಲ ಚುನಾವಣಾಧಿಕಾರಿಗಳು ಉಪಸ್ಥಿತರಿದ್ದರು.
 

Sunday, April 21, 2013

ಅಧಿಕಾರಿಗಳಿಗೆ ಚುನಾವಣಾ ತರಬೇತಿ

ಮಂಗಳೂರು,ಏಪ್ರಿಲ್. 21: ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ  ಹರ್ಷಗುಪ್ತ ಅವರ ಅಧ್ಯಕ್ಷತೆಯಲ್ಲಿ ಮಾಸ್ಟರ್ ಟ್ರೈನರ್, ಸೆಕ್ಟರ್ ಆಫೀಸರ್ಸ್, ಸೆಕ್ಟರ್ ಮ್ಯಾಜಿಸ್ಟೇಟ್ ಗಳಿಗೆ ಒಂದು ದಿನದ ವಿಶೇಷ ತರಬೇತಿ ನೀಡಲಾಯಿತು.
ಇಂದು ತರಬೇತಿ ಪಡೆದ ಅಧಿಕಾರಿಗಳು ಪ್ರಿಸೈಂಡಿಗ್ ಅಧಿಕಾರಿಗಳಿಗೆ ಹಾಗೂ ಪೋಲಿಂಗ್ ಅಧಿಕಾರಿಗಳಿಗೆ ತಮ್ಮ ವ್ಯಾಪ್ತಿಯಲ್ಲಿ ಮುಂದಿನ ದಿನಗಳಲ್ಲಿ ತರಬೇತಿ ನೀಡಲಿರುವರು.


 

ರಾಜಕೀಯ ಪಕ್ಪಗಳು ಮತ್ತು ಚುನಾವಣಾ ವೀಕ್ಷಕರ ಸಭೆ

ಮಂಗಳೂರು,ಏಪ್ರಿಲ್ .21:ರಾಜ್ಯ ಸಾರ್ವತ್ರಿಕ ಚುನಾವಣೆ-2013ನ್ನು ಯಶಸ್ವಿಯಾಗಿ ನಿರ್ವಹಿಸಲು ಎಲ್ಲರ ಸಹಕಾರದ ಅಗತ್ಯವಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಹರ್ಷಗುಪ್ತ ಅವರು ಹೇಳಿದರು.
                ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾದ ರಾಜಕೀಯ ಪಕ್ಷಗಳ ಮತ್ತುಚುನಾವಣಾ ವೀಕ್ಷಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಚುನಾವಣಾ ಆಯೋಗದ ನಿರ್ದೇಶನದಡಿ ಜಿಲ್ಲಾಡಳಿತ ಸುವ್ಯವಸ್ಥಿತ ಚುನಾವಣೆಗೆ ಹಲವು ಕ್ರಮಗಳನ್ನು ಕೈಗೊಂಡಿದೆ. ಕಾನೂನು ಪಾಲನೆಗೆ ಪೂರಕವಾಗಿಎಲ್ಲ ಕ್ರಮಗಳನ್ನು ತಂತ್ರಜ್ಞಾನಗಳನ್ನು ಬಳಸಿ ಅಳವಡಿಸಲಾಗಿದೆ.ರಾಜಕೀಯ ಪಕ್ಷಗಳಿಗೆ ಎಲ್ಲರೀತಿಯ ಅನುಮತಿ ಪಡೆಯಲು ಏಕಗವಾಕ್ಷಿ ವ್ಯವಸ್ಥೆಯನ್ನು ಮಾಡಲಾಗಿದೆ.
ಚುನಾವಣೆಯನ್ನು ನಿಷ್ಪಕ್ಷಪಾತವಾಗಿ ನಿರ್ವಹಿಸಲು ಜಿಲ್ಲಾಡಳಿತ ಕೈಗೊಂಡಿರುವಎಲ್ಲ ಕ್ರಮಗಳನ್ನು ಹಾಗೂ ವ್ಯವಸ್ಥೆಗಳನ್ನು ರಾಜಕೀಯ ಪಕ್ಷ ಮುಖಂಡರಿಗೆ ಜಿಲ್ಲಾಧಿಕಾರಿಗಳು ವಿವರಿಸಿದರು.ಯಾವುದೇ ಸಮಸ್ಯೆಗೆ 1077 ಕಂಟ್ರೋಲ್ ರೂಂ ಸಂಪರ್ಕಿಸಿ ಎಂದು ಅವರು ಹೇಳಿದರು. ಗುರುತಿಸಲ್ಪಟ್ಟ ಪಕ್ಷಗಳ ಅಭ್ಯರ್ಥಿಗಳಿಗೆ ಮತದಾರರ ಪಟ್ಟಿಯನ್ನು ಶೀಘ್ರವೇ ವಿತರಿಸಲಾಗುವುದು ಎಂದ ಅವರು, ಸ್ವೀಪ್(ಮತದಾರರ ಜಾಗೃತಿ ಕಾರ್ಯಕ್ರಮ) ನಿಂದಾಗಿ ಮತದಾರರ ಪಟ್ಟಿಗೆ ಸುಮಾರು 62,000 ಹೆಸರು ಸೇರ್ಪಡೆಗೊಂಡಿದ್ದು, ಪೋಸ್ಟಲ್ ಬ್ಯಾಲೆಟ್ ಮತ್ತು ಸರ್ವಿಸ್ ವೋಟ್ ಗಳು ಲೋಪವಾಗದಂತೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗಿದೆ.
ರಾಜಕೀಯಪಕ್ಷಗಳ ಮುಖಂಡರುತಮ್ಮ ಸಮಸ್ಯೆಗಳನ್ನು, ಸಂಶಯಗಳನ್ನು ಸಭೆಯ ಮುಂದಿಟ್ಟರು.
 ಮತದಾನ ಮಾಡಲು ಬಿಎಲ್ಒಗಳು ಕೊಡುವ ವೋಟರ್ ಸ್ಲಿಪ್ ಕಾನೂನು ಬದ್ಧವಾಗಿದ್ದು, ಇತರ ಯಾವುದೇ ಗುರುತು ಪತ್ರ ಮತದಾನ ಮಾಡಲು ಅಗತ್ಯವಿರುವುದಿಲ್ಲ. ಹಾಗಾಗಿ ಮತದಾರರು ತಮ್ಮ ಮತ ಚಲಾಯಿಸಲು ವೋಟರ್ ಸ್ಲಿಪ್ ಬಳಸಿಕೊಳ್ಳಿ ಎಂದು ಜಿಲ್ಲಾಧಿಕಾರಿಗಳು ಸಲಹೆ ಮಾಡಿದರು. ಪೊಲೀಸ್ ಕಮಿಷನರ್ ಮನೀಷ್ ಕರ್ಬಿಕರ್, ಅಪರಜಿಲ್ಲಾಧಿಕಾರಿದಯಾನಂದ, ಪಾಲಿಕೆ ಆಯುಕ್ತರಾದ ಡಾ. ಹರೀಶ್, ಎಲ್ಲ ಚುನಾವಣಾಧಿಕಾರಿಗಳು, ಎಸ್ ಪಿ ಅಭಿಷೇಕ್ ಗೋಯಲ್ ಹಾಗೂ ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸಭೆಯಲ್ಲಿದ್ದರು.

