Wednesday, May 8, 2013

ದಕ್ಷಿಣಕನ್ನಡ ಜಿಲ್ಲೆಯ ವಿಧಾನಸಭೆ ಕ್ಷೇತ್ರಗಳ ಚುನಾವಣೆಯ ಫಲಿತಾಂಶ

ಮಂಗಳೂರು, ಮೇ.08 :-ಕರ್ನಾಟಕ ರಾಜ್ಯ ವಿಧಾನಸಭೆಗೆ ಮೇ 5,2013 ರಂದು ನಡೆದ ಚುನಾವಣೆಯಲ್ಲಿ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ವಿಜಯಿ ಅಭ್ಯರ್ಥಿಗಳು ಪಡೆದ ಮತಗಳ ವಿವರ.
200  ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ 74530 ಮತಗಳನ್ನು ಪಡೆದ  ಭಾರತೀಯ ರಾಷ್ಟ್ರೀಯ ಕಾಂಗ್ರೆಸಿನ ಅಭ್ಯರ್ಥಿ ಕೆ. ವಸಂತ ಬಂಗೇರಾರವರು ಚುನಾಯಿತರಾಗಿರುತ್ತಾರೆ. ಇವರ ಸಮೀಪದ ಸ್ಪರ್ಧಿ ಭಾರತೀಯ ಜನತಾ ಪಕ್ಷದ ರಂಜನ್ ಜಿ.ಗೌಡ ಅವರು 58,789 ಮತಗಳನ್ನು ಗಳಿಸಿದ್ದಾರೆ.
201 ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ  ಕೆ.ಅಭಯಚಂದ್ರ ಇವರು 53180   ಮತಗಳನ್ನು                  ಪಡೆದು  ಚುನಾಯಿತರಾಗಿರುತ್ತಾರೆ. ಅವರ ಸಮೀಪ ಸ್ಪರ್ಧಿ ಬಿಜೆಪಿಯ ಉಮಾನಾಥ ಕೋಟ್ಯಾನ್ 48,630 ಮತಗಳನ್ನು ಪಡೆದಿರುತ್ತಾರೆ.
202 ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಭ್ಯರ್ಥಿ ಬಿ.ಎ.ಮೊಯಿದ್ದಿನ್  ಬಾವಾ ಅವರು 69,897   ಮತಗಳನ್ನು  ಪಡೆದು  ಜಯಶಾಲಿಯಾಗಿರುತ್ತಾರೆ. ಅವರ ಸಮೀಪ ಸ್ಪರ್ಧಿ ಕೃಷ್ಣ ಜೆ.ಪಾಲೇಮಾರ್ ರವರು 64,524 ಮತಗಳನ್ನು ಪಡೆದಿರುತ್ತಾರೆ.
203 ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ  ಚುನಾವಣೆಯಲ್ಲಿ  ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೋ ರವರು 67,829   ಮತಗಳನ್ನು  ಪಡೆದು  ಚುನಾಯಿತರಾಗಿರುತ್ತಾರೆ. ಸಮೀಪ ಸ್ಪರ್ಧಿ ಎನ್.ಯೋಗೀಶ್ ಭಟ್ ಇವರು 55554 ಮತಗಳನ್ನು ಪಡೆದಿರುತ್ತಾರೆ.
204 ಮಂಗಳೂರು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಯು.ಟಿ.ಖಾದರ್ 69,450   ಮತಗಳನ್ನು ಪಡೆದು  ಚುನಾಯಿತರಾಗಿರುತ್ತಾರೆ. ಸಮೀಪ  ಸ್ಪರ್ಧಿ ಚಂದ್ರಹಾಸ ಉಳ್ಳಾಲ  40,339 ಮತಗಳನ್ನು ಪಡೆದಿರುತ್ತಾರೆ.
205 ಬಂಟ್ವಾಳ ವಿಧಾನಸಭಾ ಕ್ಷೇತ್ರದ  ಚುನಾವಣೆಯಲ್ಲಿ  ಕಾಂಗ್ರೆಸ್ ಅಭ್ಯರ್ಥಿ ಬಿ.ರಮಾನಾಥ ರೈಯವರು 81,655  ಮತಗಳನ್ನು  ಪಡೆದು  ಚುನಾಯಿತರಾಗಿರುತ್ತಾರೆ. ಸಮೀಪ ಸ್ಪರ್ಧಿ ರಾಜೇಶ್ ನಾಯಕ್ ಉಳ್ಳಿಪ್ಪಾಡಿ ಇವರು 63815 ಮತಗಳನ್ನು ಪಡೆದಿರುತ್ತಾರೆ.
206 ಪುತ್ತೂರು ವಿಧಾನಸಭಾ ಕ್ಷೇತ್ರದ  ಚುನಾವಣೆಯಲ್ಲಿ  ಕಾಂಗ್ರೆಸ್ ಅಭ್ಯರ್ಥಿ ಶಕುಂತಳಾ ಟಿ.ಶೆಟ್ಟಿ ರವರು 66,345   ಮತಗಳನ್ನು  ಪಡೆದು  ಚುನಾಯಿತರಾಗಿರುತ್ತಾರೆ. ಸಮೀಪ ಸ್ಪರ್ಧಿ ಸಂಜೀವ ಮಟಂದೂರು ಇವರು 62056 ಮತಗಳನ್ನು ಪಡೆದಿರುತ್ತಾರೆ.
207 ಸುಳ್ಯ ವಿಧಾನಸಭಾ ಕ್ಷೇತ್ರದ  ಚುನಾವಣೆಯಲ್ಲಿ  ಬಿಜೆಪಿ ಅಭ್ಯರ್ಥಿ ಅಂಗಾರ .ಎಸ್.ರವರು 65,913   ಮತಗಳನ್ನು         ಪಡೆದು  ಚುನಾಯಿತರಾಗಿರುತ್ತಾರೆ. ಸಮೀಪ ಸ್ಪರ್ಧಿ ಡಾ..ರಘು ಇವರು 64,540 ಮತಗಳನ್ನು ಪಡೆದಿರುತ್ತಾರೆ.

Tuesday, May 7, 2013

ಮತ ಎಣಿಕೆ ಸಂಬಂಧ ಅಂತಿಮ ಸುತ್ತಿನ ಮಾಕ್ ಡ್ರಿಲ್

ಮಂಗಳೂರು ಮೇ 7 : ಮೇ 5 ರಂದು ನಡೆದ ರಾಜ್ಯ ವಿಧಾನ ಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಗೆ ದಕ್ಷಿಣಕನ್ನಡ ಜಿಲ್ಲೆ ಸಜ್ಜಾಗಿದ್ದು, ಈ ಸಂಬಂಧ ಅಂತಿಮ ಸುತ್ತಿನ ಮಾಕ್ ಡ್ರಿಲ್(ಅಣುಕು ಪ್ರದರ್ಶನ) ಜಿಲ್ಲಾಧಿಕಾರಿಗಳ ನೇತ್ರತ್ವದಲ್ಲಿಂದು ನಗರದ  ಕೆನರಾ ಕಾಲೇಜಿನಲ್ಲಿ ನಡೆಯಿತು.




ಮತ ಎಣಿಕೆಗೆ ಸಜ್ಜು- ಜಿಲ್ಲಾಧಿಕಾರಿ

ಮಂಗಳೂರು, ಮೇ.07 :ಮತ ಎಣಿಕೆ ಪ್ರಕ್ರಿಯೆಗೆ ದಕ್ಷಿಣಕನ್ನಡ ಜಿಲ್ಲೆ ಸಜ್ಜಾಗಿದ್ದು,ಇಂದು ಈ ಸಂಬಂಧ ಅಂತಿಮ ಸುತ್ತಿನ ಮಾಕ್ ಡ್ರಿಲ್(ಅಣುಕು ಪ್ರದರ್ಶನ)ಸಹ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕೆನರಾ ಕಾಲೇಜಿನಲ್ಲಿ ನಡೆಯಿತು. ಚುನಾವಣಾ ಮಾಹಿತಿಯನ್ನು ಪಬ್ಲಿಕ್ ಎಡ್ರೆಸ್ ವ್ಯವಸ್ಥೆ ಮೂಲಕ (ಮೈಕ್ ) ಸಾರ್ವಜನಿಕರಿಗೆ ತಿಳಿಸಲಾಗುವುದೆಂದು ಅವರು ತಿಳಿಸಿದರು.
           ಮತ ಎಣಿಕಾ ಕೇಂದ್ರ ದಲ್ಲಿ ಮೊಬೈಲ್ ಫೋನ್ ಗಳ ಬಳಕೆಗೆ  ಚುನಾ ವಣಾ ಅಧಿ ಕಾರಿ ಗಳು,  ವೀಕ್ಷ ಕರು, ಜಿಲ್ಲಾ ಚುನಾ ವಣಾ ಅಧಿ ಕಾರಿ ಗಳಿಂದ ಅನು ಮತಿ ಪಡೆದ ವರಿಗೆ ಮಾತ್ರ ಅವ ಕಾಶ ವಿರು ತ್ತದೆ.
ಮಾದ್ಯಮ ಪ್ರತಿ ನಿಧಿಗಳು ಮೊಬೈಲ್ ಫೋನ್ ಗಳನ್ನು ಮಾದ್ಯಮ ಕೊಠಡಿ ಯಲ್ಲಿ ಮಾತ್ರ ಬಳಸ ಬಹುದಾ ಗಿದೆ. ಎಣಿಕಾ ಕೇಂದ್ರದ ಆವ ರಣ ಗಳಲ್ಲಿ ಯಾರೂ ಮೊಬೈಲ್ ಫೋನ್ ಗಳನ್ನು ಕೊಂಡೊ ಯ್ಯಬಾ ರದೆಂದು ಹಾಗೂ ಮೊಬೈಲ್ ಫೋನ್ ಗಳ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆಯೆಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ  ಹರ್ಷಗುಪ್ತ ಇವರು ತಿಳಿಸಿರುತ್ತಾರೆ.
ಎಣಿಕಾ ಕೇಂದ್ರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಹಾಗೂ ಅವರ ಎಣಿಕಾ  ಒಬ್ಬ ಏಜೆಂಟ್ ಮಾತ್ರ  ಮೊಬೈಲ್  ಫೋನ್ನ್ನು  ಕೊಂಡೊಯ್ಯಲು ಅವಕಾಶವಿದ್ದು ಅವರು ಅವುಗಳ ಬಳಕೆಯನ್ನು ತಮಗೆ ಮೀಸಲಾದ ಕೊಠಡಿಯಲ್ಲಿ ಮಾತ್ರ ಮಾಡಬಹುದಾಗಿದೆ. ಅನಾವಶ್ಯಕವಾಗಿ ಎಣಿಕಾ ಕೇಂದ್ರದ ಅಂಗಳದಲ್ಲಿ( ಕಾರಿಡಾರ್) ಅತ್ತಿಂದತ್ತ ಓಡಾಡುವುದನ್ನು ಫೋನ್ನಲ್ಲಿ ಮಾತನಾಡುವುದನ್ನು ನಿಷೇಧಿಸಲಾಗಿದೆ.
ಚುನಾವಣಾ ಎಣಿಕೆ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಅಂದರೆ ಮತಯಂತ್ರವನ್ನು ಸ್ಟ್ರಾಂಗ್ ರೂಮಿನಿಂದ ಎಣಿಕಾ ಕೊಠಡಿಗೆ ಸಾಗಿಸುವುದು ಅದನ್ನು ತೆರೆಯುವುದು ಎಣಿಕೆ ಮಾಡುವುದು ಇನ್ನಿತರೆ ಎಲ್ಲಾ ಪ್ರಕ್ರಿಯೆಗಳನ್ನು ವಿಡಿಯೋ ಕ್ಯಾಮರಾ ಮೂಲಕ ದಾಖಲಿಸುವ ವ್ಯವಸ್ಥೆ ಮಾಡಲಾಗಿದೆ.
ಅಂಚೆ ಮತಪತ್ರಗಳ ಎಣಿಕೆಯ ಬಗ್ಗೆ ಚುನಾವಣಾಧಿಕಾರಿ ಸಹಾಯಕ ಚುನಾವಣಾಧಿಕಾರಿಗಳಿಗೆ ವಿಶೇಷ ತರಬೇತಿಯನ್ನು ನೀಡಲಾಗಿದ್ದು, ಅವರ ನಿರ್ಧಾರವೇ ಅಂತಿಮವಾಗಿರುತ್ತದೆಯೆಂದು ಜಿಲ್ಲಾ ಚುನಾವಣಾಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.
ನಿಷೇದಾಜ್ಞೆ ಜಾರಿ :
  ರಾಜ್ಯ ವಿಧಾನ ಸಭಾ ಚುನಾವಣೆ - 2013 ರಂದು ಮಂಗಳೂರು ನಗರದ ಕೊಡಿಯಾಲ್ ಬೈಲ್ ಕೆನರಾ ವಿದ್ಯಾಲಯದಲ್ಲಿ ನಡೆಯಲಿರುವ  ಮತ ಎಣಿಕೆ ನಂತರ ಫಲಿತಾಂಶದಲ್ಲಿ ವಿಜಯಿಯಾದ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ತಮ್ಮ ಕ್ಷೇತ್ರಗಳೆಡೆಗೆ ತಮ್ಮ ವಿಜಯೋತ್ಸವ ಆಚರಿಸುತ್ತಾ ಮೆರವಣಿಗೆಯಲ್ಲಿ ತೆರಳುತ್ತಾರೆ.ಸಾರ್ವಜನಿಕ ಹಿತದೃಷ್ಟಿಯಿಂದ ವಿಜಯೋತ್ಸವ ಮೆರವಣಿಗೆಯನ್ನು ಪ್ರತಿಬಂಧಿಸುವ ಸಲುವಾಗಿ  ದಿನಾಂಕ 8-5-13 ರಂದು ಬೆಳಿಗ್ಗೆ 6.00 ಗಂಟೆಯಿಂದ ದಿನಾಂಕ 11-5-13 ರಂದು ಬೆಳಿಗ್ಗೆ 6.00 ಗಂಟೆಯ  ವರೆಗೆ ಯಾವುದೇ ಸಭೆ ಸಮಾರಂಭ ಮತ್ತು ಪ್ರತಿಭಟನಾ ಮೆರವಣಿಗೆಯನ್ನು ನಡೆಸದಂತೆ ನಿಷೇದಾಜ್ಞೆಯನ್ನು   ಪೋಲೀಸ್ ಆಯುಕ್ತರು ಹಾಗೂ ಎಡಿಷನಲ್ ಡಿಸ್ಟ್ರಿಕ್ಟ್ ಮೆಜಿಸ್ಟ್ರೇಟ್  ಮನೀಷ್ ಖರ್ಬಿಕರ್ ಘೋಷಿಸಿರುತ್ತಾರೆ.
 ವಾಹನ ಸಂಚಾರದಲ್ಲಿ ಬದಲಾವಣೆ:
ರಾಜ್ಯ ವಿಧಾನ ಸಭಾ ಚುನಾವಣೆ  -2013  ಮತ ಎಣಿಕೆದಿನಾಂಕ 8-5-13 ರಂದು ಬೆಳಿಗ್ಗೆ 7.00 ಗಂಟೆಯಿಂದ ಮಂಗಳೂರು ನಗರದ ಕೊಡಿಯಾಲ್ ಬೈಲ್ ಕೆನರಾ ವಿದ್ಯಾಲಯದಲ್ಲಿ ನಡೆಯಲಿದ್ದು, ಈ ಸಂದರ್ಭದಲ್ಲಿ ಮತ ಎಣಿಕಾ ಕೇಂದ್ರದ ಸುತ್ತಮುತ್ತ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಬದಲಿ ಸಂಚಾರ ವ್ಯವಸ್ಥೆಯನ್ನು ಮಾಡಿ ಪೋಲೀಸ್ ಆಯುಕ್ತರು ಆದೇಶಿಸಿರುತ್ತಾರೆ.ಜೈಲ್ ಜಂಕ್ಷನ್ ಕಡೆಯಿಂದ ಬೆಸೆಂಟ್ ಜಂಕ್ಷನ್ ಕಡೆಯಿಂದ, ಕೆನರಾ ಕಾಲೇಜು ಕಡೆಗೆ ಚುನಾವಣೆ ಅಧಿಕಾರಿಯವರ ಹಾಗೂ ಪೋಲೀಸ್ ಅಧಿಕಾರಿಗಳ ವಾಹನ ಹೊರತು ಪಡಿಸಿ ಇತರೆ ವಾಹನಗಳ ಪ್ರವೇಶ ನಿಷೇಧಿಸಿದೆ.
ಪಿವಿಎಸ್ ನಿಂದ ಬಳ್ಳಾಲ್ ಭಾಗ್ ತನಕ ರಸ್ತೆಯ ಎರಡೂ ಬದಿ ಯಲ್ಲಿ ಯಾವುದೇ ತೆರ ನಾದ ವಾಹನ ನಿಲು ಗಡೆ ಯನ್ನು ಕಡ್ಡಾಯ ವಾಗಿ ನಿಷೇ ಧಿಸಿದೆ. ಕಪು ಚಿನ್ ಪ್ರಾದ್ ಹಾಗೂ ಕ ರಂಗಲ್ ಪಾಡಿ ಕಡೆ ಯಿಂದ ಜೈಲು ಜಂಕ್ಷನ್ ಕಡೆಗೆ ಎಲ್ಲಾ ತೆರ ನಾದ ವಾಹನ ಸಂಚಾರ ನಿಷೇ ಧಿಸಿದೆ. ಜೈಲ್ ಜಂಕ್ಷನ್ ನಿಂದ ಕೋರಿರೊಟ್ಟಿ ಕ್ರಾಸ್ ರಸ್ತೆ ವಾಣಿಜ್ಯ ಕಟ್ಟಡ ಗಳ ಪಾರ್ಕಿಂ ಗ್ ಹೊರತು ಪಡಿಸಿ ರಸ್ತೆ ಯಲ್ಲಿ ಯಾವುದೇ ವಾಹನ ನಿಲು ಗಡೆಗೆ ಅವ ಕಾಶವಿ ರುವು ದಿಲ್ಲ. ಜೈಲು ಜಂಕ್ಷನ್ ನಿಂದ ವೆಟರ್ನರಿ ಜಂಕ್ಷನ್ ತನಕ ರಸ್ತೆಯ ಎಡಬದಿಯಲ್ಲಿ ಮಾತ್ರ ವಾಹನಗಳನ್ನು ರಸ್ತೆಗೆ ಸಮಾನಾಂತರವಾಗಿ ಪಾರ್ಕ್ ಮಾಡಬಹುದಾಗಿದೆ. ಈ ಆದೇಶದನ್ವಯ ಸದರಿ ರಸ್ತೆಯಲ್ಲಿ ವಾಹನ ಸಂಚಾರ ವ್ಯವಸ್ಥೆ ಬಗ್ಗೆ ಆವಶ್ಯವರುವ ಸೂಚನಾ ಫಲಕ ಅಳವಡಿಸಲು ಹಾಗೂ ಸಂಚಾರ ನಿಯಂತ್ರಣ ಸಿಬ್ಬಂದಿಗಳನ್ನು ನೇಮಕ ಗೊಳಿಸಲು ಸಹಾಯಕ ಪೋಲೀಸ್ ಆಯುಕ್ತರು ಅಧಿಕಾರವುಳ್ಳವರಾಗಿರುತ್ತಾರೆ. .