Friday, April 19, 2013

ಡೋಲುವಾದನದ ಮೂಲಕ ಮತದಾರರ ಜಾಗೃತಿ

ಮಂಗಳೂರು,ಏಪ್ರಿಲ್ .19: ಅಪ್ನಾದೇಶ್, ಜನ ಶಿಕ್ಷಣ ಟ್ರಸ್ಟ್, ಬಾಳೆಪುಣಿ ಗ್ರಾಮ ಪಂಚಾಯತ್, ಆದಿವಾಸಿ ಕೊರಗ ಅಭಿವೃದ್ಧಿ ಸಂಘ ಮತ್ತು ಮಾದರಿ ಗ್ರಾಮ ವಿಕಾಸ ಕೇಂದ್ರದ ಸಹಯೋಗದಲ್ಲಿ ಮತದಾನದ ಮಹತ್ವದ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಬಾಳೆಪುಣಿ ಪಂಚಾಯತ್ಯ ಹೂಹಾಕುವಕಲ್ಲು ಆದಿವಾಸಿ ಮತ್ತು ಜನತಾ ನಿವೇಶನದ ಪ್ರದೇಶಗಳಲ್ಲಿ ನಡೆಸಲಾಯಿತು. ಕುಕ್ಕುದಕಟ್ಟೆಯ ಆದಿವಾಸಿ ಕಲಾ ತಂಡದ ಬಾಬು ಮತ್ತು ಸುರೇಶರವರ ನೇತೃತ್ವದ ಡೋಲು ಕಲಾ ಪ್ರದರ್ಶನ, ಕರಪತ್ರ ವಿತರಣೆ ಮೂಲಕ ಜಾಗೃತಿ ಮೂಡಿಸುವ ಈ ಜಾಥಕ್ಕೆ ಉದ್ಯೋಗ ಖಾತರಿ ಯೋಜನೆಯ ಒಂಬುಡ್ಸ್ಮನ್ ಶೀನ ಶೆಟ್ಟಿ ಚಾಲನೆ ನೀಡಿ ಮತದಾನದ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ  ತಿಲಕ್ ಕುಮಾರ್, ಕಾರ್ಯದರ್ಶಿ ನಳಿನಿ, ಜನ ಶಿಕ್ಷಣ ಟ್ರಸ್ಟ್ ನಿರ್ದೇಶಕರು ಕೃಷ್ಣ ಮೂಲ್ಯ, ಆದಿವಾಸಿ ಮುಖಂಡರಾದ ಲೀಲಾ, ಭಾಗಿ, ಮಾದರಿ ಗ್ರಾಮ ವಿಕಾಸ ಕೇಂದ್ರದ ಜಯ ಮೊದಲಾದವರು ಭಾಗವಹಿಸಿದ್ದರು. ಲಾವಣ್ಯ, ಚಂಚಲ ಮತ್ತು ಸದಾನಂದ ಕಾರ್ಯಕ್ರಮವನ್ನು ಸಂಯೋಜಿಸಿದರು. 

ಕೊಳ್ನಾಡು ಗ್ರಾಮ ಪಂಚಾಯತಿನಲ್ಲಿ ಮತದಾನ ಪ್ರತಿಜ್ಞಾ ಸ್ವೀಕಾರ

ಕೊಳ್ನಾಡು ಗ್ರಾಮ ಪಂಚಾಯತಿನಲ್ಲಿ ಮತದಾನ ಪ್ರತಿಜ್ಞಾ ಸ್ವೀಕಾರ

ಚುನಾವಣೆ ಮತ್ತು ಮತದಾನದ ಮಹತ್ವದ ಬಗ್ಗೆ ಜಾಗೃತಿ ಅಭಿಯಾನ

ಮಂಗಳೂರು, ಏಪ್ರಿಲ್.19: ಅಪ್ನಾದೇಶ್ ಮಾದರಿ ಗ್ರಾಮಾಭಿವೃದ್ಧಿ ಆಂದೋಲನ, ಸಮಾಜ ಕಾರ್ಯ ಸಂಸ್ಥೆ, ಜನ ಶಿಕ್ಷಣ ಟ್ರಸ್ಟ್, ಮಾದರಿ ಗ್ರಾಮ ವಿಕಾಸ ಕೇಂದ್ರ, ಸುಗ್ರಾಮ ಸಂಘ ಹಾಗೂ ಗ್ರಾಮ ಪಂಚಾಯತ್ ಗಳ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಮತದಾರರ ಜಾಗೃತಿ ಆಂದೋಲನದಲ್ಲಿ 'ಗಿರಿಸಿರಿ' ಕಲಾ ತಂಡದ ಆದಿವಾಸಿ ಕಲಾವಿದರು ಹಾಗೂ ಗ್ರಾಮ ವಿಕಾಸ ಕೇಂದ್ರಗಳ ಪ್ರೇರಕರು ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಲ್ಲಿ ಮತದಾರರ ಪಾಲುದಾರಿಕೆ, ಚುನಾವಣೆ ಮತ್ತು ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಜನಪದ ನೃತ್ಯ, ಬೀದಿ ನಾಟಕ, ಜಾಗೃತಿ ಗೀತೆ, ಪ್ರದರ್ಶನ ಕಾರ್ಯಕ್ರಮ.

ಮೂಡಬಿದ್ರೆ, ಪುತ್ತೂರು ಕ್ಷೇತ್ರದ ಚುನಾವಣೆಗೆ ವೀಕ್ಷಕರ ನೇಮಕ


ಮಂಗಳೂರು, ಎಪ್ರಿಲ್. 19 :-ದಕ್ಷಿಣಕನ್ನಡ ಜಿಲ್ಲೆಯ  ವಿಧಾನಸಭಾ ಚುನಾವಣೆಗೆ ವೀಕ್ಷಕರನ್ನಾಗಿ ಈ ಕೆಳಕಂಡ ವೀಕ್ಷಕರುಗಳನ್ನು ಚುನಾವಣಾ ಆಯೋಗ ನೇಮಕ ಮಾಡಿದೆ. ಚುನಾವಣೆಗೆ ಸಂಬಂಧಿಸಿದ ಯಾವುದೇ ತಕರಾರುಗಳಿದ್ದಲ್ಲಿ ದೂರವಾಣಿ ಇಲ್ಲವೇ ಪತ್ರದ ಮೂಲಕ ಇವರನ್ನು ಸಂಪರ್ಕಿಸಬಹುದಾಗಿದೆ.
ಜಿಲ್ಲೆಯ ಮೂಡಬಿದ್ರೆ ಮತ್ತು ಪುತ್ತೂರು ವಿಧಾನಸಭಾ ಕ್ಷೇತ್ರಗಳಿಗೆ ನೇಮಕಗೊಂಡಿರುವ ವೀಕ್ಷಕರ ಹೆಸರು ಹಾಗೂ ಅವರ ಸಂಚಾರಿ ದೂರವಾಣಿ ಸಂಖ್ಯೆಗಳು ಹಾಗೂ ವಾಸ್ತವ್ಯದ ವಿಳಾಸ ಈ ಕೆಳಗಿನಂತಿವೆ.
ಮೂಡಬಿದ್ರೆ ವಿಧಾನಸಭಾ ಚುನಾವಣಾ ಕ್ಷೇತ್ರದ ವೀಕ್ಷಕರಾಗಿ  ಮುಕೇಶ್ ಕುಮಾರ್ ಐ.ಎ.ಎಸ್. ದೂರವಾಣಿ ಸಂಖ್ಯೆ 9483506401  ಇವರು  ಮೂಡಬಿದ್ರಿ ಪುರಸಭೆ ಕಚೇರಿಯಲ್ಲಿ ಸಂಜೆ 3.00 ಗಂಟೆಯಿಂದ 4.00 ಗಂಟೆ ವರೆಗೆ, ಪುತ್ತೂರು ವಿಧಾನಸಭಾ ಚುನಾವಣಾ ಕ್ಷೇತ್ರದ  ವೀಕ್ಷಕರಾಗಿ  ರಾಮ್ ಕುಮಾರ್ ಐ.ಎಫ್.ಎಸ್. ದೂರವಾಣಿ ಸಂಖ್ಯೆ 9483506406 ಇವರು ಪುತ್ತೂರು  ಪ್ರವಾಸಿ ಬಂಗ್ಲೆಯಲ್ಲಿ ಸಂಜೆ 4.00 ಗಂಟೆಯಿಂದ 5.00 ಗಂಟೆ ವರೆಗೆ     ಸಾರ್ವಜನಿಕರ ಭೇಟಿಗಾಗಿ ವಾಸ್ತವ್ಯವಿರುತ್ತಾರೆ. ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು,ರಾಜಕೀಯ ಪಕ್ಷದ ಪ್ರತಿನಿಧಿಯವರು ಮತ್ತು ಸಾರ್ವಜನಿಕರು ಚುನಾವಣಾ ವೀಕ್ಷಕರನ್ನು ನಿಗಧಿಪಡಿಸಿದ ಅವಧಿಯಲ್ಲಿ ವೈಯಕ್ತಿಕವಾಗಿ ಅಥವಾ ದೂರವಾಣಿ ಮೂಲಕ  ಸಂಪರ್ಕಿಸಬಹುದಾಗಿದೆಯೆಂದು ಜಿಲ್ಲಾ ಚುನಾವಣಾಧಿಕಾರಿಗಳು/ಜಿಲ್ಲಾಧಿಕಾರಿಗಳು ತಿಳಿಸಿರುತ್ತಾರೆ.

Daily Report on Violation Of Model Code of Conduct and Excise Related Cases

VIEW

ನೀತಿಸಂಹಿತೆಉಲ್ಲಂಘನೆ: ಅಭ್ಯರ್ಥಿಗಳು ಹಾಗೂ ಚಾನೆಲ್ ಗೆ ನೋಟೀಸು


ಮಂಗಳೂರು,ಏಪ್ರಿಲ್. 19:ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ, ಕಾಸಿಗಾಗಿ ಸುದ್ದಿ ಎಂದುಕಂಡುಬಂದಸ್ಥಳೀಯ ಸುದ್ದಿ ಚಾನೆಲ್ ಮತ್ತುಅಭ್ಯರ್ಥಿ ವಿರುದ್ಧ ಕಾರಣ ಕೇಳಿ ನೋಟೀಸು ನೀಡಲು ದ.ಕ ಜಿಲ್ಲಾ ಚುನಾವಣಾಧಿಕಾರಿ  ಹರ್ಷ ಗುಪ್ತ ಅವರುಎಲ್ಲ ಚುನಾವಣಾಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಚುನಾವಣಾಧಿಕಾರಿಗಳ ಅಧ್ಯಕ್ಷತೆಯಲ್ಲಿಏಪ್ರಿಲ್ 18ರಂದು ಜಿಲ್ಲಾ ವಾರ್ತಾಇಲಾಖೆಯಲ್ಲಿ ನಡೆದ ಎಂ ಸಿ ಎಂ ಸಿ ಸಭೆಯಲ್ಲಿ ಮೀಡಿಯಾ ಮಾನಿಟರಿಂಗ್ ಸೆಲ್ ನಲ್ಲಿ ನಡೆದ ಸವಿವರ ಸಭೆಯಲ್ಲಿಚುನಾವಣಾಘೋಷಣೆಯಾದಾಗಿನಿಂದವಿವಿಧ ಪತ್ರಿಕೆಗಳು ಮತ್ತು ಚಾನೆಲ್ ಗಳಲ್ಲಿ ಬಿತ್ತರಿಸಲಾದ ಸುದ್ದಿಯನ್ನು ಸಮಗ್ರವಾಗಿ ವಿಶ್ಲೇಷಿಸಿ, ಪ್ರಮುಖವೆಂದುಕಂಡು ಬಂದ ಪ್ರಕರಣಗಳ ವಿರುದ್ಧ ಕ್ರಮಕೈಗೊಳ್ಳಲು ಹಾಗೂ ಸಂಬಂಧಪಟ್ಟ ಚುನಾವಣಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಕೆಲವು ಸ್ಥಳೀಯ ಚಾನೆಲ್ ಗಳು ಕೆಲವು ಸಂದರ್ಶನಗಳನ್ನು  ಸುದ್ದಿಯಂತೆ ಪ್ರಕಟಿಸಿದ್ದರೆ, ಇನ್ನು ಕೆಲವು ಚಾನೆಲ್ ಗಳು ಅದನ್ನೇ ಜಾಹೀರಾತನ್ನಾಗಿ ಪ್ರಕಟಿಸಲು ಎಂ ಸಿ ಎಂ ಸಿ ಸಮಿತಿಯ ಅನುಮತಿ ಕೋರಿ ಸಿಡಿಗಳನ್ನು ಸಲ್ಲಿಸಿದ್ದವು. ಈ ಪ್ರಕರಣಗಳ ಕುರಿತು ಸಭೆ ಚರ್ಚಿಸಿತು.ಇನ್ನು ಕೆಲವು ಪ್ರಮುಖ ದೈನಿಕಗಳಲ್ಲಿ ಪ್ರಮುಖ ಸ್ಪೇಸ್ ನಲ್ಲಿ ಚಿತ್ರಗಳು ಸುದ್ದಿಗೆ ಸಂಬಂದಿತವಲ್ಲದೆ ಪ್ರಕಟಗೊಂಡದ್ದನ್ನು ಸಮಿತಿಯಲ್ಲಿ ಚರ್ಚಿಸಿ ನಿರಂತರವಾಗಿ ಇಂತಹ ಸುದ್ದಿಗಳ ಮೇಲೆ ಕಣ್ಣಿಡಲು ಜಿಲ್ಲಾ ಚುನಾವಣಾಧಿಕಾರಿಗಳು ಸೂಚಿಸಿದರು.
    ಮುದ್ರಣ ಮಾಧ್ಯಮದಲ್ಲಿ ಅಪರೋಕ್ಷವಾಗಿ ಬೆಂಬಲಿಗರು ಅಭ್ಯರ್ಥಿಯ ಅನುಮತಿ ಇಲ್ಲದೆ ಜಾಹೀರಾತು ಪ್ರಕಟಿಸಲು ಅವಕಾಶವಿಲ್ಲ. ಇದು ಸ್ಪಷ್ಟ ಕಾನೂನು ಉಲ್ಲಂಘನೆಎಂದು ಸಮಿತಿ ನಿರ್ಧರಿಸಿತು.ಹಾಗೂ ಕಾರಣ ಕೇಳಿ ನೋಟೀಸು ನೀಡಿ 24 ಗಂಟೆಯೊಳಗೆ ಸೂಕ್ತ ಉತ್ತರ ಬಾರದಿದ್ದರೆ ಅಭ್ಯರ್ಥಿಯ ಖರ್ಚು ವೆಚ್ಚಕ್ಕೆ ಈ ಜಾಹೀರಾತನ್ನು ಸೇರಿಸಲಾಗುವುದಲ್ಲದೆ, ಕಾನೂನು ಉಲ್ಲಂಘನೆಗೆ ಕಾನೂನು ಪ್ರಕಾರ ಕ್ರಮಕೈಗೊಳ್ಳಲು ಜಿಲ್ಲಾಚುನಾವಣಾಧಿಕಾರಿ ನಿರ್ಧರಿಸಿದರು.ಸಮಿತಿಯಎಲ್ಲ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.ಎಲ್ಲ ಚುನಾವಣಾಧಿಕಾರಿಗಳಿಗೆ ಈ ಸಂಬಂಧಎಲ್ಲ ಮಾಹಿತಿಯನ್ನುರವಾನಿಸಲು ಜಿಲ್ಲಾ ಚುನಾವಣಾಧಿಕಾರಿಗಳು ಸೂಚಿಸಿದರು.