Monday, May 6, 2013

ದ.ಕ. ಮತ ಎಣಿಕೆಗೆ ಸಜ್ಜು: ಜಿಲ್ಲಾಧಿಕಾರಿ

ಮಂಗಳೂರು, ಮೇ 6: ದಕ್ಷಿಣ ಕನ್ನಡ  ಜಿಲ್ಲಾ 8 ವಿಧಾನಸಭೆಗಳ ಚುನಾವಣಾ ಫಲಿತಾಂಶ ಮೇ 8ರಂದು ನಡೆಸಲು ಜಿಲ್ಲಾಡಳಿತ ಸಜ್ಜಾಗಿದ್ದು ಅಂದು 11.30 ರ ಸುಮಾರಿಗೆ  ಫಲಿತಾಂಶ ಲಭ್ಯವಾಗಲಿದೆಎಂದು ದ.ಕ. ಜಿಲ್ಲಾಧಿಕಾರಿ ಹರ್ಷಗುಪ್ತಾ ಹೇಳಿದ್ದಾರೆ.
                  ಕೆನರಾ ಕಾಲೇ ಜಿನಲ್ಲಿ ಬೆಳಗ್ಗೆ 7  ಗಂಟೆಗೆ ಮತ ಎಣಿಕೆ ಪ್ರ ಕ್ರಿಯೆ ಆರಂಭ ಗೊಳ್ಳ ಲಿದ್ದು, ಪ್ರತಿ ಯೊಂದು ಕ್ಷೇತ್ರಕ್ಕೆ ತಲಾ ನಾಲ್ಕು ಟೇಬಲ್  ಗಳಲ್ಲಿ ಸುಪರ್ ವೈಸರ್, ಅಸಿಸ್ಟೆಂಟ್ ಹಾಗೂ ಮೈಕ್ರೋ ಒಬ್ಸರ್ವರ್ ನೇತೃತ್ವದಲ್ಲಿ  ಮತ ಎಣಿಕೆ ಕಾರ್ಯ ನಡೆಯಲಿದೆ. 15ರಿಂದ 17 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಆರಂಭದಲ್ಲಿ ಅಂಚೆ ಮತಗಳ ಎಣಿಕೆ ನಡೆಯಲಿದೆ. ಒಟ್ಟಿನಲ್ಲಿ ಮಧ್ಯಾಹ್ನ 11.30ರಿಂದ 12 ಗಂಟೆಯ ವೇಳೆಗೆ ಮತ ಎಣಿಕೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.
ಮತ ಎಣಿಕೆ ಕೇಂದ್ರದೊಳಗೆ ಅಭ್ಯರ್ಥಿ ಹಾಗೂ ಅಭ್ಯರ್ಥಿಪರವಾಗಿ ಏಜೆಂಟ್ ಭೇಟಿ ನೀಡಲು ಅವಕಾಶವಿದ್ದು, ಮೊಬೈಲ್ ನಿಷೇಧಿಸಲಾಗಿದೆ ಎಂದು ಅವರು ಹೇಳಿದರು.
ದ.ಕ.: ಶೇ. 74.48 ಮತದಾನ:
ದ.ಕ. ಜಿಲ್ಲೆಯಲ್ಲಿ ಅಂಚೆ ಮತ ಸೇರಿದಂತೆ ಒಟ್ಟು ಶೇ. 74.48 ಮತದಾನವಾಗಿದೆ.  15,01,024 ಮತದಾರರಲ್ಲಿ 11,18,025 ಮಂದಿ ಮತ ಚಲಾಯಿಸಿದ್ದಾರೆ.
ಮತಚಲಾವಣೆಯಲ್ಲಿ ಮಹಿಳೆಯರು ಮುಂದು!
ದ.ಕ. ಜಿಲ್ಲೆಯ ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾವಣೆಯಲ್ಲಿ ಮಹಿಳಾ ಮತದಾರರೇ ಮುಂದಿದ್ದಾರೆ. 7,43,463 ಪುರುಷ ಮತದಾರರಲ್ಲಿ 5,54,544  ಮಂದಿ ಮತ ಚಲಾಯಿಸಿದ್ದರೆ, 7,57,561 ಮಹಿಳಾ ಮತದಾರರಲ್ಲಿ 5,63,481 ಮಂದಿ ಮತ ಚಲಾಯಿಸಿದ್ದಾರೆ.
81 ನೋಟಾ ಮತ ಚಲಾವಣೆ:
ಯಾವುದೇ ಅಭ್ಯರ್ಥಿಗಳಿಗೆ ಮತ ಚಲಾಯಿಸಲು ಮನಸ್ಸಿಲ್ಲದೆ ನೋಟಾ ಮತ ಚಲಾಯಿಸಿದರ ಸಂಖ್ಯೆ ಜಿಲ್ಲೆಯಲ್ಲಿ ಒಟ್ಟು 81. ಮೂಡಬಿದ್ರೆಯ ಮತಗಟ್ಟೆ ಸಂಖ್ಯೆ 155ರಲ್ಲಿ ಶೇ. 41.05 ಮತದಾನದ ಮೂಲಕ ಅತೀ ಕಡಿಮೆ ಮತದಾನವಾಗಿದೆ. ಮಂಗಳೂರು ಕ್ಷೇತ್ರದ ರಾಣಿಪುರ ಮುನ್ನೂರು ಮತಗಟ್ಟೆ ಸಂಖ್ಯೆ 38 (ಎ)ಯಲ್ಲಿ ಅತೀ ಹೆಚ್ಚು ಶೇ. 95.23 ಮತದಾನವಾಗಿದೆ ಎಂದು ಹರ್ಷಗುಪ್ತಾ ತಿಳಿಸಿದರು.
ವೆಬ್ ಕಾಸ್ಟಿಂಗ್ ಯಶಸ್ವಿ:
ಮಂಗಳೂರಿನ 208 ಕಂಡೆ ಸೇರಿದಂತೆ ದ.ಕ. ಜಿಲ್ಲೆಯ 272 ಮತಗಟ್ಟೆಗಳಲ್ಲಿ ಪ್ರಥಮ ಬಾರಿಗೆ ಪ್ರಾಯೋಗಿಕವಾಗಿ ಜಿಲ್ಲೆಯ ವಿವಿಧ ಇಂಜನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ಸಹಕಾರದಲ್ಲಿ ನಡೆಸಲಾದ ವೆಬ್ ಕಾಸ್ಟಿಂಗ್ ಯಶಸ್ವಿಯಾಗಿದೆ. ಕೆಲವೆಡೆ ವಿದ್ಯುಚ್ಛಕ್ತಿ ಕೈಕೊಟ್ಟು ಕೆಲ ಹೊತ್ತು ಈ ವ್ಯವಸ್ಥೆಗೆ ತಡೆಯಾಗಿದ್ದರೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮತದಾರರಿಗೆ ಮತಗಟ್ಟೆಗಳಿಗೆ ತೆರಳಿ ಹಿಂತಿರುವ ನಿಟ್ಟಿನಲ್ಲಿ ಮಾಡಲಾದ ವಾಹನದ ವ್ಯವಸ್ಥೆಗೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗದಿದ್ದರೂ ಗ್ರಾಮಾಂತರ ಪ್ರದೇಶವಾದ ಸುಬ್ರಹ್ಮಣ್ಯ ಸೇರಿದಂತೆ ಹಲವು ಕಡೆಗಳಲ್ಲಿ ಮತದಾರರು ಈ ವ್ಯವಸ್ಥೆಯನ್ನು ಉಪಯೋಗಿಸಿಕೊಂಡಿದ್ದಾರೆ.
ಗ್ರಾಮಾಂತರ ಪ್ರದೇಶದಲ್ಲಿ ಸ್ವೀಪ್ ಯಶಸ್ವಿ:
ದ.ಕ. ಜಿಲ್ಲೆಯಲ್ಲಿ ಸ್ವೀಪ್ ಕಾರ್ಯಕ್ರಮ ಯಶಸ್ವಿಯಾಗಿಲ್ಲವಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ನಗರ ಪ್ರದೇಶದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸ್ವೀಪ್ ಕಾರ್ಯಕ್ರಮಕ್ಕೆ ಮನ್ನಣೆ ದೊರೆಯದಿದ್ದರೂ, ಗ್ರಾಮಾಂತರ ಪ್ರದೇಶಗಳಲ್ಲಿ ಈ ಕಾರ್ಯಕ್ರಮ ಸಾಕಷ್ಟು ಪರಿಣಾಮ ಬೀರಿದ್ದು, ಯಶಸ್ವಿಯಾಗಿದೆ ಎಂದು ಹೇಳಿದರು.
ಸ್ವೀಪ್ ಕಾರ್ಯಕ್ರಮಕ್ಕೆ ಕ್ಷೇತ್ರವೊಂದಕ್ಕೆ ತಲಾ 2.50 ಲಕ್ಷ ರೂ.ಗಳನ್ನು ಸರಕಾರ ನಿಗದಿಪಡಿಸಿತ್ತು. ಇದರಲ್ಲಿ 1.25 ಲಕ್ಷ ರೂ.ಗಳನ್ನು ಆಯಾ ಕ್ಷೇತ್ರದ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ಬಿಎಲ್ಒಗಳಿಗೆ ಪ್ರೋತ್ಸಾಹ ಧನವಾಗಿ ವಿತರಿಸಲು ತೀರ್ಮಾನಿಸಲಾಗಿದೆ ಎಂದು ಹರ್ಷಗುಪ್ತ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ದಯಾನಂದ, ಮಹಾನಗರ ಪಾಲಿಕೆ ಆಯುಕ್ತ ಹರೀಶ್ ಕುಮಾರ್ ಉಪಸ್ಥಿತರಿದ್ದರು.


ಮಂಗಳೂರು ನಗರ ಕೆನರಾ ಕಾಲೇಜಿನಲ್ಲಿ ಮತ ಎಣಿಕೆ

ಮಂಗಳೂರು,ಮೇ.06:- ದಕ್ಷಿಣಕನ್ನಡ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯವು ನಗರದ ಕೊಡಿಯಾಲ್ಬೈಲ್ನಲ್ಲಿರುವ ಕೆನರಾ ಪದವಿ ಪೂರ್ವ ಮತ್ತು ಕೆನರಾ ಪದವಿ ಕಾಲೇಜಿನಲ್ಲಿ ಮೇ 8ರಂದು ಬೆಳಿಗ್ಗೆ 8.00 ಗಂಟೆಗೆ ಆರಂಭವಾಗಲಿದೆ.
ಕೆನರಾ ಪದವಿ ಪೂರ್ವ ಕಾಲೇಜಿನಲ್ಲಿ ಬೆಳ್ತಂಗಡಿ,ಮೂಡಬಿದ್ರಿ,ಮಂಗಳೂರು ನಗರ ದಕ್ಷಿಣ,ಮಂಗಳೂರು ನಗರ ಉತ್ತರ,ಮಂಗಳೂರು ಹಾಗೂ ಬಂಟ್ವಾಳ ಕ್ಷೇತ್ರಗಳ ಮತಗಳ ಎಣಿಕೆ ಕಾರ್ಯ ನಡೆಯಲಿದೆ.  ಪುತ್ತೂರು ಮತ್ತು ಸುಳ್ಯ ಕ್ಷೇತ್ರ ಗಳ ಮತಗಳ ಎಣಿಕೆ ಕಾರ್ಯ ಕೆನರಾ ಪದವಿ ಕಾಲೇಜಿ ನಲ್ಲಿ ನಡೆಯ ಲಿದೆ.
ಪ್ರತೀ ಕ್ಷೇತ್ರಕ್ಕೂ 14 ಮೇಜು ಗಳಿದ್ದು ಒಂದೊಂದು ಮೇಜಿಗೆ ಒಬ್ಬರು ಸೂಪರ್ ವೈಸರ್, ಒಬ್ಬರು ಎಣಿಕೆ ಸಹಾಯಕರು,ಒಬ್ಬರು ಮೈಕ್ರೋ ವೀಕ್ಷಕ ಹಾಗೂ ಡಿ ಗ್ರೂಪ್ ನೌಕರರನ್ನು ನಿಯೋಜಿಸಲಾಗಿದೆ.ಒಟ್ಟು 132 ಸೂಪರ್ ವೈಸರ್ ಗಳು,131 ಎಣಿಕಾ ಸಹಾಯಕರು ,121 ಡಿ  ಗ್ರೂಪ್ ನೌಕರರು ಹಾಗೂ 129 ಮೈಕ್ರೋ ವೀಕ್ಷಕರು ಸೇರಿದಂತೆ 513 ಸಿಬ್ಬಂದಿಗಳು ಎಣಿಕೆ ಕಾರ್ಯದಲ್ಲಿ ಭಾಗವಹಿಸುವರು. ಇವರಲ್ಲದೆ 82 ಸಿಬ್ಬಂದಿಗೆ ಭದ್ರತಾ ಕೊಠಡಿ ಸೀಲಿಂಗ್ ಜವಾಬ್ದಾರಿ,ಅನ್ಯ ಕೆಲಸ ಕಾರ್ಯಗಳಿಗೆ 23,ಟ್ಯಾಬುಲೇಶನ್ 30 ಸೇರಿದಂತೆ ಒಟ್ಟಿಗೆ ಸುಮಾರು 820 ಸಿಬ್ಬಂದಿಯನ್ನು ಮತಗಳ ಎಣಿಕಾ ಕಾರ್ಯಕ್ಕೆ ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹರ್ಷಗುಪ್ತಾ ತಿಳಿಸಿದ್ದಾರೆ.
 (ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮತ ಎಣಿಕಾ ಕಾರ್ಯಕ್ಕೆ ನಿಯೋಜಿಸಿರುವ ಸಿಬ್ಬಂದಿಗಳಿಗೆ ಕೊನೇ ಕ್ಷಣದ ತರಬೇತಿಯನ್ನು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಹರ್ಷಗುಪ್ತಾ ,ಅಪರ ಜಿಲ್ಲಾಧಿಕಾರಿಗಳಾದ ದಯಾನಂದ ಮತ್ತು ಮಹಾನಗರಪಾಲಿಕೆಯ ಆಯುಕ್ತರಾದ  ಹರೀಶ್ ಕುಮಾರ್  ನಡೆಸಿಕೊಟ್ಟರು)



ದಕ್ಷಿಣಕನ್ನಡ ಜಿಲ್ಲೆಯ 1.43 ಲಕ್ಷ ಅಧಿಕ ಮತದಾರರಿಂದ ಮತದಾನ


ಮಂಗಳೂರು,ಮೇ.06 :- ದಕ್ಷಿಣಕನ್ನಡ ಜಿಲ್ಲೆಯಲ್ಲಿ ರಾಜ್ಯ ವಿಧಾನಸಭೆಗೆ ಮೇ 5 ರಂದು ನಡೆದ ಸಾರ್ವತ್ರಿಕ ಚುನಾವಣೆಯು ಅತ್ಯಂತ ಸುವ್ಯವಸ್ಥಿತವಾಗಿ ಹಾಗೂ ಶಾಂತಿಯುತವಾಗಿ ನಡೆದಿದ್ದು, ಮತದಾರರು ಮತದಾನದ ಹಕ್ಕನ್ನು ಗೌರವಿಸಿದ್ದಾರೆ. ಕಳೆದ ಸಾಲಿನಲ್ಲಿ ಒಟ್ಟು 9,74,288 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದರೆ ಪ್ರಸಕ್ತ ಸಾಲಿನಲ್ಲಿ 11,18,025 ಜನರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
ಜಿಲ್ಲೆಯಲ್ಲಿ ಕಳೆದ ಸಾಲಿಗಿಂತ ಈ ಸಾಲಿನಲ್ಲಿ ಒಟ್ಟು 1,43,737 ಅಧಿಕ ಮತದಾರರು ಮತ ಚಲಾಯಿಸುವ ಮೂಲಕ ಅತ್ಯಂತ ಪ್ರಶಂಸನೀಯ ಮತದಾನವಾಗಿದೆ.  ಪ್ರಥಮ ಹಂತದಲ್ಲಿ 62,000 ಅರ್ಜಿಗಳನ್ನು ಸ್ವೀಕರಿಸಿ ನೋಂದಾಯಿಸಲಾಗಿದ್ದು,ಜನರು ತಮ್ಮ ಹಕ್ಕಿನ ಬಗ್ಗೆ ಹೆಚ್ಚು ಜಾಗ್ರತರಾಗಿದ್ದಾರೆ. ನೈತಿಕ ಮತದಾನಕ್ಕೆ ಪ್ರಾಶಸ್ತ್ಯದ ಜೊತೆಗೆ ಶಾಂತಿಯುತ ಮತದಾನ ಜಿಲ್ಲೆಯಲ್ಲಿ ದಾಖಲಾಗಿದೆ. ಜಿಲ್ಲೆಯಲ್ಲಿ 11,18,025 ಒಟ್ಟು ಮತ ಚಲಾವಣೆಯಾಗಿದ್ದು, ಇದು ಜಿಲ್ಲೆಯಲ್ಲಿ  ಸ್ವಿಪ್ ಕಾರ್ಯಕ್ರಮ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿದ್ದು ಕಾರಣವಾಗಿದೆ.
ಕಳೆದ 2008ರ ವಿಧಾನಸಭಾ ಚುನಾವಣೆಯಲ್ಲಿ ಇದ್ದ  ಒಟ್ಟು 13,33,092 ಮತದಾರರ ಪೈಕಿ 9,79,288 ಮತದಾರರು ಮತ ಚಲಾಯಿಸಿದ್ದರೆ,ಈ ಬಾರಿ ಹೆಚ್ಚುವರಿಯಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾದ ಸುಮಾರು 56,000 ಮತದಾರರು ಸೇರಿದಂತೆ ಒಟ್ಟು ಮತದಾರರ ಸಂಖ್ಯೆ 15,01,024 ಆಗಿತ್ತು.
 ಕಳೆದ ಬಾರಿಗಿಂತ ಈ ಬಾರಿಯು 72,713 ಮಹಿಳಾ ಮತದಾರರು  ಮತ ಚಲಾಯಿಸುವ ಮೂಲಕ ದಾಖಲೆ ಮಾಡಿದ್ದಾರೆ. ಕಳೆದ ಬಾರಿ ಪುರುಷರು 4,83,520 ಮತದಾರರು ಮತ ಚಲಾಯಿಸಿದ್ದರೆ 2013 ಮೇ 5 ರಂದು ನಡೆದ ಚುನಾವಣೆಯಲ್ಲಿ 5,54,544 ಮತದಾರ ಪುರುಷರು ಮತ ಚಲಾಯಿಸಿದ್ದಾರೆ.
ಬೆಳ್ತಂಗಡಿ ಕ್ಷೇತ್ರದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ 1,28,577 ಮತದಾರರು ಮತ ಚಲಾಯಿಸಿದ್ದರೆ ಈ ಬಾರಿ 1,45,594  ಮತ ಚಲಾಯಿಸಿದ್ದಾರೆ.
ಮೂಡಬಿದ್ರೆ ಕ್ಷೇತ್ರದಲ್ಲಿ ಕಳೆದ ಬಾರಿ 1,10,531 ಮತದಾರರು ಮತ ಚಲಾಯಿಸಿದ್ದರೆ ಈ ಬಾರಿ 1,28,241 ಮತದಾರರು ಮತ ಚಲಾಯಿಸಿದ್ದಾರೆ.
ಮಂಗಳೂರು ನಗರ ಉತ್ತರ ಕ್ಷೇತ್ರದಲ್ಲಿ 2008 ರ ವಿಧಾನಸಭಾ ಚುನಾವಣೆಯಲ್ಲಿ 1,31,468 ಮತದಾರರು ಮತ ಚಲಾಯಿಸಿದ್ದರೆ, ಈ ಬಾರಿ 1,45,238 ಮತದಾರರು ಮತ ಚಲಾಯಿಸಿದ್ದಾರೆ. 
ಮಂಗಳೂರು ನಗರ ದಕ್ಷಿಣ  ಕ್ಷೇತ್ರದಲ್ಲಿ 2008 ರ ವಿಧಾನಸಭಾ ಚುನಾವಣೆಯಲ್ಲಿ 1,18,430 ಮತದಾರರು ಮತ ಚಲಾಯಿಸಿದ್ದರೆ, ಈ ಬಾರಿ 1,32,177 ಮತದಾರರು ಮತ ಚಲಾಯಿಸಿದ್ದಾರೆ. 
ಮಂಗಳೂರು  ಕ್ಷೇತ್ರದಲ್ಲಿ 2008 ರ ವಿಧಾನಸಭಾ ಚುನಾವಣೆಯಲ್ಲಿ 1,04,329 ಮತದಾರರು ಮತ ಚಲಾಯಿಸಿದ್ದರೆ, ಈ ಬಾರಿ 1,2
4,205 ಮತದಾರರು ಮತ ಚಲಾಯಿಸಿದ್ದಾರೆ. 
ಬಂಟ್ವಾಳ  ಕ್ಷೇತ್ರದಲ್ಲಿ 2008 ರ ವಿಧಾನಸಭಾ ಚುನಾವಣೆಯಲ್ಲಿ 1,34,853 ಮತದಾರರು ಮತ ಚಲಾಯಿಸಿದ್ದರೆ, ಈ ಬಾರಿ 1,55,750  ಮತದಾರರು ಮತ ಚಲಾಯಿಸಿದ್ದಾರೆ. 
ಪುತ್ತೂರು  ಕ್ಷೇತ್ರದಲ್ಲಿ 2008 ರ ವಿಧಾನಸಭಾ ಚುನಾವಣೆಯಲ್ಲಿ 1,22,941 ಮತದಾರರು ಮತ ಚಲಾಯಿಸಿದ್ದರೆ, ಈ ಬಾರಿ 1,41,746 ಮತದಾರರು ಮತ ಚಲಾಯಿಸಿದ್ದಾರೆ. 
ಸುಳ್ಯ  ಕ್ಷೇತ್ರದಲ್ಲಿ 2008 ರ ವಿಧಾನಸಭಾ ಚುನಾವಣೆಯಲ್ಲಿ 1,23,159 ಮತದಾರರು ಮತ ಚಲಾಯಿಸಿದ್ದರೆ, ಈ ಬಾರಿ 1,45,074 ಮತದಾರರು ಮತ ಚಲಾಯಿಸಿದ್ದಾರೆ. 
 ಜಿಲ್ಲೆಯಲ್ಲಿ ಸ್ವಿಪ್ ಕಾರ್ಯಕ್ರಮದಿಂದ ಹೆಚ್ಚು ಮತದಾರರು ಜಾಗೃತಿ ಹೊಂದಿ ಮತದಾನ ಮಾಡಿರುವುದು.