ಸ್ಥಳೀಯ ಸುದ್ದಿ ಚಾನೆಲ್ ಗಳ ಗಮನಕ್ಕೆ

ಮಂಗಳೂರು, ಏಪ್ರಿಲ್. 19 : ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಹಿನ್ನಲೆಯಲ್ಲಿ ಜಿಲ್ಲೆಯ ಎಂ ಸಿ ಎಂಸಿ ಸಮಿತಿಯು ಗಮನಿಸಿದಂತೆ ಸ್ಥಳೀಯ ಕೇಬಲ್ ಟಿ ವಿ ಮತ್ತು ಚಾನೆಲ್ ಗಳಲ್ಲಿ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೆ ಪರೋಕ್ಷ ಚುನಾವಣಾ ಜಾಹೀರಾತು/ ಪ್ರಚಾರಗಳು ಪ್ರಸಾರವಾಗುತ್ತಿರುವುದನ್ನು ಗಮನಿಸಲಾಗಿದೆ.
           
ಮಾನ್ಯ ಸರ್ವೋಚ್ಚ ನ್ಯಾಯಾಲಯದ ಎಸ್ ಎಲ್ ಪಿ (ಸಿ) ನಂ. 6679/2004 ತೀರ್ಪಿನ ಅನ್ವಯ ಸ್ಥಳೀಯ ಕೇಬಲ್ ಮತ್ತು ಟಿವಿ ಚಾನೆಲ್ ಗಳು ಚುನಾವಣಾ ಪ್ರಚಾರ /ಜಾಹೀರಾತು ಪ್ರಸಾರಕ್ಕೆ ಸಕ್ಷಮ ಪ್ರಾಧಿಕಾರದ ಪೂರ್ವಾನುಮೋದನೆ ಪಡೆಯಬೇಕಿದೆ. ಒಂದು ವೇಳೆ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯದಿದ್ದಲ್ಲಿ  ಕೇಬಲ್ ಅಂಡ್ ಟಿವಿ ನೆಟ್ ವರ್ಕ್ ರೆಗ್ಯುಲೇಷನ್ ಆಕ್ಟ್ 1995 ಹಾಗೂ ಸುಪ್ರೀಂ ಕೋರ್ಟ್ ನ ಆದೇಶದ ಉಲ್ಲಂಘನೆಗೆ ಒಳಪಡುವುದರಿಂದ ಅದರಂತೆ ಕ್ರಮ ಜರುಗಿಸುವುದು ಅನಿವಾರ್ಯ ವಾಗಿರುತ್ತದೆ.
ಆದುದರಿಂದ ಜಿಲ್ಲೆಯ ಎಲ್ಲ ಕೇಬಲ್ ಟಿವಿ ಮತ್ತು ಚಾನೆಲ್ಗಳಲ್ಲಿ ಚುನಾವಣಾ ಪ್ರಚಾರ ಪ್ರಸಾರ ಮಾಡುವ ಮೊದಲು ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಕಡ್ಡಾಯವಾಗಿ ಪಡೆದುಕೊಳ್ಳುವಂತೆ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

ಚುನಾವಣಾ ಪ್ರಚಾರ ಸಾಮಗ್ರಿಗೆ ಅನುಮತಿ ಅಗತ್ಯ: ಜಿಲ್ಲಾಧಿಕಾರಿ

ಮಂಗಳೂರು, ಏಪ್ರಿಲ್.19 : ಭಾರತ ಚುನಾವಣಾ ಆಯೋಗವು ಪ್ರಜಾಪ್ರಾತಿನಿಧ್ಯ ಕಾಯಿದೆ. 1951ರ ಪ್ರಕರಣ 127ಎ ಅನ್ವಯ ಚುನಾವಣಾ ಪ್ರಚಾರಕ್ಕಾಗಿ ಮುದ್ರಿಸಲ್ಪಡುವ ಕರಪತ್ರ,ಪೋಸ್ಟರ್ ಇತ್ಯಾದಿಗಳ ವಿವರಗಳನ್ನು ಸಂಬಂಧಪಟ್ಟ ಜಿಲ್ಲಾ ಚುನಾವಣಾಧಿಕಾರಿಯವರಿಗೆ 3 ದಿನಗಳೊಳಗಾಗಿ ಪ್ರಕಾಶಕರ/ಮುದ್ರಕರ ಎ ಮತ್ತು ಬಿ ಘೋಷಣೆಯೊಂದಿಗೆ ಸಲ್ಲಿಸಿ ಅನುಮೋದನೆ ಪಡೆದು ಪ್ರಕಟಪಡಿಸುವ ಕುರಿತಂತೆ ಈಗಾಗಲೇ ಸಾಕಷ್ಟು ಬಾರಿ ಮಾಧ್ಯಮದ ಮೂಲಕ ತಿಳಿಸಲಾಗಿದೆ.
             ಆದರೂ ಪತ್ರಿಕೆಗಳಲ್ಲಿ 127ಎ ರಲ್ಲಿನ ನಿರ್ದೇಶನಗಳನ್ನು ಉಲ್ಲಂಘಿಸಿ ಜಾಹೀರಾತು ಹಾಗೂ ಪ್ರಚಾರ ಪ್ರಕಟಣೆಗಳು ಮುದ್ರಿಸಲ್ಪಡುತ್ತಿರುವುದು ಕಂಡು ಬರುತ್ತಿದೆ. ಪ್ರಜಾಪ್ರಾತಿನಿಧ್ಯ ಕಾಯಿದೆಯನ್ವಯ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುವ ಜಾಹೀರಾತುಗಳು ಹಾಗೂ ಪೇಯ್ಡ್ ನ್ಯೂಸ್ (ಕಾಸಿಗಾಗಿ ಸುದ್ದಿ) ಇತರೆ ದಾಖಲೆಗಳು (other documents) ವ್ಯಾಪ್ತಿಗೆ ಒಳಪಡುತ್ತಿದ್ದು, ಅದರನ್ವಯ ಪ್ರಕರನ 127ಎ ರಲ್ಲಿನ ನಿರ್ದೇಶನಗಳನ್ನು ಇಂತಹ ಜಾಹೀರಾತುಗಳು ಹಾಗೂ ಕಾಸಿಗಾಗಿ ಸುದ್ದಿ ಗಳ ಸಂದರ್ಭದಲ್ಲಿಯೂ ಪರಿಗಣಿಸಬೇಕಾಗುತ್ತದೆ..
ಆದುದರಿಂದ ಯಾವುದೇ ದೃಢೀಕೃತ ಉಲ್ಲಂಘನೆಯ ಜಾಹೀರಾತು/ ಕಾಸಿಗಾಗಿ ಸುದ್ದಿ ಗಳಿಗೆ ಸಂಬಂಧಪಟ್ಟಂತೆ ಪ್ರಕರಣ 127ಎ ಅನ್ವಯ ಕ್ರಮ ಜರುಗಿಸಲು ಅವಕಾಶವಿರುವುದನ್ನು ಪುನಹ ಮನವರಿಕೆ ಮಾಡಿಕೊಡಲಾಗುತ್ತಿದೆ. ಈ ಸೂಚನೆಗಳನ್ನು ಗಮನದಲ್ಲಿರಿಸಿ ಜಿಲ್ಲೆಯ ಎಲ್ಲ ಪ್ರಕಾಶಕರು/ ಮುದ್ರಕರು ಯಾವುದೇ ನಿಯಮ ಉಲ್ಲಂಘನೆಯಾಗದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಕಟ್ಟುನಿಟ್ಟಿನ ಸೂಚನೆಯನ್ನು ಜಿಲ್ಲಾ ಚುನಾವಣಾಧಿಕಾರಿಗಳು ನೀಡಿದ್ದಾರೆ. ಜಿಲ್ಲೆಯ ಎಲ್ಲ ಸಂಬಂಧಪಟ್ಟ ಎಲ್ಲ ಚುನಾವಣಾಧಿಕಾರಿಗಳು 127 ಎ ಉಲ್ಲಂಘನೆಯ ಪ್ರಕರಣಗಳ ಬಗ್ಗೆ ನಿಯಮಾನುಸಾರ ಕ್ರಮ ಜರುಗಿಸಲು ನಿರ್ದೇಶಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
 

Thursday, April 18, 2013

Voice SMS ವಿರುದ್ಧ ದೂರುಕೊಡಿ:1077

ಮಂಗಳೂರು ಎಪ್ರಿಲ್ 18:-ವಿವಿಧ ರಾಜಕೀಯ ಪಕ್ಷದ ಅಭ್ಯರ್ಥಿಗಳು ಎಸ್ಎಂಎಸ್(sms)
ಮೂಲಕ (ವಾಯಿಸ್ ಮೆಸೆಜ್) ಧ್ವನಿಮುದ್ರಿತ ಸಂದೇಶಗಳ ಮೂಲಕ ಮತದಾರರನ್ನು ತಲುಪುತ್ತಿರುವುದು ಚುನಾವಣಾ ಆಯೋಗದ ಗಮನಕ್ಕೆ ಬಂದಿದ್ದು,ಎಂಸಿಎಂಸಿ ಸಮಿತಿಯ ಅನುಮತಿ ಪಡೆಯದೆ ಕಳುಹಿಸುವ ಈ ಜಾಹೀರಾತುಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು.ಸರ್ವಿಸ್ ಪ್ರೊವೆಡರ್ ಗಳ ವಿರುದ್ಧವೂ ಸೆಕ್ಷನ್ 127 ಆರ್ ಪಿ ಆಕ್ಟ್ 1951 ರಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು.

ಚುನಾವಣೆ 2013- ಸಾರ್ವಜನಿಕ ಸಹಕಾರ ಕೋರಿದೆ ಕೆ ಎಸ್ ಆರ್ ಟಿ ಸಿ


ಮಂಗಳೂರು, ಎಪ್ರಿಲ್.18:- ದಿನಾಂಕ 5-5-13 ರಂದು ಜಿಲ್ಲೆಯಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ , ಚುನಾವಣೆ ಕರ್ತವ್ಯ ನಿರ್ವಹಿಸುವ ಬಗ್ಗೆ ಮತಗಟ್ಟೆಗಳಿಗೆ ನೇಮಕ ಮಾಡಲಾದ ಸಿಬ್ಬಂದಿಗಳನ್ನು ಕರೆದೊಯ್ಯಲು ಹಾಗೂ ಪೋಲೀಸ್ ಬಂದೋಬಸ್ತಿಗೆ ಸಂಸ್ಥೆಯ  ವಾಹನಗಳನ್ನು ನೀಡುವಂತೆ  ಜಿಲ್ಲಾ ಚುನಾವಣಾಧಿಕಾರಿಗಳು ಆದೇಶಿಸಿರುವಂತೆ, ಮಂಗಳೂರು ವಿಭಾಗದ ಅತೀ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳನ್ನು ನೀಡಲಾಗುವುದು. ಇದರಿಂದಾಗಿ ವಾಹನಗಳ ಕೊರತೆಯುಂಟಾಗಿ ಕೆಲವು ಮಾರ್ಗಸೂಚಿಗಳನ್ನು ರದ್ದುಗೊಳಿಸಲಾಗುವುದೆಂದು ಕೆ ಎಸ್ ಆರ್ ಟಿ ಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿರುತ್ತಾರೆ. ಸಾರ್ವಜನಿಕರು ಸಹಕರಿಸಬೇಕೆಂದು ಅವರು ಕೋರಿದ್ದಾರೆ.