ವಿಧಾನಸಭಾ ಚುನಾವಣೆ-2013

ಮಂಗಳೂರು, ಮೇ.06: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇ 5 ಭಾನುವಾರದಂದು ನಡೆದ ವಿಧಾನ ಸಭಾ ಚುನಾವಣೆಯ ಚಿತ್ರನೋಟ..







ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ. 72.38 ಮತದಾನ


ಮಂಗಳೂರು, ಮೇ.05: ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳಿಗೆ ಇಂದು ನಡೆದ ಚುನಾವಣೆಯು ಶಾಂತಿಯುತವಾಗಿ ನಡೆದಿದ್ದು ಮತದಾರರು ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ. ಒಟ್ಟು ಶೇಕಡ 72.38 ಮತ ದಾನ ವಾಗಿದೆ. ಚುನಾ ವಣಾ ಆಯೋ ಗದ ನಿರ್ದೇ ಶನ ದಂತೆ ಮತ ದಾನದ ಅವಧಿ ಯನ್ನು ಒಂದು ಗಂಟೆ ವಿಸ್ತ ರಿಸ ಲಾಗಿತ್ತು. ಶಾಂತಿ ಯುತ ಮತ ದಾನಕ್ಕೆ ಗಡಿ ಭದ್ರತಾ ಪಡೆ ಯೋಧರು ಸೇರಿ ದಂತೆ ನೆರೆಯ ರಾಜ್ಯಗಳ ಪೋಲಿಸ ರನ್ನು ನಿಯೋ ಜಿಲಾ ಗಿತ್ತು. ವೆಬ್ ಕಾಸ್ಟ್ ಮೂಲಕ ಮತ ಗಟ್ಟೆ ಗಳಲ್ಲಿನ ಚುನಾ ವಣಾ ಪ್ರಕ್ರಿ ಯೆಗಳನ್ನು ಕಂಟ್ರೋ ಲ್  ರೂಂ ನಲ್ಲಿ ವೀಕ್ಷಿ ಸುವ ವಿಶೇಷ ವ್ಯವಸ್ಥೆ ಯನ್ನು ಜಿಲ್ಲಾಧಿ ಕಾರಿ ಗಳು ಮಾಡಿ ದ್ದರು. ಮತ ದಾನದ ಕ್ಷೇತ್ರ ವಾರು ವಿವರ: ಬೆಳ್ತಂಗಡಿ- ಶೇ.74.5, ಮೂಡಬಿದರೆ- ಶೇ.70, ಮಂಗಳೂರು ಉತ್ತರ - ಶೇ.67. ಮಂಗಳೂರು ದಕ್ಷಿಣ-ಶೇ.64, ಮಂಗಳೂರು-ಶೇ.73.6, ಬಂಟ್ವಾಳ-ಶೇ.78, ಪುತ್ತೂರು-ಶೇ.80, ಸುಳ್ಯ-ಶೇ.72. 

Saturday, May 4, 2013

ಮತದಾನ ಅವಧಿ ಒಂದು ಗಂಟೆ ವಿಸ್ತರಣೆ


ಮಂಗಳೂರು,ಮೇ.4:-  ಭಾರತ ಚುನಾವಣಾ ಆಯೋಗವು ಮೇ 5 ರಂದು ಕರ್ನಾಟಕ ವಿಧಾನಸಭೆಗೆ ನಡೆಯುತ್ತಿರುವ ಸಾರ್ವತ್ರಿಕ ಚುನಾವಣಾ ವೇಳೆಯನ್ನು ಒಂದು ಗಂಟೆ ಕಾಲ ಹೆಚ್ಚುವರಿಯಾಗಿ ವಿಸ್ತರಿಸಿ ಆದೇಶ ಹೊರಡಿಸಿದೆ. ಈ ಆದೇಶದಂತೆ ಅಂದು ಬೆಳಿಗ್ಗೆ 7 ಗಂಟೆಯಿಂದ ಸಾಯಂಕಾಲ 6 ಗಂಟೆ ವರೆಗೆ ಮತದಾನದ ಅವಧಿಯಾಗಿರುತ್ತದೆಯೆಂದು ಜಿಲ್ಲಾ ಚುನಾವಣಾಧಿಕಾರಿ/ಜಿಲ್ಲಾಧಿಕಾರಿ  ಹರ್ಷಗುಪ್ತ ಅವರು ತಿಳಿಸಿರುತ್ತಾರೆ.
 ಜಿಲ್ಲೆಯಲ್ಲಿ 163 ಅತೀ ಸೂಕ್ಷ್ಮ ಮತಗಟ್ಟೆಗಳು :
 ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮೇ 5 ರಂದು ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ 8 ವಿಧಾನಸಭಾ ಕ್ಷೇತ್ರಗಳಲ್ಲಿ 88 ಅಕ್ಷಿಲರಿ ಮತಗಟ್ಟೆಗಳು ಸೇರಿದಂತೆ ಒಟ್ಟು 1715 ಮತಗಟ್ಟೆಗಳು ಇರುತ್ತವೆ. ಇವುಗಳಲ್ಲಿ 325 ಸೂಕ್ಷ್ಮ ಮತಗಟ್ಟೆಗಳು 163 ಅತೀ ಸೂಕ್ಷ್ಮ ಮತಗಟ್ಟೆಗಳು ಹಾಗೂ 61 ಮತಗಟ್ಟೆಗಳು ನಕ್ಸಲ್ ಬಾಧಿತ ಪ್ರದೇಶದಲ್ಲಿ  ಇರುತ್ತವೆ . 1166 ಸಾಮಾನ್ಯ ಮತಗಟ್ಟೆಗಳಿದ್ದು ಎಲ್ಲಾ ಮತಗಟ್ಟೆಗಳಲ್ಲಿ ಜಿಲ್ಲಾಡಳಿತ ಮುಕ್ತ ಹಾಗೂ ನಿರ್ಭೀತ ಮತದಾನಕ್ಕೆ ಸರ್ವ ವ್ಯವಸ್ಥೆಯನ್ನು ಮಾಡಲಾಗಿದೆ.  ಮಂಗಳೂರು ನಗರದಲ್ಲಿ  ಅತೀ ಹೆಚ್ಚು ಅಂದರೆ 53 ಸೂಕ್ಷ್ಮ ಮತಗಟ್ಟೆಗಳು ಮತ್ತು 38 ಅತೀ ಸೂಕ್ಷ್ಮ ಮತಗಟ್ಟೆಗಳು ಇರುತ್ತವೆ.  ಅತೀ ಕಡಿಮೆ ಅಂದರೆ 28 ಸೂಕ್ಷ್ಮ ಮತಗಟ್ಟೆಗಳು ಮತ್ತು 7 ಅತೀ ಸೂಕ್ಷ್ಮ ಮತಗಟ್ಟೆಗಳು ಮೂಡಬಿದ್ರೆ ಕ್ಷೇತ್ರದಲ್ಲಿರುತ್ತವೆ.
 

Daily report on voilation of Model Code of Conduct...

please click here

ನಿರ್ಭೀತ ಮತದಾನಕ್ಕೆ ಸರ್ವ ಸಿದ್ಥತೆ: ಜಿಲ್ಲಾಧಿಕಾರಿ ಹರ್ಷಗುಪ್ತ

ಮಂಗಳೂರು, ಮೇ.04: ಕೇಂದ್ರಚುನಾವಣಾಆಯೋಗದ ನಿರ್ದೇಶನದಂತೆ ಜಿಲ್ಲಾಡಳಿತ ನಿರ್ಭೀತ ಮತ್ತು ಮುಕ್ತ ನ್ಯಾಯಯುತ ಮತದಾನಕ್ಕೆ ಜಿಲ್ಲಾಡಳಿತ ಸರ್ವಸನ್ನದ್ಧವಾಗಿದ್ದು, ರಾಜ್ಯಕ್ಕೆ ಮಾದರಿಯಾಗುವ ಹಲವು ವಿನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಚುನಾವಣೆಗೆ ಸಜ್ಜಾಗಿದೆಎಂದುಜಿಲ್ಲಾಚುನಾವಣಾಧಿಕಾರಿ ಹರ್ಷಗುಪ್ತ ಹೇಳಿದ್ದಾರೆ.
         ಚುನಾವಣೆಯಲ್ಲಿ ನಡೆಯುವ ಎಲ್ಲ ಅಕ್ರಮಗಳನ್ನು ನಿಯಂತ್ರಿಸಲಾಗಿದ್ದು, ಸುವ್ಯವಸ್ಥಿತ ಚುನಾವಣೆಗೆ ಸಮಗ್ರ ವ್ಯವಸ್ಥೆ ರೂಪಿಸಲಾಗಿದೆ. ಚುನಾವಣೆಯ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸಲು ಯಶಸ್ವಿಯಾಗಿ ಸ್ವೀಪ್ ಕಾರ್ಯಕ್ರಮ ನಿರ್ವಹಿಸಲಾಗಿದೆ.
ಮತದಾರರ ಹಿತವನ್ನು ಗಮನದಲ್ಲಿರಿಸಿ ಮತದಾನಕ್ಕೆ ಅನುಕೂಲ ವಾತಾವರಣ ಸೃಷ್ಟಿಸಲು ಅಗತ್ಯ ಪ್ರದೇಶಗಳಲ್ಲಿ ಬಸ್ ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಬ್ಬ ಮತದಾರರನ್ನು ಮತಗಟ್ಟೆಗೆ  ತಲುಪಿಸಿ ಮತ ಚಲಾಯಿಸಿದ ನಂತರ ಪಿಕ್ಅಪ್ ಪಾಯಿಂಟ್  ಗೆ ತಲುಪಿಸಲು ಕನಿಷ್ಟ ಶುಲ್ಕ ರೂ.5/- ನ್ನು ವಸೂಲಿ ಮಾಡಲು ತೀರ್ಮಾನಿಸಲಾಗಿದೆ.

200 ಬೆಳ್ತಂಗಡಿ ವಿಧಾನಸಭಾ ಚುನಾವಣಾ ಕ್ಷೇತ್ರಕ್ಕೆ ರೂಟ್ ಸಂಖ್ಯೆ 34 ಆಗಿದ್ದು ಪಿಕ್ಅಪ್ ಪಾಯಿಂಟ್ ಗಳು 69 ಇರುತ್ತದೆ.
201 ಮೂಡಬಿದ್ರಿ ವಿಧಾನ ಸಭಾ ಚುನಾವಣಾ ಕ್ಷೇತ್ರಕ್ಕೆ ರೂಟ್ ಸಂಖ್ಯೆ 13 ಆಗಿದ್ದು ಪಿಕ್ಅಪ್ ಪಾಯಿಂಟ್ ಗಳು 19 ಇರುತ್ತದೆ.
202 ಮಂಗಳೂರು ನಗರಉತ್ತರ ವಿಧಾನಸಭಾ ಚುನಾವಣಾ ಕ್ಷೇತ್ರಕ್ಕೆ ರೂಟ್ ಸಂಖ್ಯೆ 24 ಆಗಿದ್ದು ಪಿಕ್ಅಪ್ ಪಾಯಿಂಟ್ ಗಳು 41 ಇರುತ್ತದೆ.
203 ಮಂಗಳೂರು ನಗರದಕ್ಷಿಣ ವಿಧಾನಸಭಾ ಚುನಾವಣಾ ಕ್ಷೇತ್ರಕ್ಕೆ ರೂಟ್ ಸಂಖ್ಯೆ 10 ಆಗಿದ್ದು ಪಿಕ್ಅಪ್ ಪಾಯಿಂಟ್ ಗಳು 14 ಇರುತ್ತದೆ.
204 ಮಂಗಳೂರು ವಿಧಾನಸಭಾ ಚುನಾವಣಾ ಕ್ಷೇತ್ರಕ್ಕೆ ರೂಟ್ ಸಂಖ್ಯೆ 37 ಆಗಿದ್ದು ಪಿಕ್ಅಪ್ ಪಾಯಿಂಟ್ ಗಳು 76 ಇರುತ್ತದೆ.
205 ಬಂಟ್ವಾಳ ವಿಧಾನಸಭಾ ಚುನಾವಣಾ ಕ್ಷೇತ್ರಕ್ಕೆ ರೂಟ್ ಸಂಖ್ಯೆ 23 ಆಗಿದ್ದು ಪಿಕ್ಅಪ್ ಪಾಯಿಂಟ್ ಗಳು 59 ಇರುತ್ತದೆ.
206 ಪುತ್ತೂರು ವಿಧಾನಸಭಾ ಚುನಾವಣಾ ಕ್ಷೇತ್ರಕ್ಕೆ ರೂಟ್ ಸಂಖ್ಯೆ 58 ಆಗಿದ್ದು ಪಿಕ್ಅಪ್ ಪಾಯಿಂಟ್ ಗಳು 202 ಇರುತ್ತದೆ.
207 ಸುಳ್ಯ ವಿಧಾನಸಭಾಚುನಾವಣಾಕ್ಷೇತ್ರಕ್ಕೆರೂಟ್ ಸಂಖ್ಯೆ 27 ಆಗಿದ್ದು ಪಿಕ್ಅಪ್ ಪಾಯಿಂಟ್ಗಳು 97 ಇರುತ್ತದೆ. ಮತದಾರರು ಪೂರ್ವಾಹ್ನ 7 ಗಂಟೆಯಿಂದ  ಮಧ್ಯಾಹ್ನ 3 ಗಂಟೆಯವರೆಗೆ ಈ ವ್ಯವಸ್ಥೆಯ ಸದುಪಯೋಗವನ್ನು ಪಡೆಯಬಹುದಾಗಿದೆ.
ವೆಬ್ ಕಾಸ್ಟಿಂಗ್:
ಈ ಚುನಾವಣೆಯಲ್ಲಿ ನೂತನವಾಗಿ ಜಿಲ್ಲೆಯ ವಿವಿಧ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ಸಹಕಾರದೊಂದಿಗೆ  ವೆಬ್ ಕಾಸ್ಟಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. ಮತಗಟ್ಟೆ 203 ಮಂಗಳೂರು ನಗರದಕ್ಷಿಣ  ವಿಧಾನಸಭಾ ಕ್ಷೇತ್ರಗಳ ಎಲ್ಲ 208 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ, ಇಂತಹ ವ್ಯವಸ್ಥೆ ದೇಶದಲ್ಲೇ ಪ್ರಥಮ. ಬೆಳ್ತಂಗಡಿಯಲ್ಲಿ 30 ಮೂಡಬಿದ್ರೆಯಲ್ಲಿ 27, ಮಂಗಳೂರು ನಗರಉತ್ತರ 25, ಮಂಗಳೂರು ನಗರದಕ್ಷಿಣ 208, ಮಂಗಳೂರು 27, ಬಂಟ್ವಾ:ಳ 27 ಪುತ್ತೂರು 23 ಸುಳ್ಯ 35 ಒಟ್ಟು 402 ಮತಗಟ್ಟೆಗಳಲ್ಲಿ ವೆಬ್ ಕ್ಯಾಸ್ಟಿಂಗ್ ವ್ಯವಸ್ಥೆ ಅಳವಡಿಸಲಾಗಿದೆ.
ನಾವು ಮತದಾನ ಮಾಡುತ್ತೇವೆ -ನೀವು ಎಂಬ ಘೋಷ ವಾಕ್ಯ ಪಾಲಿಸಲು ಪೋಸ್ಟಲ್ ಬ್ಯಾಲೆಟ್,   ಅಂಚೆ ಮತಪತ್ರ ವಿತರಣೆಗೆ ಹೆಚ್ಚಿನಆದ್ಯತೆ ಮತ್ತು ತರಬೇತಿ ನೀಡಲಾಗಿದೆ ಎಂದ ಜಿಲ್ಲಾಧಿಕಾರಿ ಹರ್ಷಗುಪ್ತ ಅವರು, ಪ್ರಸಕ್ತ ಚುನಾವಣೆಯಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸುವ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ 90 ಶೇಕಡಾಕ್ಕಿಂತಲೂಹೆಚ್ಚು ಮತದಾನ ದಾಖಲಿಸಲು ಅಂಚೆ ಮತ ಪತ್ರ ವಿತರಿಸುವ  ವ್ಯವಸ್ಥೆ ಮಾಡಲಾಗಿದೆ.
ಅದರಂತೆ ಜಿಲ್ಲೆಯಲ್ಲಿ 8209 ಮತಗಟ್ಟೆ ಸಿಬ್ಬಂದಿಯವರಿಗೆ 824 ಪೋಲೀಸ್ ಸಿಬ್ಬಂದಿಯವರಿಗೆ 520 ವಾಹನ ಚಾಲಕರಿಗೆಮತ್ತು ನಿರ್ವಾಹಕರಿಗೆಒಟ್ಟು 5907 ಅಂಚೆ ಮತಪತ್ರಗಳು ಮತಚಲಾವಣೆಯಿಂದ ಸ್ವೀಕೃತವಾಗಿರುತ್ತದೆ. ಇದಲ್ಲದೆ 1027 ಸೇವಾ ಮತದಾರರಿಗೆ ಅಂಚೆ ಮತಪತ್ರವನ್ನು ವೇಗ ಅಂಚೆ ಮೂಲಕ ಕಳುಹಿಸಿಕೊಡಲಾಗಿದೆ ಹಾಗೂ ಮೇಲ್ಕಾಣಿಸಿರುವಂತೆ ಕಳುಹಿಸಿ ಕೊಡಲಾದ ಅಂಚೆ ಮತಪತ್ರಗಳನ್ನು 8-5-13 ರಂದು ಪೂರ್ವಾಹ್ನ 8 ಗಂಟೆಯ ವರೆಗೆ ಸ್ವೀಕರಿಸಲು ಅವಕಾಶವಿರುತ್ತದೆ.ಅಲ್ಲದೆ ಪ್ರಿವೆಂಟಿವ್ಟೆನ್ಶನ್ಅಡಿಯಲ್ಲಿ ಜಿಲ್ಲೆಯ  ಉಪ ಕಾರಾ ಗೃಹದಲ್ಲಿರುವ ಯಾವುದೇ ಅಪಾದಿತರು ಅಂಚೆ ಮತ ಪತ್ರ ಬೇಡಿಕೆ ಸಲ್ಲಿಸಿರುವುದಿಲ್ಲ.
 ಮತಗಟ್ಟೆಗಳ ಭದ್ರತಾ ವ್ಯವಸ್ಥೆ:ಜಿಲ್ಲೆಯಲ್ಲಿ 967 ಕಟ್ಟಡಗಳಲ್ಲಿರುವ 1715 ಮತಗಟ್ಟೆಗಳಲ್ಲಿ 1180 ಸಿಪಿಎಫ್ ಕಮಾಂಡೋಗಳನ್ನು ಮತ್ತು 1475 ಕರ್ನಾಟಕ ಪೋಲೀಸರನ್ನು  ನಿಯೋಜಿಸಲಾಗಿದೆಯಲ್ಲದೆ, 402 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್  257 ಮತಗಟ್ಟೆಗಳಿಗೆ ಮೈಕ್ರೋ ವೀಕ್ಷಕರನ್ನು ನಿಯೋಜಿಸಲಾಗಿದೆ.
ಚುನಾವಣಾ ದೂರುಗಳು: 1077ರಲ್ಲಿ 173 ದೂರುಗಳು ದಾಖಲಾಗಿವೆ. ಅಲ್ಲದೆ ಅಬಕಾರಿ ಇಲಾಖೆಯಲ್ಲಿ ಒಟ್ಟು 338 ದೂರುಗಳು ಸ್ವೀಕೃತವಾಗಿದ್ದು, 87 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. 50 ಮಂದಿ ಅಪಾದಿತರನ್ನು ದಸ್ತಗಿರಿ ಮಾಡಲಾಗಿದೆ.6 ವಾಹನ ಮುಟ್ಟುಗೋಲು ಹಾಕಲಾಗಿದೆ. 7,55,530 ಮೊತ್ತದ 299. 67 ಲೀಟರ್ ಮದ್ಯವನ್ನು ವಶವಪಡಿಸಿಕೊಳ್ಳಲಾಗಿದೆ.
ದಕ್ಷಿಣಕನ್ನಡಜಿಲ್ಲೆಯಒಟ್ಟು ಮತದಾರರು
ದಕ್ಷಿಣಕನ್ನಡಜಿಲ್ಲೆಯಲ್ಲಿ  1-5-13 ರಲ್ಲಿದ್ದಂತೆ  ಈ ಕೆಳಗಿನಂತೆ  ಪ್ರತೀ ವಿಧಾನಸಭಾಕ್ಷೇತ್ರದಲ್ಲಿ ಮತದಾರರಿರುತ್ತಾರೆ.
200 ಬೆಳ್ತಂಗಡಿ ವಿಧಾನಸಭಾಕ್ಷೇತ್ರದಲ್ಲಿರುವಒಟ್ಟು ಮತದಾರರಲ್ಲಿಗಂಡಸರು 98463, ಮಹಿಳೆಯರು 95260,ಒಟ್ಟು 193723 ಮತದಾರರಿರುತ್ತಾರೆ.
201 ಮೂಡಬಿದ್ರೆ ವಿಧಾನ ಸಭಾಕ್ಷೇತ್ರದಲ್ಲಿರುವಒಟ್ಟು ಮತದಾರರಲ್ಲಿಗಂಡಸರು 83075, ಮಹಿಳೆಯರು 90391 ಒಟ್ಟು 173466 ಮತದಾರರಿರುತ್ತಾರೆ.
202 ಮಂಗಳೂರು ನಗರಉತ್ತರ ವಿಧಾನ ಸಭಾಕ್ಷೇತ್ರದಲ್ಲಿರುವಒಟ್ಟು ಮತದಾರರಲ್ಲಿಗಂಡಸರು 99922, ಮಹಿಳೆಯರು 104371 ಒಟ್ಟು 204293 ಮತದಾರರಿರುತ್ತಾರೆ.
203 ಮಂಗಳೂರು ನಗರದಕ್ಷಿಣ ವಿಧಾನ ಸಭಾಕ್ಷೇತ್ರದಲ್ಲಿರುವಒಟ್ಟು ಮತದಾರರಲ್ಲಿಗಂಡಸರು 97984, ಮಹಿಳೆಯರು 106965 ಒಟ್ಟು 204949 ಮತದಾರರಿರುತ್ತಾರೆ.
204 ಮಂಗಳೂರು  ವಿಧಾನ ಸಭಾಕ್ಷೇತ್ರದಲ್ಲಿರುವಒಟ್ಟು ಮತದಾರರಲ್ಲಿಗಂಡಸರು 82873, ಮಹಿಳೆಯರು 85393ಒಟ್ಟು 168266 ಮತದಾರರಿರುತ್ತಾರೆಎಂದುಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
205 ಬಂಟ್ವಾಳ ವಿಧಾನ ಸಭಾಕ್ಷೇತ್ರದಲ್ಲಿರುವಒಟ್ಟು ಮತದಾರರಲ್ಲಿಗಂಡಸರು 98671, ಮಹಿಳೆಯರು 98295 ಒಟ್ಟು 196966 ಮತದಾರರಿರುತ್ತಾರೆ.
206 ಪುತ್ತೂರು  ವಿಧಾನ ಸಭಾಕ್ಷೇತ್ರದಲ್ಲಿರುವಒಟ್ಟು ಮತದಾರರಲ್ಲಿಗಂಡಸರು 91259, ಮಹಿಳೆಯರು 88183 ಒಟ್ಟು 179442 ಮತದಾರರಿರುತ್ತಾರೆ.
207 ಸುಳ್ಯ ವಿಧಾನ ಸಭಾಕ್ಷೇತ್ರದಲ್ಲಿರುವಒಟ್ಟು ಮತದಾರರಲ್ಲಿಗಂಡಸರು 91200, ಮಹಿಳೆಯರು 88719 ಒಟ್ಟು 179919 ಮತದಾರರಿರುತ್ತಾರೆ.
ದಕ್ಷಿಣಕನ್ನಡಜಿಲ್ಲೆಯಎಲ್ಲಾಒಟ್ಟು 8 ವಿಧಾನಸಭಾ ಕ್ಷೇತ್ರಗಳಲ್ಲಿರುವ ಮತದಾರರಲ್ಲಿಗಂಡಸರು 743447 ಮಹಿಳೆಯರು 757577 ಮತ್ತುಒಟ್ಟು 1501024 ಮತದಾರರಿರುತ್ತಾರೆ.

'ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮತ್ತು ಮತದಾರನೇ ಸಾರ್ವಭೌಮ''

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮತ್ತು ಮತದಾರನೇ  ಸಾರ್ವಭೌಮ. ಜನರಿಂದ, ಜನರಿಗಾಗಿ ಮತ್ತು ಜನರಿಗೋಸ್ಕರ ಇರುವ ವ್ಯವಸ್ಥೆಯಲ್ಲಿ ಮತದಾನ ಪ್ರತಿಯೊಬ್ಬ ಪ್ರಜೆಯ ಹಕ್ಕೂ ಹೌದು ಕರ್ತವ್ಯವೂ ಹೌದು. ಈ ನಿಟ್ಟಿನಲ್ಲಿ ಮತದಾರರ ಭಾಗವಹಿಸುವಿಕೆಯನ್ನು  ಪ್ರೋತ್ಸಾಹಿಸಲು ಪ್ರಸಕ್ತ ಸಾಲಿನ  ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ-2013 ರ ವೇಳೆ ಚುನಾವಣಾ ಆಯೋಗ SVEEP (Systematic Voters Education and Electoral Participation) ಕಾರ್ಯಕ್ರಮದ ಮೂಲಕ ವಿಶೇಷ ಆದ್ಯತೆ ನೀಡಿದ್ದು ಮತದಾನದ ಬಗ್ಗೆ ಪ್ರತಿಯೊಬ್ಬರೂ ಮರುಚಿಂತನೆ ಮಾಡುವ ಪ್ರೇರಣೆಯನ್ನು ಹುಟ್ಟು ಹಾಕಿದೆ.
 ಚುನಾವಣಾ ಆಯೋಗದ ನಿರ್ದೇಶನದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು  ಮತ್ತು ಚುನಾವಣಾಧಿಕಾರಿಗಳಾದ ಹರ್ಷಗುಪ್ತರವರ ನೇತೃತ್ವದಲ್ಲಿ  ಜಿಲ್ಲಾ ಪಂಚಾಯತ್  ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸ್ವೀಪ್ ಕಾರ್ಯಕ್ರಮದ ಅಧ್ಯಕ್ಷರಾದ ಡಾ| ಕೆ.ಎನ್ ವಿಜಯಪ್ರಕಾಶ್, ನಗರ ಪೊಲೀಸ್ ಆಯುಕ್ತರಾದ ಮನೀಶ್ ಕರ್ಬಿಕರ್ ಹಾಗೂ ಜಿಲ್ಲಾ ಪೋಲಿಸ್ ವರೀಷ್ಠಾಧಿಕಾರಿಗಳಾದ ಅಭಿಷೇಕ್ ಗೋಯಲ್ ಅವರ ಮಾರ್ಗದರ್ಶನದಲ್ಲಿ ಈ   ಬಾರಿಯ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಮೂಲ ಉದ್ದೇಶದೊಂದಿಗೆ ಜಿಲ್ಲೆಯ ವಾತಾವರಣಕ್ಕೆ ಪೂರಕವಾಗಿ ಹಲವು ವಿಶೇಷ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಮೂಲಕ ಸ್ವೀಪ್ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ವಿಶೇಷವಾಗಿ ದೂರ ಹಾಗೂ ದುರ್ಗಮ ಪ್ರದೇಶದ ಜನಮನದಲ್ಲಿ ಪ್ರಸಾರಣಗೊಳ್ಳುವ ಪ್ರಯತ್ನವನ್ನು ಮಾಡಿದೆ.  ಈ ಎಲ್ಲಾ ಪ್ರಯತ್ನವನ್ನು ವಿವಿಧ ಮಾಧ್ಯಮಗಳ ಮೂಲಕ ತಲುಪುವ ವಿನೂತನ ಪ್ರಯತ್ನ ನಮ್ಮ ಜಿಲ್ಲೆಯಲ್ಲಿ ನಡೆದಿದೆ.  ಈ ಜಾಗೃತಿ ಪ್ರಕ್ರಿಯೆಗೆ ಗ್ರಾಮ ಮಟ್ಟದಲ್ಲಿ ಬಿಎಲ್ಒಗಳ ನೆರವು ಹಾಗೂ ಅವರಿಗೆ ಉತ್ತಮವಾಗಿ ಕರ್ತವ್ಯವನ್ನು ನಿರ್ವಹಿಸಿದ ಹಾಗೂ ಅತ್ಯಧಿಕ ಮತದಾನವಾದಲ್ಲಿ ಬಹುಮಾನ ನೀಡುವ ಯೋಜನೆಯನ್ನು ದ.ಕ ಜಿಲ್ಲಾಧಿಕಾರಿಯವರು ಪ್ರಕಟಿಸಿರುತ್ತಾರೆ. ಸ್ವೀಪ್ ಕಾರ್ಯಕ್ರಮವನ್ನು 3 ಹಂತಗಳಲ್ಲಿ ಅನುಷ್ಠಾನಗೊಳಿಸಿದೆ.ಪ್ರಥಮವಾಗಿ ಮತದಾರದ ನೋಂದಾವಣೆ ಆಂದೋಲನ, ನೈತಿಕ ಮತದಾನದ ಜಾಗೃತಿ ಆಂದೋಲನ, ಮೂರನೆಯದಾಗಿ ಸಂಪೂರ್ಣ ಮತದಾನದ ಬಗ್ಗೆ ಪ್ರೇರೇಪಣಾ ಆಂದೋಲನ.


 ಸ್ವೀಪ್ ಯೋಜನೆಯನ್ನು ದ.ಕ ಜಿಲ್ಲೆಯಲ್ಲಿ ಯಕ್ಷಗಾನ, ಮೈಮ್ ಶೋ, ಪಂಚಭಾಷಾ ಹಾಡು, ಮಾಸ್ಕಟ್(ಬಾಬಣ್ಣ), ಭಿತ್ತಿ ಚಿತ್ರಗಳು, ಕರ ಪತ್ರ, ಜಾಥಾ, ಬೈಕ್ ರಾಲಿ, ಮನೆ ಮನೆ ಭೇಟಿ, ಮಾನವ ಸರಪಳಿ, ಕಡಲ ಕಿನಾರೆಯಲ್ಲಿ ಗಾಳಿಪಟ ಹಾರಿಸುವುದರ ಮೂಲಕ ಮತ್ತು ಮತದಾನದ ಅರಿವಿನ ಬೆಳಕನ್ನು ಹಚ್ಚುವುದರ ಮೂಲಕ ಜಿಲ್ಲೆಯಾದ್ಯಂತ ಕರಾವಳಿಯ ತೀರ ಪ್ರದೇಶ, ದೂರ, ದುರ್ಗಮ, ನಗರ  ಹಾಗೂ ಗಡಿನಾಡು ಪ್ರದೇಶಗಳ ಉದ್ದಕ್ಕೂ   ಮತದಾರರಲ್ಲಿ ಮತದಾನದ ಜಾಗೃತಿಯ ಅರಿವಿನ ಭಾವನೆಯನ್ನು ಹುಟ್ಟು ಹಾಕುವ ಪ್ರಯತ್ನವನ್ನು ಜಿಲ್ಲಾಡಳಿತ ಎಲ್ಲಾ ಇಲಾಖೆಗಳ ಹಾಗೂ ಸಂಘಸಂಸ್ಥೆಗಳ ಸಹಕಾರದೊಂದಿಗೆ ಹಮ್ಮಿಕೊಂಡಿದೆ.

ಮೈಮ್ ಷೋ: ಮತದಾನದ ಬಗ್ಗೆ ಮತದಾರರನ್ನು ಆಕರ್ಷಿಸಲು  ಮೈಮ್ ಷೋ  ನಿರೂಪಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ವಿಶಿಷ್ಟ ಮೂಕಾಭಿನಯದ ಮೂಲಕ ಜಾಗೃತಿ ಮೂಡಿಸುವಲ್ಲಿ ವಹಿಸಿದ ಪಾತ್ರ ಗಮನೀಯ. ಈ ಪ್ರಯತ್ನವನ್ನು ಚುನಾವಣಾ ಆಯೋಗವೂ ಶ್ಲಾಘಿಸಿದೆ. ಭಾಷೆ, ಗಡಿಗಳ ವ್ಯಾಪ್ತಿಯಿಲ್ಲದೆ ಭಾವಾಭಿನಯ ಮತ್ತು ಅಂತಿಮವಾಗಿ ಅಕ್ಷರ ರೂಪದಲ್ಲಿ ನೀಡಿದ ನೈತಿಕ ಮತದಾನದ ಸಂದೇಶಗಳು  ಎಲ್ಲರ ಮೆಚ್ಚುಗೆ  ಹಾಗೂ ಗಮನವನ್ನು ಪಡೆಯಿತು. ಚುನಾವಣಾ ಆಯೋಗದ ಸ್ವೀಪ್ ಕಾರ್ಯಕ್ರಮದ  ವಿನೂತನ ಹಾಗೂ ವಿಶಿಷ್ಟ ಹೆಜ್ಜೆಗೆ ದಕ್ಷಿಣ ಕನ್ನಡ ಜಿಲ್ಲೆ ಮುನ್ನುಡಿಯನ್ನು  ಬರೆಯಿತು.

ಮಾಸ್ಕಟ್:-  ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ ಮತ್ತು ಮುಂದಿನ ಎಲ್ಲಾ ಜಿಲ್ಲಾ ಕಾರ್ಯಕ್ರಮಗಳಿಗೆ  ಜಿಲ್ಲೆಯ  ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವೈಶಿಷ್ಟ್ಯಪೂರ್ಣ ಪಾತ್ರ (ಒಚಿಛಿಠಣ) ವನ್ನು 'ಬಾಬಣ್ಣ' ಎಂಬ ಹೆಸರಿನೊಂದಿಗೆ ನಮೂದಿಸಿ ಬಾಬಣ್ಣನ ಮುಖಾಂತರ ಮತದಾನ ಮತ್ತು ನೈತಿಕ ಮತದಾನದ ಸಂದೇಶವನ್ನು ಪ್ರಚುರಪಡಿಸುವ ಬಿತ್ತಿಚಿತ್ರ,ವಿಡಿಯೋ ಕಮರ್ಷಿಯಲ್ಸ್, ಬ್ಯಾನರ್ಗಳು ಇತ್ಯಾದಿಗಳನ್ನು ಜಿಲ್ಲೆಯಾದ್ಯಂತ ಎಲ್ಲಾ ಮಾಧ್ಯಮಗಳಲ್ಲಿ ಪ್ರಚುರ ಪಡಿಸಿರುವುದು ವಿಶೇಷವಾಗಿದೆ.

ಪಂಚಭಾಷಾ ಹಾಡು:- ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಯತ್ನದಲ್ಲಿ ರೂಪುಗೊಂಡ ಚುನಾವಣಾ ಜಾಗೃತಿ ಪ್ರತಿಧ್ವನಿಸುವ  ಪಂಚಭಾಷೆಯಲ್ಲಿ ರೂಪಿಸಿದ ಹಾಡುಗಳು ಜನಮನ ಸೂರೆಗೊಂಡವು. ಸ್ಥಳೀಯ ಭಾಷೆಗಳಾದ ಕನ್ನಡ,ತುಳು, ಬ್ಯಾರಿ,ಹಿಂದಿ ಮತ್ತು  ಕೊಂಕಣಿ ಭಾಷೆಗಳನ್ನೊಳಗೊಂಡಂತೆ ಬಂದ ಹಾಡುಗಳು ಎಲ್ಲರನ್ನೂ ಸೆಳೆಯಿತು. ಜಿಲ್ಲೆಯ ಎಲ್ಲಾ ಇಲಾಖೆಗಳೊಂದಿಗೆ ಸಮನ್ವಯ ಮತ್ತು ಸಂವಹನ ಸಾಧಿಸಿ ಎಲ್ಲೆಡೆಯೂ ಮತದಾನದ ಮಹತ್ವ ಸಾರುವ ಹಾಡನ್ನು ಹಾಡುವ, ಅರಿಯುವ ಹಾಗೂ ಮಾಹಿತಿಯನ್ನು ಹಂಚುವ ಮೂಲಕ ಈ ಹಾಡು ಮತದಾನದ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಶಿಕ್ಷಣ ಇಲಾಖೆಯ  ಪ್ರಮುಖ ಚಟುವಟಿಕೆಗಳಾದ 'ಮೀನಮೇಳ' ಮತ್ತು 'ಸಮುದಾಯದತ್ತ ಶಾಲೆ' ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳ ಪೋಷಕರಿಗೆ ಮತದಾನದ ಜಾಗೃತಿಯನ್ನು ಮೂಡಿಸುವ ಪ್ರಯತ್ನಿಸಲಾಗಿದೆ. 

ಯಕ್ಷಗಾನ: ದಕ್ಷಿಣ ಕನ್ನಡ ಜಿಲ್ಲೆಯು ಯಕ್ಷಗಾನ ಕಲೆಯ ತವರೂರು.. ಜಿಲ್ಲೆಯ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಯಕ್ಷಗಾನದ ಪ್ರದರ್ಶನವನ್ನು ನಗರದ ಮಾಲ್ಗಳಲ್ಲಿ ಆಯೋಜಿಸುವ ಮೂಲಕ ಮತದಾರರಲ್ಲಿ ಜಾಗೃತಿಯನ್ನು ಮೂಡಿಸುವ ಮುಂಚೂಣಿಯನ್ನು ಕಾಲೇಜು ವಿದ್ಯಾರ್ಥಿನಿಯರು ಮತ್ತು ವಿದ್ಯಾರ್ಥಿಗಳು  ವಹಿಸಿಕೊಂಡಿದ್ದರು .ಆ ಮೂಲಕ ಯುವ ಜನಾಂಗ ಹಾಗೂ ಇತರರಲ್ಲಿ ಮತದಾನ ಮಾಡುವ  ಪ್ರೇರಣೆಯನ್ನು ನೀಡಿದರು.  ಈ ಪ್ರದರ್ಶನದಲ್ಲಿ ರಾಜ್ಯದಲ್ಲಿ ಪರಿಣಾಮಕಾರಿ ಆಡಳಿತ ನೆಲೆಸಲು ನೈತಿಕ ಮತದಾನದ ಪ್ರಾಮುಖ್ಯತೆಯ ಸಂದೇಶದ ಪರಿಕಲ್ಪನೆಯನ್ನು  ಸಾರಲಾಯಿತು. ಈ ಯಕ್ಷಗಾನದ ಸಿಡಿಗಳನ್ನು ಸ್ಥಳೀಯ ಚಾನೆಲ್ ಗಳಲ್ಲಿ, ಸಾರಿಗೆ ಬಸ್ ಗಳಲ್ಲಿ, ಪ್ರಾಥಮಿಕ ಆರೋಗ್ಯಕೇಂದ್ರಗಳಲ್ಲಿ, ಶಿಕ್ಷಣ ಸಂಸ್ಥೆಗಳ ಮೂಲಕ ಮತದಾರರನ್ನು ತಲುಪುವ ಕ್ರಮ ಕೈಗೊಳ್ಳಲಾಯಿತು.
    