Daily Report on Violation Of Model Code of Conduct and Excise Related Cases

VIEW

Daily Report on Violation Of Model Code of Conduct and Excise Related Cases

VIEW

Wednesday, April 17, 2013

ವಿದ್ಯಾರ್ಥಿಗಳಿಂದ ಮತದಾನದ ಪ್ರತಿಜ್ಞಾವಿಧಿ ಸ್ವೀಕಾರ


ಚುನಾವಣಾ ವೀಕ್ಷಕರ ಭೇಟಿಗೆ ಸಮಯ ಹಾಗೂ ಸ್ಥಳ

ಮಂಗಳೂರು, ಎಪ್ರಿಲ್. 17 :-ದಕ್ಷಿಣಕನ್ನಡ ಜಿಲ್ಲೆಯ  ವಿಧಾನಸಭಾ ಚುನಾವಣೆಗೆ ವೀಕ್ಷಕರನ್ನಾಗಿ ಚುನಾವಣಾ ಆಯೋಗ ನೇಮಕ ಮಾಡಿದೆ. ಚುನಾವಣೆಗೆ ಸಂಬಂಧಿಸಿದ ಯಾವುದೇ ತಕರಾರುಗಳಿದ್ದಲ್ಲಿ ದೂರವಾಣಿ ಇಲ್ಲವೇ ಪತ್ರದ ಮೂಲಕ ಇವರನ್ನು ಸಂಪರ್ಕಿಸಬಹುದಾಗಿದೆ.
ಜಿಲ್ಲೆಯ  ವಿಧಾನಸಭಾ ಕ್ಷೇತ್ರಗಳಿಗೆ ನೇಮಕಗೊಂಡಿರುವ ವೀಕ್ಷಕರ ಹೆಸರು ಹಾಗೂ ಅವರ ಸಂಚಾರಿ ದೂರವಾಣಿ ಸಂಖ್ಯೆಗಳು ಹಾಗೂ ವಾಸ್ತವ್ಯದ ವಿಳಾಸ ಮತ್ತು ಭೇಟಿಯ ಸಮಯ ಈ ಕೆಳಗಿನಂತಿವೆ.
200 ಬೆಳ್ತಂಗಡಿ ಕ್ಷೇತ್ರಕ್ಕೆ ವೀಕ್ಷಕರಾಗಿ ಡಾ.ಜಗದೀಶ್ ಡಿ.ಪಾಟೀಲ್, ಐಎಎಸ್.,  ಇವರ ದೂರವಾಣಿ ಸಂಖ್ಯೆ 9483506408 ಪ್ರವಾಸಿ ಬಂಗ್ಲೆ ಬೆಳ್ತಂಗಡಿಯಲ್ಲಿ ಸಂಜೆ 4.00 ಗಂಟೆಯಿಂದ 5.00 ಗಂಟೆ ವರೆಗೆ/202 ಮಂಗಳೂರು ನಗರ ಉತ್ತರ ಕ್ಷೇತ್ರಕ್ಕೆ ಡಾ.ದಿನೇಶ್ ಕುಮಾರ್ ಗೋಯಲ್,ಐಎಎಸ್., ದೂರವಾಣಿ ಸಂಖ್ಯೆ 9483506402 ಮಂಗಳೂರು ಕದ್ರಿ ಸರ್ಕ್ಯುಟ್ ಹೌಸ್ ನಲ್ಲಿ ಸಂಜೆ 5.00 ರಿಂದ 6.00 ಗಂಟೆ ವರೆಗೆ/203 ಮಂಗಳೂರು ನಗರ ದಕ್ಷಿಣ ಕ್ಷೇತ್ರಕ್ಕೆ ಶ್ರೀ ಪುಷ್ಯಪತಿ ಸಕ್ಸೇನಾ, ಐಎಎಸ್., ದೂರವಾಣಿ ಸಂಖ್ಯೆ 9483506403 ಮಹಾನಗರಪಾಲಿಕೆ ಕಚೇರಿ ಚುನಾವಣಾ ವೀಕ್ಷಕರ ಕೊಠಡಿಯಲ್ಲಿ ಸಂಜೆ 4.00 ರಿಂದ 6.00 ಗಂಟೆ ವರೆಗೆ  /204 ಮಂಗಳೂರು ಕ್ಷೇತ್ರಕ್ಕೆ  ಆರ್.ಸಿ.ವರ್ಮಾ, ಐಎಎಸ್.,  ದೂರವಾಣಿ ಸಂಖ್ಯೆ 9483506384 ಮಂಗಳೂರು ಹ್ಯಾಟ್ಹಿಲ್ ಎಂಸಿಎಫ್ ಗೆಸ್ಟ್ ಹೌಸ್ನಲ್ಲಿ  ಸಂಜೆ 5.00 ರಿಂದ 6.00 ಗಂಟೆವರೆಗೆ /205 ಬಂಟ್ವಾಳ ಕ್ಷೇತ್ರಕ್ಕೆ ಶ್ರೀ ಪರಶುರಾಮ ಮಿಶ್ರಾ, ಐಎಎಸ್.,  ದೂರವಾಣಿ ಸಂಖ್ಯೆ 9483506405 ಬಂಟ್ವಾಳ ಪ್ರವಾಸಿ ಬಂಗ್ಲೆ (08255-232214)ಯಲ್ಲಿ  ಸಂಜೆ 4.00 ರಿಂದ 5.00 ರವರೆಗೆ ಮತ್ತು 207 ಸುಳ್ಯ ಕ್ಷೇತ್ರಕ್ಕೆ  ಅನಿಲ್ ಕುಮಾರ್ ಸಿಂಗ್, ಐಎಎಸ್.,  ದೂರವಾಣಿ ಸಂಖ್ಯೆ 9483506407 ಸುಳ್ಯ ಮೇದಿನಡ್ಕ ರಬ್ಬರ್ ಗೆಸ್ಟ್ ಹೌಸ್ ನಲ್ಲಿ (08257-230551) ಸಂಜೆ 4.00 ರಿಂದ 6.00 ಗಂಟೆ  ವರೆಗೆ ಹಾಗೂ  ಜಿಲ್ಲೆಯ ಎಲ್ಲಾ 8 ವಿಧಾನಸಭಾ ಚುನಾವಣಾ ಕ್ಷೇತ್ರಗಳಿಗೆ  ಪೋಲೀಸ್ ವೀಕ್ಷಕರಾಗಿ  ರವಿಕಾಂತ್ ಮಿತ್ತಲ್,ಐಪಿಎಸ್ ದೂರವಾಣಿ ಸಂಖ್ಯೆ 9483506383 ಮಂಗಳೂರು  ಕದ್ರಿ ಸರ್ಕ್ಯೂಟ್ ಹೌಸ್ನಲ್ಲಿ ಸಂಜೆ 5.00 ಗಂಟೆಯಿಂದ 6.00 ಗಂಟೆ ವರೆಗೆ   ಸಾರ್ವಜನಿಕರ ಭೇಟಿಗಾಗಿ ವಾಸ್ತವ್ಯವಿರುತ್ತಾರೆ. ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು,ರಾಜಕೀಯ ಪಕ್ಷದ ಪ್ರತಿನಿಧಿಯವರು ಮತ್ತು ಸಾರ್ವಜನಿಕರು ಚುನಾವಣಾ ವೀಕ್ಷಕರನ್ನು ನಿಗಧಿಪಡಿಸಿದ ಅವಧಿಯಲ್ಲಿ ವೈಯಕ್ತಿಕವಾಗಿ ಅಥವಾ ಮೇಲೆ ತಿಳಿಸಿದ ದೂರವಾಣಿ ಸಂಖ್ಯೆ ಮೂಲಕ  ಸಂಪರ್ಕಿಸಬಹುದಾಗಿದೆಯೆಂದು ಜಿಲ್ಲಾ ಚುನಾವಣಾಧಿಕಾರಿಗಳು/ಜಿಲ್ಲಾಧಿಕಾರಿಗಳು ತಿಳಿಸಿರುತ್ತಾರೆ.
                  
 

ವ್ಯವಸ್ಥಿತ ಚುನಾವಣೆಗೆ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ

ಮಂಗಳೂರು,ಏಪ್ರಿಲ್.17: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣೆಯನ್ನು ವ್ಯವಸ್ಥಿತವಾಗಿ ನಡೆಸಲು ಹಾಗೂ ಯಾವುದೇ ಅಕ್ರಮಗಳಿಗೆ ಅವಕಾಶ ನೀಡದಂತೆ ನಿಭಾಯಿಸಲು ಜಿಲ್ಲಾಧಿಕಾರಿ ಹರ್ಷಗುಪ್ತ ಅವರು ಮಂಗಳವಾರ ಸಂಜೆ ರಿಟರ್ನಿಂಗ್ ಅಧಿಕಾರಿಗಳ ಸಭೆಯನ್ನು ಕರೆದಿದ್ದರು.
ಸಭೆಯಲ್ಲಿ ಚುನಾವಣಾ ಸಿಬ್ಬಂದಿಗಳಿಗೆ ಸಮಗ್ರ ತರಬೇತಿ ನೀಡುವ ಬಗ್ಗೆ ಹಾಗೂ ಪೂರ್ವತಯಾರಿ ಬಗ್ಗೆ ಅಧಿಕಾರಿಗಳಿಂದ ಅಭಿಪ್ರಾಯಪಡೆದರು. ಸಮಗ್ರ ವ್ಯವಸ್ಥೆಯನ್ನು ತಾಂತ್ರಿಕತೆ ಹಾಗೂ ಅಧಿಕಾರಿಗಳಿ ನೆರವಿನಿಂದ ಅಪಡೇಟ್ ಮಾಡಲು ಮುಂದಾಗಿರುವ ಜಿಲ್ಲಾಧಿಕಾರಿಗಳು ಇತರ ಅಧಿಕಾರಿಗಳು ತಮ್ಮ ಉದ್ದೇಶವನ್ನು ಅರ್ಥಮಾಡಿಕೊಂಡು ಅದೇ ರೀತಿಯ ಮುನ್ನುಗ್ಗುವಿಕೆಯಿಂದ ಕಾರ್ಯತತ್ಪರರಾಗಬೇಕೆಂದು ಸೂಚನೆ ನೀಡಿದರು.
ಜಿಲ್ಲೆಯಾದ್ಯಂತ ಚುನಾವಣಾ ನೀತಿ ಸಂಹಿತೆ ಹಾಗೂ ವೆಚ್ಚದ ಮೇಲೆ ತೀವ್ರ ನಿಗಾ ವಹಿಸಲು ಸೆಕ್ಟರ್ ಮ್ಯಾಜಿಸ್ಟ್ರೇಟ್, ವಿಡಿಯೋ ಸರ್ವೆಲೆನ್ಸ್ ತಂಡಗಳಿವೆ. ಸೆಕ್ಟರ್ ಅಧಿಕಾರಿಗಳಿಗೆ ಇನ್ನೂ ಹೆಚ್ಚಿನ ತರಬೇತಿ ನೀಡಲಾಗುವುದು. ಎಲ್ಲ ಪ್ರಿಸೈಂಡಿಗ್ ಅಧಿಕಾರಿಗಳಿಗೂ ತರಬೇತಿ ಹಾಗೂ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲ ಅಧಿಕಾರಿಗಳಿಗೂ ಸಮಗ್ರ ತರಬೇತಿ ಹಾಗೂ ಮಾಹಿತಿ ನೀಡುವ ಬಗ್ಗೆ ಆರ್ ಒ ಗಳಿಗೆ ಸೂಚನೆ ನೀಡಿದರು.  ಸೆಕ್ಟರ್ ಅಧಿಕಾರಿಗಳಿಗೆ ಏಪ್ರಿಲ್ 19ರಂದು ತರಬೇತಿ ಆಯೋಜಿಸಲಾಗಿದೆ.
ಪೋಸ್ಟಲ್ ಬ್ಯಾಲೆಟ್ ಬಗ್ಗೆ ಸವಿವರ ಚರ್ಚೆ ನಡೆದು ಸಭೆಯಲ್ಲಿ ಮತದಾನದಲ್ಲಿ ಲೋಪಗಳನ್ನು ಕನಿಷ್ಠಗೊಳಿಸಲು ಪೋಸ್ಟಲ್ ಬ್ಯಾಲೆಟ್ ರಿಜಿಸ್ಟರ್ ನ್ನು ಮುಂಚಿತವಾಗಿ ರಚಿಸಲು ಸೂಚಿಸಿದರು.
ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ಅಗತ್ಯವಿರುವ ವಾಹನಗಳು ಹಾಗೂ ರೂಟ್ ಮ್ಯಾಪ್ ಗಳ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ರೂಟ್ ಮ್ಯಾಪ್ ಗೆ ಹಾಗೂ ಇದಕ್ಕೆ ಪೂರಕ ವ್ಯವಸ್ಥೆ ಒದಗಿಸಲು  ವಿಶೇಷ ನೋಡಲ್ ಅಧಿಕಾರಿಯೊಬ್ಬರನ್ನು ನೇಮಿಸಲು ನಿರ್ದೇಶನ ನೀಡಿದರು.
ದೂರುಗಳು ನಮಗೆ ಬರಲಿ ಎಂದು ಕಾಯದೆ ಸ್ವಯಂಪ್ರೇರಿತವಾಗಿ ದೂರುಗಳನ್ನು ಅರಸಿ ವರದಿ ಮಾಡಿ ಎಂದ ಜಿಲ್ಲಾಧಿಕಾರಿಗಳು, ಅಗತ್ಯ ಮೂಲಸೌಕರ್ಯಗಳನ್ನು ಸಿದ್ದಪಡಿಸಿಕೊಳ್ಳಿ. ಇವಿಎಂ ನ ಸೆಕೆಂಡ್ ರ್ಯಾಂಡಮೈಸೇಷನ್ ಬಗ್ಗೆ ಈ ಸಂದರ್ಭದಲ್ಲಿ ಪಕ್ಷದ ಪ್ರತಿನಿಧಿಗಳ ಉಪಸ್ಥಿತಿಯನ್ನು ಖಾತರಿಪಡಿಸಿಕೊಳ್ಳಿ ಎಂದ ಅವರು, ಎಲ್ಲ ಕಾರ್ಯಕ್ರಮಗಳು ಸುವ್ಯವಸ್ಥಿತವಾಗಿರಬೇಕೆಂದು ಜಿಲ್ಲಾಧಿಕಾರಿಗಳು ನಿರ್ದೇಶಿಸಿದರು. ಅಪರ ಜಿಲ್ಲಾಧಿಕಾರಿ ದಯಾನಂದ ಕೆ. ಎ, ಪಾಲಿಕೆ ಆಯುಕ್ತರಾದ ಡಾ. ಹರೀಶ್ ಹಾಗೂ ಇತರ ಅಧಿಕಾರಿಗಳು ಸಭೆಯಲ್ಲಿದ್ದರು.