ಕಡಲ ಕಿನಾರೆಯಲ್ಲಿ ಜಾಗೃತಿ ವಿಹಾರ: ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಪಣಂಬೂರು ಕಡಲತೀರ ಅಭಿವೃದ್ದಿ ನಿಗಮದ ಸಹಯೋಗದಲ್ಲಿ ಮಕ್ಕಳಲ್ಲಿ ಮತದಾನದ ಅರಿವು ಮೂಡಿಸುವ ಕಾರ್ಯಕ್ರಮ ಹಾಗೂ ಸುಮಾರು 2,000 ಜನ ಪ್ರವಾಸಿಗರ ಹಾಗೂ ಸ್ಥಳೀಯ ಜನರ ಗಮನವನ್ನು ಮತದಾನದ  ಜಾಗೃತಿಯ ಗಾಳಿಪಟವನ್ನು ಜಿಲ್ಲಾಧಿಕಾರಿಯವರು ಆಗಸದೆತ್ತರಕ್ಕೆ ಹಾರಿಸುವ  ಮೂಲಕ  ಆಕಷರ್ಿಸಲಾಯಿತು. ಕಾರ್ಯಕ್ರಮದ ಮಧ್ಯೆ ಮತದಾನದ ಅರಿವಿನ ಪಂಚಭಾಷಾ ಹಾಡನ್ನು ಬಿತ್ತರಿಸಲಾಯಿತು. ದಕ್ಕೆಯಲ್ಲಿ ಮೀನುಗಾರರನ್ನು ಪ್ರೇರೇಪಿಸಲು ಸಮುದ್ರದಲ್ಲಿ 5 ದಿನ 'ವಿ ವೋಟ್'ಎಂಬ  ಲಿಖಿತ ಘೋಷಣೆಯೊಂದಿಗೆ ಕ್ರೂಜ್ ಬೋಟ್ ಸಮುದ್ರದಲ್ಲಿ ವಿಹರಿಸಿ ಮೀನುಗಾರರಲ್ಲಿ ಮತದಾನದ ಜಾಗೃತಿಯನ್ನು ಮೂಡಿಸಿದೆ. ಹಾಗೂ ಕಾರ್ಯಕ್ರಮಕ್ಕೆ ಪೂರಕವಾಗಿ ಫುಡ್ ಫೆಸ್ಟಿವಲ್ನ್ನು ಸಹ ಆಯೋಜಿಸಲಾಯಿತು. 

 ತಾಲೂಕ್ ಪಂಚಾಯತ್ ಹಾಗೂ ಸಮಗ್ರ ಗಿರಿಜನ ಅಭಿವೃದ್ದಿ ಯೋಜನಾ ಇಲಾಖೆಯ  ಸಹಯೋಗದೊಂದಿಗೆ ಜಿಲ್ಲಾಡಳಿತ  ದೂರ ಹಾಗೂ ದುರ್ಗಮ ಪ್ರದೇಶಗಳು ಹಾಗೂ ಹಿಂದುಳಿದ ಪ್ರದೇಶಗಳಾದ ಮಧ್ಯ,ಗುತ್ತಕಾಡು, ಅನ್ನಾರ್, ನಾರಾವಿ, ಶಿರ್ಲಾಳು, ಕಲ್ಮಕಾರು, ಬಾಳಗೋಡು ಮತ್ತು ಕುರ್ಕುಂದ ಇತ್ಯಾದಿ  ಪ್ರದೇಶಗಳಿಗೆ ಇಲಾಖಾಧಿಕಾರಿಗಳು ಹಾಗೂ ವಿಶೇಷ ಸಾಂಸ್ಕೃತಿಕ ಕಲಾ ತಂಡಗಳಾದ ಗಿರಿಸಿರಿ ಮತ್ತು ಕೊರಲ್ಗಳ ಮೂಲಕ ಮತದಾನದ ಜಾಗೃತಿಯನ್ನು ಹಮ್ಮಿಕೊಳ್ಳಲಾಯಿತು. ಜನಶಿಕ್ಷಣ ಟ್ರಸ್ಟ್ ಮತ್ತು ಅಪ್ನಾದೇಶ್ ಮಾದರಿ ಗ್ರಾಮೀಣಭಿವೃದ್ಧಿ ಸಂಸ್ಥೆಯ ನೆರವನ್ನು ಪಡೆಯಲಾಗಿದೆ.  ಅವರಲ್ಲಿ ಜಾಗೃತಿ ಹಾಗೂ ಆತ್ಮ ವಿಶ್ವಾಸ ಮೂಡಿಸುವ ಕಾರ್ಯಕ್ರಮಗಳಾದವು. ಮಂಗಳೂರಿನ ಮಧ್ಯ, ಮುಡಿಪು,  ಬೆಳ್ತಂಗಡಿ ಅನ್ನಾರ್ಗಳಲ್ಲಿ ನಡೆದ ರ್ಯಾಲಿಯಲ್ಲಿ ಜನರು ಪಾಲ್ಗೊಂಡ ರೀತಿ ಪ್ರಜಾಪ್ರಭುತ್ವದ ಮೇಲೆ ಜನರಿಟ್ಟಿರುವ ನಂಬಿಕೆಗೆ ಸಾಕ್ಷಿಯಾಗಿತ್ತು.

ಯುವಜನತೆಗೆ   ಬೈಕ್ ರಾಲಿ, ಮಾಸ್ಕಟ್, ಮಾನವ ಸರಪಳಿ ಮತ್ತು  ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಮತದಾನದ ಪ್ರತಿಜ್ಞಾ ಸ್ವೀಕಾರ ಮಾಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಅಂತಿಮ ಹಂತದಲ್ಲಿ ಮತದಾನ ಮಾಡಿ ಎಂದು ಪ್ರೇರೇಪಿಸಲು ಎನ್ವೈಕೆ ಸಹಯೋಗದೊಂದಿಗೆ  ಮಂಗಳೂರು ವಿಶ್ವವಿದ್ಯಾನಿಲಯದ ಕಾಲೇಜು ಆವರಣದಲ್ಲಿ 365 ಮಣ್ಣಿನ ಹಣತೆ ದೀಪಗಳನ್ನು ಭಾರತ ದೇಶದ ನಕಾಶೆಯ ಮಾದರಿಯಲ್ಲಿ ಬೆಳಗಿಸಿ ನಿರಂತರವಾಗಿ ಚಾಲ್ತಿಯಲ್ಲಿರುವ ಅರಿವು ಮತ್ತು ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 

ಜಿಲ್ಲೆಯಲ್ಲಿ ಪ್ಯಾರಾ ಸ್ಲೈಡರ್ ಹಾರಿಸುವ ಮೂಲಕ ಮತದಾನದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ನಗರ ಹಾಗೂ ಗ್ರಾಮಾಂತರ ಮಹಿಳೆಯರಿಗೆ ಯಕ್ಷಗಾನ,ಮೈಮ್ ಶೋ,ಹಾಡು, ಬಿತ್ತಿಪತ್ರ, ಬೀದಿನಾಟಕ, ಕರಪತ್ರ, ಸ್ರ್ತೀ ಶಕ್ತಿ ಗುಂಪುಗಳಿಗೆ ಮತದಾನದ ಪ್ರತಿಜ್ಞಾ ಸ್ವೀಕಾರ, ಜಾಥಾ ಹಾಗೂ ಮಾನವ ಸರಪಳಿಗಳ ಮುಂತಾದ ಕಾರ್ಯಕ್ರಗಳನ್ನು ವಿಶೇಷವಾಗಿ ಜಿಲ್ಲೆಯ 2102 ಅಂಗನವಾಡಿ ಕೇಂದ್ರಗಳಲ್ಲಿ ಅಂಗನವಾಡಿ ಸಹಾಯಕಿಯರು ಕಾರ್ಯಕರ್ತೆಯರು ಮೇಲ್ವಿಚಾರಕರ  ಮೂಲಕ ಜಿಲ್ಲಾಡಳಿತ ಮತದಾನದ ಜಾಗೃತಿಯನ್ನು ವ್ಯಾಪಕವಾಗಿ  ಮೂಡಿಸಲಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಶಾ ಕಾರ್ಯಕರ್ತೆಯರು, ಹಿರಿಯ ಮತ್ತು ಕಿರಿಯ ಆರೋಗ್ಯ ಸಹಾಯಕರು, ಜಿಲ್ಲೆಯ ಎಲ್ಲಾ ವೈದ್ಯರುಗಳು ಮತದಾನದ ಜಾಗೃತಿ ಕಾರ್ಯಕ್ರಮವನ್ನು  ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದರು.
ಕಾರ್ಮಿಕ ಇಲಾಖೆ,ಫ್ಯಾಕ್ಟರಿ ಹಾಗೂ ಬಾಯ್ಲರ್ ಇಲಾಖೆ ಮತ್ತು ಕೈಗಾರಿಕೆ ಇಲಾಖೆ ಸಮಗ್ರವಾಗಿ,  ಎಲ್ಲಾ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರಿಗೆ ವೈಶಿಷ್ಟ್ಯ ಪೂರ್ಣ ಅರಿವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದರು.
ಸಾರಿಗೆ ಮತ್ತು ಕೆ.ಎಸ್.ಆರ್.ಟಿ.ಸಿ ಇಲಾಖೆಯ ಮೂಲಕ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಬಸ್ಸುಗಳಲ್ಲಿ ಮತದಾರ ಜಾಗೃತಿ ಭಿತ್ತಿ ಪತ್ರ, ಸಿಡಿಗಳ ಮೂಲಕ ವ್ಯಾಪಕವಾಗಿ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಗ್ರಾಮ ಪಂಚಾಯತ್ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರ ಮತ್ತು ಸಮನ್ವಯ ಎಲ್ಲಾ ಇಲಾಖೆಗಳಲ್ಲಿ ಎಲ್ಲರ ಸಹಕಾರ ಹಾಗೂ ಸಮನ್ವಯದೊಂದಿಗೆ ಮತದಾನದ ಜಾಗೃತಿ ಮತ್ತು ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದೆ.

ಚುನಾವಣಾ ಆಯೋಗದಿಂದ ನೀಡಲಾದ  ಜಾಗೃತಿ ಕಾರ್ಯಕ್ರಮಗಳ ಜಾಹೀರಾತನ್ನು ಲೋಕಲ್ ಚಾನಲ್ಸ್ ಹಾಗೂ ಎಫ್ ಎಂ ಮೂಲಕ ಹಾಗೂ ಆಕಾಶವಾಣಿ ಮೂಲಕ ಜನಮಾನಸ ತಲುಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಯಿತು. ಜಿಲ್ಲೆಯಲ್ಲಿ ಸುಮಾರು 70000 ಅರ್ಜಿಗಳನ್ನು ಸ್ವೀಕರಿಸಲಾಗಿದೆ.

ನೈತಿಕ ಮತದಾನದ ಸಂದೇಶದೊಂದಿಗೆ ಸ್ವಯಂ ಪ್ರೇರಿತರಾಗಿ ಎಲ್ಲರೂ ಮತದಾನ ಮಾಡುವ  ಭಯಮುಕ್ತ, ಸುವ್ಯವಸ್ಥಿತ ವಾತಾವರಣವನ್ನು ಜಿಲ್ಲಾಡಳಿತ ನಿರ್ಮಿಸಿದೆ.  ಸುಗಮ, ಶಾಂತಿಯುತ ಮತದಾನದ ಪ್ರಕ್ರಿಯೆ ಜಿಲ್ಲಾಡಳಿತದ ಸಂಕಲ್ಪ.   

Friday, May 3, 2013

ಜಿಲ್ಲೆಯಾದ್ಯಂತ ಕಲಂ 144 ರನ್ವಯ ನಿಷೇದಾಜ್ಞೆ ಜಾರಿ -ಹರ್ಷಗುಪ್ತ

ಮಂಗಳೂರು,ಮೇ.03 :-ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಮೂಲಕ ಶಾಂತ ಮತ್ತು ಮುಕ್ತ ಮತದಾನಕ್ಕೆ ಅವಕಾಶ ಕಲ್ಪಿಸುವ  ದೃಷ್ಟಿಯಿಂದ ಸಿಆರ್ ಪಿಸಿ ಕಲಂ 144 ರನ್ವಯ ಪ್ರತಿಬಂಧಕಾಜ್ಞೆಯನ್ನು ಹೊರಡಿಸುವುದು ಆವಶ್ಯವೆಂದು ಪರಿಗಣಿಸಿ ದಿನಾಂಕ 03-5-13 ರ ಅಪರಾಹ್ನ 5.00 ಗಂಟೆಯಿಂದ ದಿನಾಂಕ 06-5-13 ರ ಪೂರ್ವಾಹ್ನ 6.00 ಗಂಟೆ ವರೆಗೆ ದಕ್ಷಿಣಕನ್ನಡ ಜಿಲ್ಲಾ ದಂಡಾಧಿಕಾರಿ ಹಾಗೂ  ಜಿಲ್ಲಾಧಿಕಾರಿಗಳಾದ  ಹರ್ಷಗುಪ್ತರವರು ನಿಷೇಧಾಜ್ಞೆಯನ್ನು ವಿಧಿಸಿ ಆದೇಶಿಸಿರುತ್ತಾರೆ.
           ಅದರಂತೆ ವಿಧಾನಸಭಾ ಚುನಾವಣೆ 2013 ಅಂಗವಾಗಿ ಯಾವುದೇ ಅಹಿತಕಾರಿ ಘಟನೆಗಳು ನಡೆಯದಂತೆ ಹಾಗೂ ಗುಂಪು ಗುಂಪಾಗಿ ರ್ಯಾಲಿ ಮೂಲಕ ಮತಯಾಚಿಸುವುದನ್ನು ತಡೆಯಲಾಗಿದೆ. ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಮೇಲೆ ತಿಳಿಸಿದ ಅವಧಿಯಲ್ಲಿ ಸಾರ್ವಜನಿಕರು 5 ಅಥವಾ ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆ,ಬೀದಿ,ಓಣೆ ಕೇರಿಗಳಲ್ಲಿ ಸಾರ್ವಜನಿಕ ಸ್ಥಳ,ಕಟ್ಟಡ ಮತ್ತು ಮತದಾನ ಕೇಂದ್ರಗಳ ಸುತ್ತಮುತ್ತ ಗುಂಪು ಸೇರುವುದನ್ನು ನಿಷೇಧಿಸಿದೆ. ಯಾವುದೇ ಆಯುಧ,ಕುಡುಗೋಲು, ಖಡ್ಗ, ಭರ್ಚಿ,ಮುಂತಾದ ಮಾರಕಾಯುಧಗಳನ್ನು ಹೊಂದುವುದನ್ನು ನಿಷೇಧಿಸಿದೆ. ಜಿಲ್ಲಾ ಚುನಾವಣಾಧಿಕಾರಿಯವರ ಪೂರ್ವಾನುಮತಿ ಪಡೆಯದೇ ಯಾವುದೇ ರೀತಿಯ ಮೆರವಣಿಗೆ, ಸಾರ್ವಜನಿಕ ಸಭೆ ಸಮಾರಂಭಗಳನ್ನು ನಡೆಸಬಾರದು.ಅಲ್ಲದೆ ಯಾವುದೇ ಕೂಗನ್ನು ಉಚ್ಚರಿಸುವುದು ಯಾ ಪದ ಹಾಡುವುದು, ಚೇಷ್ಟೆ ಮಾಡುವುದು, ಸಂಜ್ಞೆಗಳನ್ನು ಉಪಯೋಗಿಸುವುದು ಮತ್ತು ಚಿತ್ರಗಳ ಮೂಲಕ ಪ್ರಸಾರ ಮಾಡುವುದು,ಪ್ರಕಟಣಾ ಪತ್ರಿಕೆಗಳ ಯಾ ಇತರೆ ಯಾವುದೇ ವಸ್ತುಗಳ ಪ್ರದರ್ಶನ ಬಿತ್ತಿ ಪತ್ರಗಳನ್ನು ಅಂಟಿಸುವುದರಿಂದ ಸಭ್ಯತನ ಸದಾಚಾರ ಸಾರ್ವಜನಿಕ ಭದ್ರತೆ ಶಿಥಿಲಗೊಳ್ಳುವಂತಹ ಯಾವುದೇ ರೀತಿಯ ಅಪರಾಧ ಎಸಗುವರೇ ಪ್ರೇರೇಪಿಸುವ ಕ್ರಮವನ್ನು ನಿಷೇಧಿಸಿದೆ. ನಾಲ್ಕು ಅಥವಾ ಅದಕ್ಕಿಂತ ಕಡಿಮೆ ಜನರು ಮನೆಮನೆಗೆ ತೆರಳಿ ಮತಯಾಚನೆ ಮಾಡಲು ಯಾವುದೇ ನಿರ್ಬಂಧವಿರುವುದಿಲ್ಲ.
ಈ ಆದೇಶವು ಸರ್ಕಾರದಿಂದ ನಡೆಸಲ್ಪಡುವ ಯಾವುದೇ ಕಾರ್ಯಕ್ರಮ ಸಭೆ ಸಮಾರಂಭಗಳಿಗೆ ಅಸನ್ವಯಿಸುವುದಿಲ್ಲ ಮತ್ತು ಅರಕ್ಷಕ ಸಿಬ್ಬಂದಿಗಳು ಕಾರ್ಯ ನಿರ್ವಹಣೆ ವೇಳೆ  ಲಾಠಿಗಳನ್ನು ಉಪಯೋಗಿಸುವುದಕ್ಕೆ ಅನ್ವಯಿಸುವುದಿಲ್ಲ ಹಾಗೂ ಚುನಾವಣಾ ಕರ್ತವ್ಯದಲ್ಲಿ ನಿರತರಾಗಿರುವ  ಸಿಬ್ಬಂದಿಗಳು ಅವರ ಚುನಾವಣಾ ಕರ್ತವ್ಯ ನಿರ್ವಹಿಸುವ ಸ್ಥಳಕ್ಕೆ ಅನ್ವಯಿಸುವುದಿಲ್ಲ ಎಂದು ದಕ್ಷಿಣಕನ್ನಡ ಜಿಲ್ಲಾ ದಂಡಾಧಿಕಾರಿ ಹರ್ಷಗುಪ್ತ ತಿಳಿಸಿದ್ದಾರೆ.
  ಚುನಾವಣಾ ಪೂರ್ವ ಸಮೀಕ್ಷೆಗಳು ಮೇ5 ರೊಳಗೆ ನಿಷೇಧ
  ಭಾರತೀಯ ಚುನಾವಣಾ ಆಯೋಗ ಪ್ರಜಾಪ್ರತಿನಿಧಿ ಕಾಯ್ದೆ 1951 ಸೆಕ್ಷನ್ 126ಎ ಹಾಗೂ ಉಪ ಸೆಕ್ಷನ್ (1) ಅನ್ವಯ ಯಾವುದೇ ಚುನಾವಣಾ ಪೂರ್ವ ಸಮೀಕ್ಷೆಗಳನ್ನು ಮುದ್ರಣ/ದೃಶ್ಯ ಮಾಧ್ಯಮಗಳ ಮೂಲಕ ಪ್ರಕಟಿಸುವ ಬಗ್ಗೆ ಆದೇಶ ಹೊರಡಿಸಿ,ವಿಧಾನಸಭಾ ಚುನಾವಣೆಗಳು ಮೇ5 ರ ಬೆಳಿಗ್ಗೆ 7 ರಿಂದ ಸಂಜೆ 5.30 ರ ವರೆಗೆ ನಿಷೇಧಿಸಲಾಗಿದೆಯೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ  ತಿಳಿಸಿದ್ದಾರೆ.
 ಮತದಾನ  ಶಾಯಿ ಗುರುತು ಉಂಗುರ ಬೆರಳಿಗೆ
ಮೇ 5ರಂದು  ರಾಜ್ಯ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಮತದಾರರಿಗೆ ಎಡಗೈ ಉಂಗುರದ ಬೆರಳಿಗೆ ಅಳಿಸಲಾಗದ ಶಾಯಿ ಗುರುತನ್ನು ಮಾಡುವಂತೆ ಭಾರತ ಚುನಾವಣಾ ಆಯೋಗವು ಆದೇಶಿಸಿದೆ. ಕಳೆದ ಮಾರ್ಚ್ 2013 ರಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆ ಸಂದರ್ಭದಲ್ಲಿ ಮತದಾರರ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿ ಗುರುತನ್ನು ಹಾಕಲಾಗಿದ್ದು,ಅದರ ಗುರುತು ಇನ್ನು ಇರುವುದರಿಂದ ಚುನಾವಣಾ ಆಯೋಗವು ಈ ನಿರ್ಧಾರವನ್ನು ಕೈಗೊಂಡಿದೆ.
 ಮತದಾನಕ್ಕೆ ಈ ದಾಖಲೆಗಳಿರಲಿ
ಮತದಾರರು ಮತಪಟ್ಟಿಯಲ್ಲಿ ತಮ್ಮ ಹೆಸರನ್ನು ದೃಢಪಡಿಸಿಕೊಂಡು,ಮತದಾನ ಮಾಡುವ ಸಂದರ್ಭದಲ್ಲಿ ಅವರನ್ನು ಗುರುತಿಸಲು ಅವರು ನೀಡಬೇಕಾದ ಗುರುತಿನ ದಾಖಲೆಗಳನ್ನು ಭಾರತ ಚುನಾವಣಾ ಆಯೋಗವು ಮತದಾರರ ಭಾವಚಿತ್ರದ ಗುರುತಿನ ಚೀಟಿ ಅಥವಾ 23 ದಾಖಲೆಗಳ ಪೈಕಿ ಯಾವುದಾದರೊಂದನ್ನು ಹಾಜರುಪಡಿಸುವುದನ್ನು ಕಡ್ಡಾಯ ಮಾಡಿದೆ. ಮತಪತ್ರವನ್ನು ಮತದಾರರಿಗೆ ನೀಡುವ ಮುನ್ನ ಅವರು ತಮ್ಮ ಗುರುತನ್ನು ಸಾಬೀತು ಪಡಿಸತಕ್ಕದ್ದು.ಕುಟುಂಬದ ಮುಖ್ಯಸ್ಥರ ಹೆಸರಿನಲ್ಲಿ ನೀಡಲಾಗಿರುವ ಈ ಕೆಳಕಂಡ 23 ದಾಖಲೆಗಳ ಪೈಕಿ ಯಾವುದಾದರೊಂದು ದಾಖಲೆಯನ್ನು ಆ ಕುಟುಂಬದ ಇನ್ನಿತರ ಸದಸ್ಯರು ಗುರುತಿಗೆ ಬಳಸಬಹುದಾಗಿದೆ.
ಅಧಿಕೃತ ಫೊಟೋ ಹೊಂದಿರುವ ಮತದಾನ ಚೀಟಿ/ಪಾಸ್ ಪೋರ್ಟ್/ಡ್ರೈವಿಂಗ್ ಲೈಸನ್ಸ್/ಆದಾಯತೆರಿಗೆ ಗುರುತಿನ ಚೀಟಿ/ರಾಜ್ಯ:ಕೇಂದ್ರ ಸರ್ಕಾರ ಹಾಗೂ ಸಾರ್ವಜನಿಕ ಉದ್ದಿಮೆಗಳು ಅಥವಾ ಇತರೆ ಖಾಸಗಿ ಔದ್ಯಮಿಕ ಸಂಸ್ಥೆಗಳು ಅವರ ಕೆಲಸಗಾರರಿಗೆ ನೀಡಿರುವ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿಗಳು/ಸಾರ್ವಜನಿಕ ವಲಯದ ಬ್ಯಾಂಕ್/ಕಿಸಾನ್ ಮತ್ತು ಅಂಚೆ ಕಚೇರಿ ನೀಡಿರುವ ಭಾವಚಿತ್ರವಿರುವ ಪಾಸ್ ಪುಸ್ತಕ/31-3-13 ರೊಳಗೆ ಮಾನ್ಯತೆ ಪಡೆದ ನೋಂದಾಯಿತ ವಿದ್ಯಾ ಸಂಸ್ಥೆಗಳು ವಿದ್ಯಾಥರ್ಿಗಳಿಗೆ ಕೊಟ್ಟಿರುವ ಗುರುತಿನ ಚೀಟಿಗಳು/ಭಾವಚಿತ್ರವಿರುವ ನೋಂದಾಯಿತ ಡೀಡ್ ಗಳು/ಪಟ್ಟಾಗಳು ಮುಂತಾದ ಆಸ್ತಿ ದಾಖಲೆಗಳು/ಭಾವಚಿತ್ರವಿರುವ ಪಡಿತರ ಚೀಟಿಗಳು/ಸಕ್ಷಮ ಪ್ರಾಧಿಕಾರ ನೀಡಿರುವ ಭಾವಚಿತ್ರವಿರುವ ಪಿಂಚಣಿ ಪಾವತಿ ಆದೇಶಗಳು ಅಥವಾ ಮಾಜಿ ಯೋಧರ ಪಿಂಚಣಿ ಪುಸ್ತಕ/ಪಿಂಚಣಿ ಸಂದಾಯ ಆದೇಶಗಳಂತಹ ಪಿಂಚಣಿ ದಾಖಲೆಗಳು,ವೃದ್ಧಾಪ್ಯ ವೇತನ ಆದೇಶಗಳು,ವಿಧವಾ ವೇತನ ಆದೇಶಗಳು/ಭಾವಚಿತ್ರವಿರುವ ಸ್ವಾತಂತ್ರ್ಯ ಯೋಧರ ಗುರುತಿನ ಚೀಟಿಗಳು/ಸಕ್ಷಮ ಪ್ರಾಧಿಕಾರ ನೀಡಿರುವ ಭಾವಚಿತ್ರವಿರುವ ಶಸ್ತ್ರ ಪರವಾನಗಿ/ಅಂಗವಿಕಲರಿಗೆ ಸಕ್ಷಮ ಪ್ರಾಧಿಕಾರ ನೀಡಿರುವ ಭಾವಚಿತ್ರವಿರುವ ಗುರುತಿನ ಚೀಟಿಗಳು/ಮಾಜಿ ಯೋಧರ ಭಾವಚಿತ್ರವಿರುವ ಸಿ.ಎಸ್.ಡಿ ಕ್ಯಾಂಟೀನ್ ಕಾರ್ಡ್/ಸಂಧ್ಯಾ ಸುರಕ್ಷಾ ಯೋಜನೆಯ ಭಾವಚಿತ್ರವಿರುವ ಗುರುತಿನ ಚೀಟಿ/ಎನ್ಆರ್ಇಜಿ ಯೋಜನೆಯಡಿಯಲ್ಲಿ  ನೀಡಿರುವ ಭಾವಚಿತ್ರವಿರುವ ಉದ್ಯೋಗ ಕಾರ್ಡ್/ಭಾವಚಿತ್ರವಿರುವ ಯಶಸ್ವಿನಿ ಕಾರ್ಡ್/ಮಹಾನಗರಪಾಲಿಕೆ,ನಗರಸಭೆ,ಪುರಸಭೆ,ಗ್ರಾಮ ಪಂಚಾಯತಿಗಳು ಇತ್ಯಾದಿ ಸ್ಥಳೀಯ ಸಂಸ್ಥೆಗಳು  ನೀಡಿರುವ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿಗಳು/ಸರ್ಕಾರಿ ಇಲಾಖೆ ನೀಡಿರುವ ಭಾವಚಿತ್ರವಿರುವ ಹಿರಿಯ ನಾಗರೀಕರ ಗುರುತಿನ ಚೀಟಿ/ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ನೀಡಿರುವ ಕುಟುಂಬದ ಸದಸ್ಯರ ಹೆಸರು ಮತ್ತು ವಯಸ್ಸು ಹಾಗೂ ಕುಟುಂಬದ ಯಜಮಾನನೊಂದಿಗೆ ಹೊಂದಿರುವ ಸದಸ್ಯರ ಸಂಬಂಧ ಒಳಗೊಂಡ ಭಾವಚಿತ್ರ ಇರುವ ತಾತ್ಕಾಲಿಕ/ಮೂಲ ಪಡಿತರ ಚೀಟಿ/ಆಧಾರ್ ಕಾರ್ಡ್,ಭಾವಚಿತ್ರವಿರುವ ಆರೋಗ್ಯ ವಿಮಾ ಯೋಜನೆಯ ಸ್ಮಾರ್ಟ್  ಕಾರ್ಡ್ ಗಳು ಸೂಕ್ತ ಪ್ರಾಧಿಕಾರ ಮಾರ್ಚ್ 2013ರೊಳಗೆ ನೀಡಿರುವ ಭಾವಚಿತ್ರ ಸಹಿತ ಎಸ್ಸಿ/ಎಸ್ಟಿ/ಒಬಿಸಿ/ದೃಢೀಕರಣ ಪತ್ರಗಳು ಮತದಾನ ಸಂದರ್ಭದಲ್ಲಿ ಗುರುತಿನ ದಾಖಲೆಗೆ ನೀಡಬಹುದಾಗಿದೆ. 

Daily report on voilation of Model Code of Conduct...

please click here

Daily report on voilation of Model Code of Conduct...

please click here

ದೇಶದ ಪ್ರಗತಿಗಾಗಿ ಮತದಾನದಲ್ಲಿ ಪಾಲ್ಗೊಳ್ಳಿ; ಯುವಜನತೆಗೆ ಜಿಲ್ಲಾಧಿಕಾರಿ ಕರೆ

ಮಂಗಳೂರು,ಮೇ.03:- ದೇಶದ ಎಲ್ಲಾ ಯುವಜನತಯೆ ಮತದಾನದಲ್ಲಿ ಖಡ್ಡಾಯವಾಗಿ ಭಾಗವಹಿಸಿ ಸೂಕ್ತ ವ್ಯಕ್ತಿಯನ್ನು ಚುನಾಯಿಸಿದಲ್ಲಿ ದೇಶದ ಪ್ರಗತಿ ಯ ದಕ್ಕೇ ಬದಲಾಗಲಿದೆ, ಆದ್ದರಿಂದ ಎಲ್ಲಾ ಯುವಪೀಳಿಗೆ ಮತದಾನದಲ್ಲಿ ಭಾಗವಹಿಸಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಹರ್ಷಗುಪ್ತ ಅವರು ಯುವಜನತೆಗೆ ಕರೆನೀಡಿದ್ದಾರೆ.
     ಅವರು ಗುರುವಾರ ಸಂಜೆ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ನೆಹರು ಯುವಕೇಂದ್ರ, ಮಂಗಳೂರು, ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪಂಚಾಯತ್, ಮಂಗಳೂರು, ಲಯನ್ಸ ಕ್ಲಬ್,ಮಂಗಳೂರು ಹಾಗೂ ಅಸೊಸಿಯೇಷನ್ ಆಫ್ ಕನ್ಸಟ್ರಕ್ಷನ್ ಇಂಜಿನಿಯರ್ಸ್(ಇಂ)ಮಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮತದಾರರ ಜಾಗೃತಿ ಕಾರ್ಯಕ್ರಮದ ಅಂಗವಾಗಿ ನಡೆದ ಕ್ಯಾಂಡಲ್ ಶೋ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು.
     ಇಂದು ಸ್ವೀಪ್ ಕಾರ್ಯಕ್ರಮದ ಸಮಾರೋಪ ಸಮಾರಂಭ ಇಷ್ಟೋಂದು ಅರ್ಥಪೂರ್ಣವಾಗಿ ಜರುಗುತ್ತಿರುವುದು ತುಂಬಾ ಶ್ಲಾಘನೀಯವಾಗಿದೆ ಎಂದು ಪ್ರಶಂಸಿಸಿದರು.
     ಸಮಾರಂಭದಲ್ಲಿ ಉಪಸ್ಥಿತರಿದ್ದ ದ.ಕ.ಜಿಲ್ಲಾಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ|ಕೆ.ಎನ್.ವಿಜಯಪ್ರಕಾಶ್ ಅವರು ಮಾತನಾಡಿ ಮತದಾರರ ಜಾಗೃತಿ ಕಾರ್ಯಕ್ರಮ ಒಂದುದಿನದ ಕಾರ್ಯಕ್ರಮವಲ್ಲ ಬದಲಾಗಿ ನಿರಂತರವಾಗಿ ವರ್ಷಪೂರ್ತಿ ನಡೆಯುತ್ತಿರಬೇಕು ಅದಕ್ಕಾಗಿಯೇ ಭಾರತದ ಭೂಪಟದ ಸುತ್ತಲೂ 365 ನಂದಾದೀಪಗಳನ್ನು ಹಚ್ಚಲಾಗಿದೆ ಎಂದು ತಿಳಿಸಿದರು.
     ಸಮಾರಂಭದಲ್ಲಿ ಮಂಗಳೂರು ಮಹಾನಗರಪಾಲಿಕೆ ಆಯುಕ್ತರಾದ ಡಾ|ಹರೀಶ್ ಕುಮಾರ್ ಮುಂತಾದವರು ಹಾಜರಿದ್ದರು.

Thursday, May 2, 2013

ಸ್ವಯಂಪ್ರೇರಿತರಾಗಿ ಮತದಾನ ಮಾಡಿ: ಸಿಇಓ

ಮಂಗಳೂರು, ಮೇ.02 :ಮತದಾನ ನಮ್ಮ ಹಕ್ಕು ಹಾಗೂ ಕರ್ತವ್ಯ; ತಪ್ಪದೆ ಮತದಾನ ಮಾಡಿ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್ ಹೇಳಿದರು.
ಅವರು ಬುಧವಾರ  ಸಂಜೆ ನಗರದ ಬಂದರು ಮೀನುಗಾರಿಕಾ ದಕ್ಕೆಯಲ್ಲಿ ಮೀನುಗಾರರನ್ನು ಗಮನದಲ್ಲಿರಿಸಿ ಆಯೋಜಿಸಲಾದ ಮತದಾರರ ಜಾಗೃತಿ ಮತ್ತು ಶಿಕ್ಷಣ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಿದ್ದರು.
ನೂರಾರು ಮೀನುಗಾರ ಬಂಧುಗಳು ಹಾಗೂ ಅವರ ಕುಟುಂಬದವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಮತದಾನ ಮಾಡುವ ಬಗ್ಗೆ ಹಾಗೂ ಇತರರಿಗೆ  ಮತದಾನ ಮಾಡುವಂತೆ ಮನವೊಲಿಸುವ ಪ್ರಮಾಣವಚನ ಬೋಧಿಸಲಾಯಿತು. ನಿನ್ನೆಯಿಂದ ಐದು ದಿನಗಳ ಕಾಲ 'ವೋಟ್ ಮಿ' ಎಂಬ ಸಂದೇಶದೊಂದಿಗೆ ದೋಣಿ ಸಮುದ್ರದಲ್ಲಿ ಸಂಚರಿಸಲಿದೆ.
ಮೀನುಗಾರರ ಬದುಕೇ ಸವಾಲುಗಳಿಂದೊಡಗೂಡಿದ ಸಾಹಸದ ಬದುಕು. ಮೀನುಗಾರರೆಲ್ಲರೂ ನೈತಿಕ ಮತದಾನಕ್ಕೆ ಆದ್ಯತೆ ನೀಡಿ ಮೇ ಐದರಂದು ನಡೆಯಲಿರುವ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಿ ಎಂಬ ಸಂದೇಶ ನೀಡಿದರು.
ಸಭೆಯಲ್ಲಿ ಯತೀಶ್ ಬೈಕಂಪಾಡಿ, ಹರೀಶ್ಚಂದ್ರ ಪುತ್ರನ್, ಅಬ್ದುಲ್ ರೆಹಮಾನ್,ಯೂತ್ ಕ್ಲಬ್ ನ ಚೇತನ್ ಬೆಂಗ್ರೆ, ಮೀನುಗಾರಿಕಾ ಇಲಾಖೆ ಉಪನಿರ್ದೇಶಕರಾದ ಸುರೇಶ್ ಕುಮಾರ್, ಸಹಾಯಕ ನಿರ್ದೇಶಕರಾದ ಪಾಶ್ರ್ವನಾಥ್ ಮುಂತಾದವರು ಭಾಗವಹಿಸಿದ್ದರು.

Wednesday, May 1, 2013

ಚುನಾವಣಾ ಸಂಬಂಧಿ ಮಾಹಿತಿಗೆ dk.nic.inವೆಬ್ ಸೈಟ್ ವೀಕ್ಷಿಸಿ

ಮಂಗಳೂರು, ಮೇ.1 : ಜಿಲ್ಲೆಯಲ್ಲಿ ನ್ಯಾಯ ಸಮ್ಮತ ಹಾಗೂ ಮುಕ್ತ ಚುನಾವಣೆಗೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಕೈಗೊಂಡ ಕ್ರಮಗಳನ್ನು ಎಲ್ಲರೂ ವೀಕ್ಷಿಸಲು ಅನುಕೂಲವಾಗುವಂತೆ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿ dk.nic.in ವೆಬ್ ಸೈಟ್ ರೂಪಿಸಲಾಗಿದೆ.
ಇದುವರೆಗೆ ಜಿಲ್ಲಾಡಳಿತದಿಂದ ಸಭೆ ಸಮಾರಂಭಗಳಿಗೆ ನೀಡಿದ ಅನುಮತಿ, ವಾಹನಗಳಿಗೆ ನೀಡಿದ ಅನುಮತಿ ಹಾಗೂ ಮಾಧ್ಯಮಗಳಿಗೆ ನೀಡಿದ ಅನುಮತಿ ಹಾಗೂ ಅಭ್ಯರ್ಥಿಗಳು ನೀಡಿರುವ ಖರ್ಚು ವೆಚ್ಚದ ಮಾಹಿತಿಯನ್ನು ಇಲ್ಲಿಂದ ಪಡೆಯಬಹುದಾಗಿದೆ.
ಎಲ್ಲ ಮಾಹಿತಿಗಳು ಎಲ್ಲರಿಗೂ ಲಭ್ಯವಾಗಬೇಕೆನ್ನುವ ಉದ್ದೇಶದಿಂದ ಜಿಲ್ಲಾ ಚುನಾವಣಾಧಿಕಾರಿಗಳು ರೂಪಿಸಿರುವ ಈ ವೆಬ್ ಸೈಟ್ ನಲ್ಲಿ ಸಮಗ್ರ ಮಾಹಿತಿಗಳಿವೆ. ಇದುವರೆಗೆ ಒಟ್ಟು 223 ವಾಹನಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು ಅನುಮತಿ ನೀಡಲಾಗಿದೆ. ಸಭೆ ಸಮಾರಂಭಗಳಿಗೆ ಹಾಗೂ ರ್ಯಾಲಿಗಳಿಗೆ ಒಟ್ಟು 402 ಅರ್ಜಿಗಳು ಬಂದಿದ್ದು, ಅನುಮತಿಸಲಾಗಿದೆ.
ಪತ್ರಿಕೆ ಮತ್ತು ದೃಶ್ಯ ಮಾಧ್ಯಮಗಳಿಗೆ ಸಂಬಂಧಿಸಿದಂತೆ 210 ಅರ್ಜಿಗಳಿಗೆ ಅನುಮತಿ ನೀಡಲಾಗಿದೆ. ಪಾವತಿ ಸುದ್ದಿ ಮಾಹಿತಿಯು ಲಭ್ಯವಿದೆ. ಅಕೌಂಟ್ ರಿಜಿಸ್ಟರ್ ಆಫ್ ಕ್ಯಾಂಡಿಡೇಟ್ಸ್ನಡಿ ಕ್ಷೇತ್ರವಾರು ಪ್ರತೀ ಅಭ್ಯರ್ಥಿಗಳು ನೀಡಿದ ವಿವರ ಪಡೆಯಬಹುದೆಂದು ಜಿಲ್ಲಾ ಚುನಾವಣಾಧಿಕಾರಿ ಹರ್ಷಗುಪ್ತ ಅವರು ಹೇಳಿದ್ದಾರೆ.