ಮತದಾರರಲ್ಲಿ ಜಾಗೃತಿ ಮೂಡಿಸಲು ಪ್ಯಾರಾ ಗ್ಲೈಡಿಂಗ್

Tuesday, April 16, 2013

Daily Report on Violation Of Model Code of Conduct and Excise Related Cases

VIEW

ವಿಧಾನಸಭಾ ಚುನಾವಣೆಗೆ ವೀಕ್ಷಕರ ನೇಮಕ

ಮಂಗಳೂರು, ಎಪ್ರಿಲ್. 16:-ದಕ್ಷಿಣಕನ್ನಡ ಜಿಲ್ಲೆಯ  ವಿಧಾನಸಭಾ ಚುನಾವಣೆಗೆ ವೀಕ್ಷಕರಾಗಿ ಎಂಟು ಮಂದಿಯನ್ನು ಚುನಾವಣಾ ಆಯೋಗ ನೇಮಕ ಮಾಡಿದೆ. ಚುನಾವಣೆಗೆ ಸಂಬಂಧಿಸಿದ ಯಾವುದೇ ತಕರಾರುಗಳಿದ್ದಲ್ಲಿ ದೂರವಾಣಿ ಇಲ್ಲವೇ ಪತ್ರದ ಮೂಲಕ ಇವರನ್ನು ಸಂಪರ್ಕಿಸಬಹುದಾಗಿದೆ.
ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಿಗೆ ನೇಮಕಗೊಂಡಿರುವ ವೀಕ್ಷಕರ ಹೆಸರು ಹಾಗೂ ಅವರ ಸಂಚಾರಿ ದೂರವಾಣಿ ಸಂಖ್ಯೆಗಳು ಈ ಕೆಳಗಿನಂತಿವೆ.
200 ಬೆಳ್ತಂಗಡಿ ಕ್ಷೇತ್ರಕ್ಕೆ ವೀಕ್ಷಕರಾಗಿ ಡಾ.ಜಗದೀಶ್ ಡಿ.ಪಾಟೀಲ್, ಇವರ ದೂರವಾಣಿ ಸಂಖ್ಯೆ 9483506408/201 ಮೂಡಬಿದ್ರೆ ಕ್ಷೇತ್ರಕ್ಕೆ  ಮುಖೇಶ್ ಕುಮಾರ್ ದೂರವಾಣಿ ಸಂಖ್ಯೆ 9483506401/202, ಮಂಗಳೂರು ಉತ್ತರ ಕ್ಷೇತ್ರಕ್ಕೆ ಡಾ.ದಿನೇಶ್ ಕುಮಾರ್ ಗೋಯಲ್ ದೂರವಾಣಿ ಸಂಖ್ಯೆ 9483506402/203, ಮಂಗಳೂರು ದಕ್ಷಿಣ ಕ್ಷೇತ್ರಕ್ಕೆ ಪುಷ್ಯಪತಿ ಸಕ್ಸೇನಾ ದೂರವಾಣಿ ಸಂಖ್ಯೆ 9483506403/204, ಮಂಗಳೂರು ಕ್ಷೇತ್ರಕ್ಕೆ  ಆರ್.ಸಿ.ವರ್ಮಾ ದೂರವಾಣಿ ಸಂಖ್ಯೆ 9483506384/205, ಬಂಟ್ವಾಳ ಕ್ಷೇತ್ರಕ್ಕೆ  ಪರಶುರಾಮ ಮಿಶ್ರಾ ದೂರವಾಣಿ ಸಂಖ್ಯೆ 9483506405/206 ,ಪುತ್ತೂರು ಕ್ಷೇತ್ರಕ್ಕೆ  ಮಂಜು ರಾಜ್ಪಾಲ್ ದೂರವಾಣಿ ಸಂಖ್ಯೆ 9483506406 ಮತ್ತು 207 ಸುಳ್ಯ ಕ್ಷೇತ್ರಕ್ಕೆ ಅನಿಲ್ ಕುಮಾರ್ ಸಿಂಗ್ ದೂರವಾಣಿ ಸಂಖ್ಯೆ 9483506407 ಆಗಿರುತ್ತದೆ. ಜಿಲ್ಲೆಗೆ ಪೋಲೀಸ್ ವೀಕ್ಷಕರಾಗಿ  ರವಿಕಾಂತ್ ಮಿತ್ತಲ್ ದೂರವಾಣಿ ಸಂಖ್ಯೆ 9483506383 ಆಗಿರುತ್ತದೆ.
ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ತಕರಾರುಗಳಿದ್ದಲ್ಲಿ ಸಾರ್ವಜನಿಕರು ಮೇಲಿನ ವೀಕ್ಷಕರುಗಳಿಗೆ ಮನವಿ ಸಲ್ಲಿಸಬಹುದೆಂದು ಜಿಲ್ಲಾ ಚುನಾವಣಾಧಿಕಾರಿಗಳು/ಜಿಲ್ಲಾಧಿಕಾರಿಗಳು ತಿಳಿಸಿರುತ್ತಾರೆ.
ಚುನಾವಣೆ ಕುರಿತ ಖರ್ಚುವೆಚ್ಚದ ವೀಕ್ಷಕರುಗಳಾಗಿ 200 ಬೆಳ್ತಂಗಡಿ/201 ಮೂಡಬಿದ್ರಿ/206 ಪುತ್ತೂರು /207 ಸುಳ್ಯಕ್ಷೇತ್ರದವೀಕ್ಷಕರಾಗಿ ವಿನೀಶ್ ಚೌಧರಿದೂರವಾಣಿ ಸಂಖ್ಯೆ 9483506411,204ಮಂಗಳೂರು ದಕ್ಷಿಣ ,205 ಬಂಟ್ವಾಳ ಕ್ಷೇತ್ರದ ವೀಕ್ಷಕರಾಗಿ ಆರ್.ಕೆ. ಅಗರ್ವಾಲ್ 9483506388/202ಮಂಗಳೂರು ಉತ್ತರ,203 ಮಂಗಳೂರು ದಕ್ಷಿಣ ಕ್ಷೇತ್ರದ ವೀಕ್ಷಕರಾಗಿ  ಮೊಹಮದ್ ಶಂಸದ್ ಅಲಂ ದೂರವಾಣಿ ಸಂಖ್ಯೆ 9483506399  ಆಗಿರುತ್ತದೆ. ಚುನಾವಣೆಖರ್ಚು ವೆಚ್ಚಕ್ಕೆ  ಸಂಬಂಧಿಸಿದಂತೆ ಯಾವುದೇ ತಕರಾರುಗಳಿದ್ದಲ್ಲಿ ಸಾರ್ವಜನಿಕರು ಮೇಲಿನ ವೀಕ್ಷಕರುಗಳಿಗೆ ಮನವಿ ಸಲ್ಲಿಸಬಹುದೆಂದು ಜಿಲ್ಲಾ ಚುನಾವಣಾಧಿಕಾರಿಗಳು/ಜಿಲ್ಲಾಧಿಕಾರಿಗಳು ತಿಳಿಸಿರುತ್ತಾರೆ.
 