ಮನೆ ಮನೆಗೆ ಬಿಎಲ್ ಓಗಳ ಮೂಲಕ ವೋಟರ್ ಸ್ಲಿಪ್ ವಿತರಣೆ: ಜಿಲ್ಲಾಧಿಕಾರಿ

ಮಂಗಳೂರು, ಮೇ.1 :  ಮೇ 5 ರಂದು ನಡೆಯಲಿರುವ  ರಾಜ್ಯ ವಿಧಾನಸಭಾ ಚುನಾವಣೆ 2013ರ ಚುನಾವಣೆಯಂದು ಅರ್ಹ ಮತದಾರರು ಮತದಾನ ಚಲಾಯಿಸಲು ಅನುಕೂಲವಾಗುವಂತೆ ಚುನಾವಣಾ ಆಯೋಗ ಮನೆ ಮನೆಗೆ ಬಿಎಲ್ ಓಗಳ ಮೂಲಕ ವೋಟರ್ ಸ್ಲಿಪ್ ವಿತರಿಸಲಿದ್ದು, ಈ ಸ್ಲಿಪ್ನ್ನು  ಗುರುತಿನ ಚೀಟಿಯಾಗಿ ಬಳಸಲು ಚುನಾವಣಾ ಆಯೋಗ ಅನುಮತಿ ನೀಡಿದೆ. ಬಿಎಲ್ಓಗಳು ನೀಡುವ ವೋಟರ್ ಸ್ಲಿಪ್ ಮಾತ್ರ ಅಧಿಕೃತವಾಗಿದ್ದು, ರಾಜಕೀಯ ಪಕ್ಷಗಳು ವಿತರಿಸುವ ವೋಟರ್ ಸ್ಲಿಪ್ನ್ನು ಗುರುತಿನ ಚೀಟಿಯಾಗಿ ಬಳಸಲು ಅವಕಾಶವಿಲ್ಲ ಎಂದು  ಜಿಲ್ಲಾಧಿಕಾರಿ ಹಾಗೂ ಚುನಾವಣಾ ಅಧಿಕಾರಿಯಾಗಿರುವ  ಹರ್ಷಗುಪ್ತ ಅವರು ಸ್ಪಷ್ಟಪಡಿಸಿದ್ದಾರೆ.
ಈಗಾಗಲೇ ಎಪ್ರಿಲ್ 30 ರಿಂದ  ವೋಟರ್ ಸ್ಲಿಪ್ ನ್ನು ಮನೆ ಮನೆಗೆ ವಿತರಿಸಲು ಬಿಎಲ್ಓಗಳು  ಆರಂಭಿಸಿದ್ದು, ಮೇ 3 ರೊಳಗೆ ಎಲ್ಲರ ಮನೆಗೂ ವೋಟರ್ ಸ್ಲಿಪ್ ತಲುಪಲಿದೆ. ವೋಟರ್ ಸ್ಲಿಪ್ ಸಿಗದಿದ್ದರೆ ಸಂಬಂಧಪಟ್ಟ ಬಿಎಲ್ಓಗಳನ್ನುಅರ್ಹಮತದಾರರು ತಕ್ಷಣವೇ ಸಂಪರ್ಕಿಸಬಹುದಾಗಿದೆ ಎಂದು  ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

Daily report on voilation of Model Code of Conduct...

please click here

Tuesday, April 30, 2013

ಅಕ್ರಮ ಹಣ ವಶ

ಮಂಗಳೂರು, ಏಪ್ರಿಲ್.30: ಮೇ5 ರ ಚುನಾವಣಾ ದಿನಾಂಕ ಹತ್ತಿರವಾಗುತ್ತಿದ್ದಂತೆ  ಕಾನೂನು ಬಾಹಿರ ಚಟುವಟಿಕೆಗಳ ಮೇಲೆ ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತ ನಿರಂತರವಾಗಿ ಕಣ್ಣಿರಿಸಿದೆ. ಸೆಕ್ಟರ್ ಮ್ಯಾಜಿಸ್ಟ್ರೇಟ್ ಮತ್ತು ಪೋಲಿಸ್ ಇಲಾಖೆಗೆ ಸಿಕ್ಕಿದ ಖಚಿತ ಮಾಹಿತಿ ಮೇರೆಗೆ ನಗರದ ಅತ್ತಾವರ ಕಟ್ಟೆಯ ಗೋಲ್ಡನ್ ಕ್ಯಾಸಲ್  ವಸತಿ ಸಮುಚ್ಚಾಯದಲ್ಲಿನ ಯು.ಎನ್. ಅಬ್ದುಲ್ ರಜಾಕ್ ಅವರ ನಿವಾಸದ ಮೇಲೆ ಸೋಮವಾರ ರಾತ್ರಿ ದಾಳಿ ನಡೆಸಿದ ಅಧಿಕಾರಿಗಳು ಯಾವುದೇ ದಾಖಲೆ ಪತ್ರಗಳಿಲ್ಲದ 63 ಲಕ್ಷ ರೂಪಾಯಿ ನಗದು ಹಣವನ್ನು ವಶಕ್ಕೆ ಪಡೆದಿದ್ದಾರೆ.  ಹೆಚ್ಚಿನ ವಿಚಾರಣೆಗಾಗಿ ಪ್ರಕರಣವನ್ನು ಆದಾಯ ತೆರಿಗೆ ಅಧಿಕಾರಿಗಳಿಗೆ ವರ್ಗಾಯಿಸಲಾಗಿದೆ.

ಮೇ 3ರಂದು ಬಹಿರಂಗ ಪ್ರಚಾರ ಅಂತ್ಯ: ಜಿಲ್ಲಾಧಿಕಾರಿ

ಮಂಗಳೂರು, ಏಪ್ರಿಲ್. 30:ಚುನಾವಣಾ ಪ್ರಚಾರ ತಂತ್ರಗಳ ಮೇಲೆ ಜಿಲ್ಲಾಡಳಿತ ನಿರಂತರವಾಗಿ ಕಣ್ಣಿರಿಸಿದ್ದು ಮೇ 5ರಂದು ಮತದಾನ ನಡೆಯಲಿರುವ ಹಿನ್ನಲೆಯಲ್ಲಿ ಮೇ 3ರಂದು 5ಗಂಟೆಯ ನಂತರ ಎಲ್ಲ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ.
ಮೇ 3ರ ಐದು ಗಂಟೆಯ ನಂತರದೃಶ್ಯ ಮತ್ತು ಮುದ್ರಣ ಮಾದ್ಯಮದ ಮೂಲಕ  ಜಾಹೀರಾತು ಪ್ರಕಟಣೆಯನ್ನು ಕಡ್ಡಾಯವಾಗಿ ನಿಷೇಧಿಸಿದೆ. ಒಪಿನಿಯನ್ ಪೋಲ್ ಮತ್ತು ಎಕ್ಸಿಟ್ ಪೋಲ್ನ ಪ್ರಸಾರ ಹಾಗೂ ವಿಶ್ಲೇಷಣೆಗಳ ಮೇಲೆ ಈ ಅವಧಿಯಲ್ಲಿ ನಿರ್ಬಂಧ ಹೇರಲಾಗಿದೆ. ಅಭ್ಯರ್ಥಿಗಳ ಅಥವಾ ಪಕ್ಷದ ಸಂದರ್ಶನಗಳು ಮತ್ತು ಸುದ್ದಿ ಪ್ರಕಟಣೆಯನ್ನು ಈ ಅವಧಿಯಲ್ಲಿ ಪ್ರಸಾರ ಮಾಡಬಾರದಾಗಿ ಕೋರಲಾಗಿದೆ.
ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಆಯೋಗದ ನಿರ್ದೇಶನದಂತೆ ಜಿಲ್ಲಾ ಚುನಾವಣಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದು ಯಾವುದೇ ಸಮೀಕ್ಷೆಗಳನ್ನು ಪ್ರಕಟಿಸಲು ಅವಕಾಶ ಇಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ  ಹರ್ಷಗುಪ್ತ ಅವರು ಸ್ಪಷ್ಟ ಪಡಿಸಿದ್ದಾರೆ.ಮುದ್ರಣ ಮತ್ತು ದೃಶ್ಯ ಮಾಧ್ಯಮಗಳು ಈ ನಿಟ್ಟಿನಲ್ಲಿ ಜಿಲ್ಲಾಡಳಿತಕ್ಕೆ ಸಂಪೂರ್ಣ ಸಹಕಾರ ನೀಡಬೇಕೆಂದು ಅವರು ಸೂಚಿಸಿದ್ದಾರೆ.

ಮತದಾನ ಪ್ರಕ್ರಿಯೆಯಲ್ಲಿ ಯುವಜನತೆ

ಮಂಗಳೂರು, ಎಪ್ರಿಲ್.30:-ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ದಿನಾಂಕ 5-5-13 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯ ಪ್ರಕ್ರಿಯೆಯನ್ನು ಸೆರೆ ಹಿಡಿಯಲು ಮತ್ತು ಅಂತರ್ಜಾಲದಲ್ಲಿ ಅಳವಡಿಸಲು ಜಿಲ್ಲೆಯ ವಿವಿಧ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳ ಸೇವೆಯನ್ನು ಬಳಸಿಕೊಂಡು ವೆಬ್ ಕಾಸ್ಟಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ.  ಇದನ್ನು ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿನ ಕನಿಷ್ಟ 25 ಮತಗಟ್ಟೆಗಳಲ್ಲಿ ಅಳವಡಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಈ ವ್ಯವಸ್ಥೆಯ ಮೂಲಕ ಮತದಾನದ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ತರುವ ಮತ್ತು ಯುವಜನತೆಯನ್ನು ಮತದಾನದ ವ್ಯವಸ್ಥೆಯಲ್ಲಿ ಆಸಕ್ತಿ ಮೂಡಿಸುವಂತೆ ಮಾಡಲು ಈ ವ್ಯವಸ್ಥೆಯನ್ನು  ಜಿಲ್ಲಾಡಳಿತ ಕೈಗೊಂಡಿರುತ್ತದೆಯೆಂದು ದಕ್ಷಿಣಕನ್ನಡ  ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳು ತಿಳಿಸಿರುತ್ತಾರೆ.
ಮದ್ಯ ಮಾರಾಟ ನಿಷೇಧ:
ರಾಜ್ಯ ಚುನಾವಣಾ ಆಯೋಗವು ವಿಧಾನಸಭಾ ಸಾರ್ವತ್ರಿಕ ಚುನಾವಣೆ 2013 ನ್ನು ಘೋಷಿಸಿದ್ದು,ಇದಕ್ಕೆ ಸಂಬಂಧಿಸಿದಂತೆ ದಕ್ಷಿಣಕನ್ನಡ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಿಗೆ ದಿನಾಂಕ 5-5-13 ರಂದು ಮತದಾನ ಮತ್ತು ದಿನಾಂಕ 8-5-13 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.
     ಆದ್ದರಿಂದ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಹಾಗೂ ದಕ್ಷಿಣಕನ್ನಡ ಜಿಲ್ಲೆಯ ಗಡಿ ಪ್ರದೇಶದಿಂದ 3 ಕಿಲೋಮೀಟರ್ ಪರಿಧಿಯಲ್ಲಿ ದಿನಾಂಕ 3-5-13 ಸಂಜೆ 5.00 ಗಂಟೆಯಿಂದ ದಿನಾಂಕ 5-5-13 ರ ರಾತ್ರಿ 12.00 ಗಂಟೆಯ ವರೆಗೆ ಹಾಗೂ ಮತ ಎಣಿಕೆಯ ಸಲುವಾಗಿ ದಿನಾಂಕ 7-5-13 ರ ರಾತ್ರಿ 12.00 ಗಂಟೆಯಿಂದ 8-5-13 ರ ರಾತ್ರಿ 12.00 ಗಂಟೆಯ ವರೆಗಿನ ಅವಧಿಯನ್ನು ಮದ್ಯ ಮುಕ್ತ ದಿನಗಳೆಂದು (ಡ್ರೈಡೇಸ್) ಘೋಷಿಸಿ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಆದೇಶಿಸಿರುತ್ತಾರೆ.
 ಬೋಗಸ್ ಮತದಾನ ಕಡಿವಾಣಕ್ಕೆ ಕ್ರಮ:
ರಾಜ್ಯ ವಿಧಾಸಬಾ ಚುನಾವಣೆಯಲ್ಲಿ ಜಿಲ್ಲೆಯ ಮತದಾನ ಕೇಂದ್ರಗಳಲ್ಲಿ ಬೋಗಸ್ ಮತದಾನವಾಗುವುದನ್ನು ತಪ್ಪಿಸಲು ದಿನಾಂಕ 05-05-2013ರಂದು ನಡೆಯಲಿರುವ ಚುನಾವನಾ ಮತದಾರರ ಪಟ್ಟಿಯನ್ನು ಬಿ ಎಲ್ ಒ ರವರ ಮೂಲಕ ಪರಿಶೀಲಿಸಿದಾಗ, ಸದ್ರಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿರುವ ಮತದಾರರ ಪೈಕಿ ಸುಮಾರು 37904 ಗೈರು ಮತದಾರರ ಪಟ್ಟಿಯನ್ನು ತಯಾರಿಸಲಾಗಿದೆ.
      ಆದುದರಿಂದ ಬೋಗಸ್ ಮತದಾನವಾಗುದಕ್ಕೆ ಕಡಿವಾಣ ಹಾಕಲು, ಗೈರು ಮತದಾರರ ಪಟ್ಟಿಯನ್ನು ಚುನಾವಣೆಯ ದಿನಾಂಕದಂದು ಮತಗಟ್ಟೆಗಳಿಗೆ ಸರಬರಾಜು ಮಾಡಲಾಗುವುದು. ಹಾಗೂ ಗೈರು ಮತದಾರರ ಪಟ್ಟಿಯಲ್ಲಿರುವ ಮತದಾರರನ್ನು ಸರಿಯಾಗಿ ತನಿಖೆ ನಡೆಸಿ, ಅವರಿಗೆ ಮತದಾನದ ಹಕ್ಕು ನೀಡುವ ಅಥವಾ ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ಎಲ್ಲಾ ಅಧ್ಯಕ್ಷಾಧಿಕಾರಿಗಳಿಗೆ ಸೂಕ್ತ ತರಬೇತಿಯನ್ನು ನೀಡಲಾಗಿದೆ ಎಂದು ಹರ್ಷಗುಪ್ತ ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ,ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಇವರು ತಿಳಿಸಿದ್ದಾರೆ.
       ಗೈರು ಮತದಾರರ ತಾಲ್ಲೂಕುವಾರು ವಿವರ ಇಂತಿದೆ; ಬೆಳ್ತಂಗಡಿ 4259, ಮೂಡಬಿದ್ರಿ 5255, ಮಂಗಳೂರುನಗರ ಉತ್ತರ 4775, ಮಂಗಳೂರು ನಗರ ದಕ್ಷಿಣ 10724, ಮಂಗಳೂರು 4959, ಬಂಟವಾಳ 3195, ಪುತ್ತೂರು 1981 ಹಾಗೂ ಸುಳ್ಯ 2756.   
 

ಮತದಾರರ ಜಾಗೃತಿ ಆಂದೋಲನ ಜನ ಸಾಮಾನ್ಯರ ಶಕ್ತಿ - ಮತದಾನದ ಹಕ್ಕು:
ಅಪ್ನಾದೇಶ್ ಮಾದರಿ ಗ್ರಾಮಾಭಿವೃದ್ಧಿ ಆಂದೋಲನ, ಜನ ಶಿಕ್ಷಣ ಟ್ರಸ್ಟ್, ಗ್ರಾಮ ವಿಕಾಸ ಕೇಂದ್ರ ಹಾಗೂ ಗ್ರಾಮ ಪಂಚಾಯತ್ಗಳ ಸಹಭಾಗಿತ್ವದಲ್ಲಿ ವಿವಿದೆಡೆ ನಡೆದ ಮತದಾರರ ಜಾಗೃತಿ ಅಭಿಯಾನದಲ್ಲಿ ಶೀನಶೆಟ್ಟಿ, ನರೇಗಾ ಒಂಬುಡ್ಸ್ಮನ್ರವರು ಭಾಗವಹಿಸಿ ಮಾಹಿತಿ ನೀಡಿದರು.
ಬಂಟ್ಟಾಳ ತಾಲೂಕಿನ ನರಿಂಗಾನ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೊಟ್ಟೊಳಿಕೆ ಆದಿವಾಸಿ ಪ್ರದೇಶ ಮತ್ತು ಜನತಾ ನಿವೇಶನ ವ್ಯಾಪ್ತಿಯಲ್ಲಿ ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಆದಿವಾಸಿ ಜನರ ಜಾಗೃತಿ ಜಾಥ ಇತ್ತೀಚೆಗೆ ನಡೆಯಿತು. ನರೇಗಾ ಒಂಬುಡ್ಸ್ಮನ್ ಶೀನ ಶೆಟ್ಟಿ ಮತದಾನದ ಮಹತ್ವ ಮತ್ತು ಅಗತ್ಯದ ಬಗ್ಗೆ ಮಾಹಿತಿ ನೀಡಿದರು. ಜನ ಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ, ಸಂಯೋಜಕಿ ಲಾವಣ್ಯ ಹಾಗೂ ಆದಿವಾಸಿ ಮುಖಂಡರಾದ ಬೇಬಿ, ಬಾಬು, ಮುದರ, ಶೇಖರ ಮತ್ತಿತರರು ಭಾಗವಹಿಸಿದ್ದರು.
    ಬಂಟ್ಟಾಳ ತಾಲೂಕಿನ ಕನ್ಯಾನ ಗ್ರಾಮ ಪಂಚಾಯತ್ ವ್ಯಾಪ್ತಿಯ ಜನತಾ ನಿವೇಶನದಲ್ಲಿ ಮತದಾರರ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಆದಿವಾಸಿ ಮುಖಂಡರಾರ ಸುಂದರಿ, ಅಂಗಾರೆ, ಪಂಚಾಯತ್ ಸಿಬ್ಬಂದಿ ಪಾರ್ವತಿ ಮೊದಲಾದವರು ಭಾಗವಹಿಸಿ ಸಹಕರಿಸಿದ್ದರು.
ಮಂಗಳೂರು ತಾಲೂಕಿನ ಮುನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಹಿಳಾ ಜಾಗೃತಿ ವೇದಿಕೆಯ ಮಾಸಿಕ ಪ್ರೇರಣಾ ಶಿಬಿರದಲ್ಲಿ ಮತದಾನದ ಮಹತ್ವದ ಬಗ್ಗೆ ಮಾಹಿತಿ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಜನ ಶಿಕ್ಷಣ ಟ್ರಸ್ಟ್ ಸಂಯೋಜಕಿ ಚಂಚಲ, ಮಹಿಳಾ ಜಾಗೃತಿ ವೇದಿಕೆಯ ಮುಖಂಡರಾದ ಶಶಿಕಲ, ಮಾಲತಿ, ಯಮುನ, ಪಂಪಾವತಿ, ತುಳಸಿ ಮೊದಲಾದವರು ಮಾಹಿತಿ/ಜಾಗೃತಿ ಕಾರ್ಯಕ್ರಮಕ್ಕೆ ಸಹಕರಿಸಿದ್ದರೆಂದು ಜನಶಿಕ್ಷಣ ಟ್ರಸ್ಟ್ನ     ನಿರ್ದೇಶಕರುತಿಳಿಸಿರುತ್ತಾರೆ.
                                       