Sunday, April 14, 2013

Daily Report on Violation Of Model Code of Conduct and Excise Related Cases

VIEW

ಸರಳ ಅಂಬೇಡ್ಕರ್ ಜಯಂತಿ ಆಚರಣೆ

ಮಂಗಳೂರು. ಏಪ್ರಿಲ್. 14 : ಜಿಲ್ಲಾಡಳಿತದ ವತಿಯಿಂದ ಇಂದು ಪುರಭವನದಲ್ಲಿ ಡಾ ಬಿ ಆರ್ ಅಂಬೇಡ್ಕರ್ ದಿನಾಚರಣೆಯನ್ನು ಜಿಲ್ಲಾಧಿಕಾರಿ ಹರ್ಷಗುಪ್ತ ಅವರು ಅಂಬೇಡ್ಕರ್ ಪ್ರತಿಮೆಗೆ ಹಾರ ಹಾಕುವ ಮೂಲಕ ಆಚರಿಸಿದರು.
ಸರಳ ಸಮಾರಂಭಕ್ಕೆ ಸಿಟಿ ಪೊಲೀಸ್ ಆಯುಕ್ತರಾದ ಮನಿಷ್ ಕರ್ಬಿಕರ್, ಜಿಲ್ಲಾ ಪೊಲೀಸ್ ಅಧೀಕ್ಷಕ ಅಭಿಷೇಕ್ ಗೋಯಲ್, ಜಿಲ್ಲಾ ಪಂಚಾಯತ್ ಸಿಇಒ ಡಾ ಕೆ ಎನ್ ವಿಜಯಪ್ರಕಾಶ್, ಮೂಡಾ ಕಮಿಷನರ್ ಅಜಿತ್ ಕುಮಾರ್ ಹೆಗ್ಡೆ, ಡಿಸಿಪಿ ಮುತ್ತುರಾಯ, ಪಾಲಿಕೆ ಆಯುಕ್ತರಾದ ಡಾ ಹರೀಶ್ ಕುಮಾರ್, ಸಮಾಜ ಕಲ್ಯಾಣಾಧಿಕಾರಿ ಅರುಣ್ ಫುರ್ಟಡೋ ಉಪಸ್ಥಿತರಿದ್ದರು.

 

Saturday, April 13, 2013

ಎಸ್ ಎಂ ಎಸ್ ಮೂಲಕವೂ ದೂರು ದಾಖಲಿಸಿ

ಮಂಗಳೂರು, ಏಪ್ರಿಲ್.13 : ದಕ್ಷಿಣ ಕನ್ನಡ ಜಿಲ್ಲಾಡಳಿತ ಚುನಾವಣಾ ಸಂಬಂಧ ದೂರು ದಾಖಲಿಸಲು ಎಸ್ ಎಂ ಎಸ್ ಸರ್ವಿಸ್ (ಸಂದೇಶ) ಸೇವೆ ಆರಂಭಿಸಿದ್ದು, ಯಾವುದೇ ದೂರು ದಾಖಲಿಸಲು ಈ ಮೊಬೈಲ್ ನಂಬರ್ ಬಳಸಿ;8123666266. ಎಸ್ ಎಂ ಎಸ್  ಕ್ಷೇತ್ರದ ಸಂಖ್ಯೆ, ಕಾನೂನು ಉಲ್ಲಂಘಿಸಲ್ಪಟ್ಟ ಸ್ಥಳ ಮತ್ತು ದೂರಿನ ಸಂಕ್ಷಿಪ್ತ ವಿವರಗಳನ್ನು ಒಳಗೊಂಡಿರಬೇಕು.

ಮದ್ಯಪದವಿನಲ್ಲಿ 'ಸ್ವೀಪ್ '

   ಮಂಗಳೂರು, ಏಪ್ರಿಲ್. 13 : ಕೊರಗ ಸಮುದಾಯದ ಕೊರಲ್ ತಂಡದಿಂದ ಮತದಾನದ ಕುರಿತು ಜಾಗೃತಿ ಮೂಡಿಸುವ ಕಾರ್ಯ ಕ್ರಮ ಜಿಲ್ಲಾ ಪಂಚಾ ಯತ್ ಮತ್ತು ಐಟಿ ಡಿಪಿ ಇಲಾಖೆ ವತಿ ಯಿಂದ ಸುರ ತ್ಕಲ್ ನ ಮದ್ಯ ಪದ ವಿನ ಕೊರಗ ಕಾಲನಿ ಯಲ್ಲಿ ಏಪ್ರಿಲ್ 12 ರಂದು ಸಂಜೆ ನಡೆ ಯಿತು. ಕಾರ್ಯ ಕ್ರಮದಲ್ಲಿ ಸ್ವೀಪ್  ಅಧ್ಯಕ್ಷ ರಾದ ಡಾ. ಕೆ.ಎನ್ ವಿಜಯಪ್ರಕಾಶ್ ಹಾಗೂ ಐಟಿಡಿಪಿ ಅಧಿಕಾರಿ ಸಬೀರ್ ಅಹಮದ್ ಮುಲ್ಲಾ ಅವರು ಉಪಸ್ಥಿತರಿದ್ದರು.