Daily report on Voilation of Model Code of Conduct

please click here

Monday, April 29, 2013

1077ಗೆ ಎಲ್ಲಾ ದೂರವಾಣಿಗಳಿಂದಲೂ ಕರೆಗೆ ಅವಕಾಶ


ಮತದಾನಕ್ಕೆ ಮತದಾರರ ಪಟ್ಟಿಯಲ್ಲಿ ಹೆಸರು ಕಡ್ಡಾಯ-ಹರ್ಷಗುಪ್ತಾ

ಮಂಗಳೂರು, ಎಪ್ರಿಲ್. 29:-ಮೇ 5ರ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರಿದ್ದರೆ ಮಾತ್ರ ಮತದಾನಕ್ಕೆ ಅವಕಾಶ ಎಂದು ದಕ್ಷಿಣಕನ್ನಡ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ  ಹರ್ಷಗುಪ್ತಾ ಅವರು ಸ್ಪಷ್ಟಪಡಿಸಿದ್ದಾರೆ.
        ಅವರು ಇಂದು ಜಿಲ್ಲೆಯ ವಿಧಾನಸಭಾ ಚುನಾವಣೆಯಲ್ಲಿ ಕಾರ್ಯ ನಿರ್ವಹಿಸಲಿರುವ ಚುನಾವಣಾ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದ್ದು, ಎಲ್ಲಾ ತರಬೇತಿ ಕೇಂದ್ರಗಳಿಗೆ ಖುದ್ದು ತೆರಳಲು ಸಾಧ್ಯವಾಗದ ಕಾರಣ ವಿವಿಧ ತರಬೇತಿಕೇಂದ್ರಗಳ ಚುನಾವಣಾ ಸಿಬ್ಬಂದಿಗಳನ್ನು ತಮ್ಮ ಕಚೇರಿಯಿಂದಲೇ ವಯರ್ ಲೆಸ್ ಮೂಲಕ ಏಕಕಾಲಕ್ಕೆ ಸಂಪರ್ಕ ಪಡೆದು ಮಾತನಾಡಿದರು.
ಫೋಟೋ ಇರುವ ಎಪಿಕ್ ಕಾರ್ಡ್  ಇದ್ದು,ಅಂತಹವರ ಹೆಸರು ಮತದಾರರ ಪಟ್ಟಿಯಲ್ಲಿ  ಇಲ್ಲದಿದ್ದರೆ ಅವರಿಗೆ ಮತದಾನಕ್ಕೆ ಅವಕಾಶ ನೀಡಬಾರದು.ಮತದಾರರ ಪಟ್ಟಿಯಲ್ಲಿ ಹೆಸರಿದ್ದು,23 ಗುರುತಿನ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಮತಗಟ್ಟೆ ಅಧಿಕಾರಿಗಳಿಗೆ ಸಲ್ಲಿಸದ್ದಿದ್ದಲ್ಲಿ, ಅಂತಹವರಿಗೂ ಮತದಾನಕ್ಕೆ ಅವಕಾಶ ನೀಡದಿರಲು ಜಿಲ್ಲಾ ಚುನಾವಣಾಧಿಕಾರಿಗಳು ಸೂಚಿಸಿದ್ದಾರೆ.
ಚುನಾವಣೆ ಕಾರ್ಯಕ್ಕೆ ನಿಯೋಜಿಸಿರುವ ಎಲ್ಲಾ ಸಿಬ್ಬಂದಿಗಳು ನಿರ್ಭೀತಿಯಿಂದ ನ್ಯಾಯಯುತ,ನಿಷ್ಪಕ್ಷಪಾತವಾಗಿ ಹಾಗೂ ಇತರರಿಗೆ ಮಾದರಿಯಾಗುವಂತೆ ತಮ್ಮ ಚುನಾವಣಾ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸುವಂತೆ ಕರೆ ನೀಡುವ ಮೂಲಕ ಸಿಬ್ಬಂದಿಗಳಲ್ಲಿ ಹುರುಪು ವಿಶ್ವಾಸ ತುಂಬಿದರು.ಜಿಲ್ಲಾಡಳಿತ ಚುನಾವಣಾ ಸಿಬ್ಬಂದಿಗಳ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ಸನ್ನದ್ಧವಾಗಿದೆ.ಆದಕಾರಣ ಸಿಬ್ಬಂದಿಗಳು ಚುನಾವಣೆ ಕಾರ್ಯಕ್ಕೆ ಸಂಬಂಧಿಸಿದ ತಮ್ಮ ದೂರುಗಳನ್ನು ದೂರವಾಣಿ ಸಂಖ್ಯೆ 1077 ಕ್ಕೆ ಕರೆಮಾಡಿ ಸಲ್ಲಿಸಬಹುದಾಗಿದೆ.  ಪೋಲೀಸ್ ,ಅರೆಸೇನಾ ಪಡೆ ಇನ್ನಿತರೆ ಸಿಬ್ಬಂದಿಯನ್ನು ರಕ್ಷಣಾ ಕಾರ್ಯಕ್ಕೆ ನಿಯೋಜಿಸಿರುವ ಕಾರಣ ಕಾನೂನು ಸುವ್ಯವಸ್ಥೆ ಸಮಸ್ಯೆ ತಲೆದೋರುವುದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಚುನಾವಣೆ ಕಾರ್ಯದಲ್ಲಿ  ಯಾವುದೇ ಚುನಾವಣಾ ನೀತಿ ಉಲ್ಲಂಘನೆಯಂತಹ ಘಟನೆಗಳು ಕಂಡುಬಂದಲ್ಲಿ ಕೂಡಲೇ 1077 ಕ್ಕೆ ಪೋನ್ ಮೂಲಕ ತಿಳಿಸಲು ಸೂಚಿಸಿದ್ದಲ್ಲದೆ,ಸಿಬ್ಬಂದಿಗಳು ಯಾವ ದಾಕ್ಷಿಣ್ಯಕ್ಕೂ ಒಳಗಾಗದೇ ಆತ್ಮವಿಶ್ವಾಸದಿಂದ ಕಾರ್ಯಾಚರಿಸುವಂತೆ ಕರೆ ನೀಡಿದರು. ಚುನಾವಣಾ ಸಿಬ್ಬಂದಿಗಳಿಗೆ ಮತಗಟ್ಟೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ,ಕುರ್ಚಿಗಳ ವ್ಯವಸ್ಥೆ ಕಲ್ಪಿಸುವಂತೆ ಸಂಬಂಧಿಸಿದ ಕ್ಷೇತ್ರದ ಚುನಾವಣಾಧಿಕಾರಿಗಳಿಗೆ ಸೂಚಿಸಿದ ಜಿಲ್ಲಾ ಚುನಾವಣಾಧಿಕಾರಿಗಳು,ಮೇ 4 ಹಾಗೂ ಮೇ 5 ರಂದು ಚುನಾವಣಾ ಸಿಬಂದಿಗಳು ಆವಶ್ಯಕತೆ ಇದ್ದರೆ ಊಟ ,ತಿಂಡಿ,ಕಾಫಿ ವ್ಯವಸ್ಥೆ ಮುಂಚಿತವಾಗಿ ಆಯಾ ಮತಗಟ್ಟೆ ವ್ಯಾಪ್ತಿಯ ಕಂದಾಯ ನಿರೀಕ್ಷಕರಿಗೆ ತಿಳಿಸಿದಲ್ಲಿ ವ್ಯವಸ್ಥೆಯನ್ನು ಮಾಡಲಿದ್ದು ಇದರ ವೆಚ್ಚವನ್ನು ಸಿಬ್ಬಂದಿಯ ಚುನಾವನಾ ಕಾರ್ಯ ಗೌರವಧನದಲ್ಲಿ ಕಡಿತಗೊಳಿಸಲಾಗುವುದೆಂದರು.ಚುನಾವಣಾ ಸಿಬ್ಬಂದಿ ಮಸ್ಟರಿಂಗ್ ದಿನ ಮೇ 4 ರಂದು ಬೆಳಿಗ್ಗೆ 6.30 ಗಂಟೆಗೆ ಸರಿಯಾಗಿ ಮಸ್ಟರಿಂಗ್ ಸ್ಥಳದಲ್ಲಿ ಕಡ್ಡಾಯವಾಗಿ ಹಾಜರಿರಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ಅಂಧ ಮತ್ತು ಅಶಕ್ತ ಮತದಾರರ ಸಹಾಯಕ್ಕಾಗಿ ಜೊತೆಯಲ್ಲಿ ಒಬ್ಬರು ಸಹಾಯಕರನ್ನು ಮತಗಟ್ಟೆಗೆ ಕರೆದೊಯ್ಯಲು ಅವಕಾಶವಿದೆ ಎಂದರು.
ಸಿಬ್ಬಂದಿಗಳಿಗೆ ಮತಗಟ್ಟೆಗಳಲ್ಲಿ ಏನಾದರೂ ಸಣ್ಣಪುಟ್ಟ ಲೋಪಗಳಿದ್ದರೂ ಅವುಗಳನ್ನು ನಿವಾರಿಸಿಕೊಂಡು ಚುನಾವಣಾ ಕಾರ್ಯವನ್ನು ಒಮ್ಮತದಿಂದ ಸಮರ್ಪಕವಾಗಿ ನಿರ್ವಹಿಸುವಂತೆ ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾ ಚುನಾವಣಾಧಿಕಾರಿಗಳ ಜೊತೆಯಲ್ಲಿ ಮಂಗಳೂರು ಮಹಾನಗರಪಾಲಿಕೆ ಆಯುಕ್ತ ಡಾ. ಹರೀಶ್ ಕುಮಾರ್ ಉಪಸ್ಥಿತರಿದ್ದರು.   

Daily report on voilation of Model Code of Conductp

please click here

Daily report on voilation of Model Code of Conduct.p

please click here

Sunday, April 28, 2013

ಪಣಂಬೂರು ಕಡಲಕಿನಾರೆಯಲ್ಲಿ ಮತದಾನ ಜಾಗೃತಿ

ಮಂಗಳೂರು, ಎಪ್ರಿಲ್. 28:- ಎಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಪ್ರಜಾಪ್ರಭುತ್ವ ತತ್ವ ಸಿದ್ದಾಂತಗಳ ಸಮರ್ಪಕ ಅನುಷ್ಟಾನಕ್ಕೆ ನಾಂದಿಯಾಗಬೇಕೆಂಬ ಭಾರತ ಚುನಾವಣಾ ಆಶಯದಂತೆ ಸ್ವೀಪ್ ಕಾರ್ಯಕ್ರಮದಡಿ ಇಂದು ಮಂಗಳೂರಿನ ಪಣಂಬೂರು ಕಡಲಕಿನಾರೆಯಲ್ಲಿ ಜಿಲ್ಲಾಡಳಿತ ಮತ್ತು ಬೀಚ್ ಡೆವಲಪ್ಮೆಂಟ್ ಇವರ ಸಹಯೋಗದಲ್ಲಿ ನಡೆದ ಗಾಳಿಪಟವನ್ನು ಹಾರಿಸುವ ಮುಖಾಂತರ ಮತದಾನ ಜಾಗೃತಿಗೆ ಚಾಲನೆ ನೀಡಿದರು.
      ಈ ಕಾರ್ಯ ಕ್ರಮ ದಲ್ಲಿ ಭಾಗ ವಹಿ ಸಿದ್ದ ಜಿಲ್ಲಾ ಚುನಾ ವಣಾ ಧಿಕಾರಿ ಹಾಗೂ ಜಿಲ್ಲಾ ದಂಡಾ ಧಿಕಾ ರಿಗ ಳಾದ ಹರ್ಷ ಗುಪ್ತ ಅವರು ಮಾತ ನಾಡಿ, ಪ್ರತಿ ಯೊಬ್ಬರೂ ಮತದಾನ ಮಾಡುವ ಮೂಲಕ ಉತ್ತಮ ಸರ್ಕಾರ ರಚನೆ ಯಂತಹ ಪ್ರಜಾಸತ್ತಾತ್ಮಕ ಕಾರ್ಯದಲ್ಲಿ ಪಾಲ್ಗೊಳ್ಳಬೇಕೆಂದು  ಜನತೆಗೆ ಕರೆ ನೀಡಿದ್ದಾರೆ.
     ಮಕ್ಕಳ ಮೂಲಕ ಮತ ದಾನದ ಅರಿವು ಮೂಡಿ ಸುವ ವಿನೂ ತನ ಕಾರ್ಯ ಕ್ರಮ ದಲ್ಲಿ ಮಕ್ಕ ಳಿಂದ ಪೋಷ ಕರಿಗೆ ಅರಿವು ಮೂಡಿ ಸುವ ಪ್ರಯ ತ್ನವೂ ನಡೆ ಯಿತು. ಮೇ ಐದರ ಮತ ದಾನ ಮಿಸ್ ಮಾಡ ಬೇಡಿ ಎಂದು ಮಕ್ಕಳು ಘೋಷಣೆ ಗಳನ್ನು  ಕೂಗಿ ದರು. ತಮ್ಮ ಹೆತ್ತವ ರನ್ನು ಮತ ದಾನಕ್ಕೆ ಅಂದು ಕಳು ಹಿಸುವ ಪ್ರತಿಜ್ಞೆ ಯನ್ನು ಮಾಡಿದರು. ಮಕ್ಕಳಿಗಾಗಿ ಈ ಸಂಧರ್ಭದಲ್ಲಿ ವಿವಿಧ ಆಟೋಟಗಳನ್ನು ಏರ್ಪಡಿಸಿ  ಬಹುಮಾನಗಳನ್ನು,  ಗಣ್ಯರಿಂದ ವಿತರಿಸುವ ಕಾರ್ಯಕ್ರಮವೂ ನಡೆಯಿತು. ಕಾರ್ಯಕ್ರಮದಲ್ಲಿ ಸಿಡಿಪಿಒ  ಶ್ಯಾಮಲ, ಎ ಎಸ್ ಗೋಪಾಲಕೃಷ್ಣ ಹಾಗೂ ಇತರ ಅಧಿಕಾರಿಗಳು ಪಾಲ್ಗೊಂಡಿದ್ದರು. ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ||ಕೆ.ಎನ್.ವಿಜಯಪ್ರಕಾಶ್, ಮಂಗಳೂರು ಮಹಾನಗರಪಾಲಿಕೆ ಆಯುಕ್ತರಾದ ಡಾ||ಹರೀಶ್ ಕುಮಾರ್ ಮುಂತಾದವರು ಹಾಜರಿದ್ದರು. ಮದು ಮತ್ತು ವಿಸ್ಮಯ ವಿನಾಯಕ್ ಅವರು ಮಕ್ಕಳಿಗೆ ಆಟೋಟಗಳನ್ನು ಹಾಗೂ ಪ್ರಾಣಿ ಪಕ್ಷಿಗಳ ಅನುಕರಣೆ ಮುಂತಾದ ಮನರಂಜನೆ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಪ್ರಕಟಣೆ


ಚುನಾವಣಾ ದೂರು ದಾಖಲಿಸಲು ಮತ್ತೊಂದು ದೂರವಾಣಿ ಸಂಖ್ಯೆ


Daily report on voilation of Model Code of Conductp

lease click here

Daily report on voilation of Model Code of Conduct...p

please click here

Saturday, April 27, 2013

ಶಿಸ್ತುಬದ್ಧ ಆಕರ್ಷಕ ಮತದಾರರ ಜಾಗೃತಿ ಜಾಥಾ

ಮಂಗಳೂರು, ಎಪ್ರಿಲ್. 27:-ಮತದಾರರಲ್ಲಿ ಅವರ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ,ತಾಲೂಕು ಮತ್ತು ಗ್ರಾಮ ಪಂಚಾಯತ್ ಗಳು ಬೆಳ್ ತಂಗಡಿ ತಾಲೂ ಕಿನಾ ದ್ಯಂತ ಹಮ್ಮಿ ಕೊಂಡಿದ್ದ ಮತ ದಾರರ ಜಾಥಾ ಸಮಾ ರೋಪವು ನೂರಾರು ವಾಹನ ಗಳಲ್ಲಿ ಅಧಿ ಕಾರಿ ಗಳು ಸಾರ್ವ ಜನಿಕರು ಹೆಚ್ಚಿನ ಉತ್ಸಾಹ ದಿಂದ ಪಾಲ್ಗೊಂ ಡಿದ್ದರು. ಬೆಳ್ತಂ ಗಡಿ ಪೇಟೆ ಯಿಂದ ಕಕ್ಕಿಂಜೆ ವರೆಗೆ ನಡೆದ ಮತ ದಾರರ ಜಾಥಾ ಮೆರ ವಣಿಗೆ ಅತ್ಯಾ ಕರ್ಷಕ ವಾಗಿ ಜನ ರನ್ನು ರಂಜಿ ಸಿತು.
ಜಾಥಾ ಮೆರ ವಣಿಗೆ ನಂತರ ಸಮಾ ರೋಪ ಭಾಷಣ ಮಾಡಿದ ಜಿಲ್ಲಾ ಪಂಚಾ ಯತ್ ಮುಖ್ಯ ಕಾರ್ಯ ನಿರ್ವ ಹಣಾ ಧಿಕಾರಿ ಡಾ .ಕೆ.ಎನ್.ವಿಜಯ ಪ್ರಕಾಶ್ ಅವರು ಮಾತ ನಾಡಿ ಪ್ರತಿ ಯೊಬ್ಬ ನಾಗರೀ ಕನೂ ತನ್ನ ಮತ ದಾನದ ಹಕ್ಕನ್ನು ಚಲಾ ಯಿಸಿ ಪರಿಣಾ ಮಕಾರಿ ಆಡ ಳಿತ ನೀಡುವ ಮೂಲಕ ಸರ್ಕಾರ ರಚನೆ ಯಲ್ಲಿ ಭಾಗ ವಹಿಸಿ ದೇಶದ ಅಭಿ ವೃದ್ಧಿಗೆ ನಾಂದಿ ಹಾಡ ಬೇಕೆಂದು ಕರೆ ಯಿತ್ತರು.
ತಹಶೀಲ್ದಾರ್ ಶ್ರೀನಿವಾಸ್,ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನರೇಂದ್ರ,ಕ್ಷೇತ್ರ ಶಿಕ್ಷಣಾಧಿಕಾರಿ ಸುಮಂಗಲಾ.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪುಟ್ಟಸ್ವಾಮಿ,ತಾಲೂಕು ಆರೋಗ್ಯಾಧಿಕಾರಿ ಡಾ.ಕಲಾಮಧು ವೇದಿಕೆಯಲ್ಲಿದ್ದರು.
ಲಾಯಿಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ಸ್ವಾಗತಿಸಿದರು. ತಾಲೂಕು ಪಂಚಾಯತ್ ಸಂಯೋಜಕ ಜಯಾನಂದ ಲಾಯಿಲಾ ಕಾರ್ಯಕ್ರಮ ನಿರ್ವಹಿಸಿದರು.  ಅಧಿಕಾರಿಗಳಾದ ಡಾ.ಸುಧಾಕರ ಶೆಟ್ಟಿ,ಪ್ರವೀಣ್ ಕುಮಾರ್ ಶೆಟ್ಟಿ ,ಸುಭಾಶ್ಚಂದ್ರ ಹಾಗೂ ವಿವಿಧ ಇಲಾಖೆಗಳ ಮುಖ್ಯಸ್ಥರು ಜಾಥಾದಲ್ಲಿ ಪಾಲ್ಗೊಂಡರು.

Friday, April 26, 2013

3 ಲಕ್ಷ ಮಕ್ಕಳು ಮತದಾನ ಜಾಗೃತಿ ಕಾರ್ಯದಲ್ಲಿ

ಮಂಗಳೂರು, ಎಪ್ರಿಲ್. 26:-ಮತದಾರರ ಕ್ರಮಬದ್ಧ ಶಿಕ್ಷಣ ಹಾಗೂ ಮತದಾರರು ಚುನಾವಣೆಯಲ್ಲಿ ಭಾಗವಹಿಸುವ ಕಾರ್ಯಕ್ರಮ ಸ್ವೀಪ್(Systamatic voters education and electorals participation- sveep) ಯೋಜನೆಯಡಿ ದಕ್ಷಿಣಕನ್ನಡ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯು ಸಮುದಾಯದತ್ತ ಶಾಲೆ ಯೋಜನೆಯಡಿ ಎಲ್ಲಾ ಶಾಲೆಗಳಲ್ಲಿ 3 ಲಕ್ಷ ಮಕ್ಕಳಿಂದ ಮತದಾರರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತೆಂದು ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಸ್ವೀಪ್ ಯೋಜನೆಯ ಅಧ್ಯಕ್ಷರಾದ ಡಾ.ಕೆ.ವಿ.ವಿಜಯಪ್ರಕಾಶ್ ಅವರು ತಿಳಿಸಿದ್ದಾರೆ.
           ಅವರು ಇಂದು ತಮ್ಮ ಕಚೇರಿಯ ಮಿನಿ ಸಭಾಂಗಣದಲ್ಲಿ ಸ್ವೀಪ್ ಅನುಷ್ಠಾನದ ಪ್ರಗತಿ ಪರಿಶೀಲನೆ ನಡೆಸಿದರು.
        ನಿರಂತರವಾಗಿ ಕಾರ್ಯ ನಿರ್ವಹಿಸುವ ಕಾರ್ಖಾನೆಗಳಾದ ಎಂಆರ್ ಪಿ ಎಲ್ ,ಎಂಸಿಎಫ್,ಇನ್ನಿತರೆ ಕಾರ್ಖಾನೆಗಳ ಕಾರ್ಮಿಕರಿಗೆ ಮೇ 5 ರ ಚುನಾವಣೆಯಲ್ಲಿ ಮತ ಚಲಾಯಿಸಲು ಅನುಮತಿ ನೀಡಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ 34 ಕಾರ್ಖಾನೆಗಳ 2161 ಕಾರ್ಮಿಕರಿಗೆ ಮತದಾನದ  ಕುರಿತು ಜಾಗೃತಿ ಮೂಡಿಸಲಾಗಿದೆ. 998 ಮಂದಿ ಮತದಾನ ಮಾಡುವ ವಾಗ್ದಾನ ಕೈಗೊಂಡಿದ್ದಾರೆ ಎಂದು ಫ್ಯಾಕ್ಟರೀಸ್ ಆಂಡ್ ಬಾಯ್ಲರ್ಸ್ ಇಲಾಖೆ ಅಧಿಕಾರಿ ಅಧ್ಯಕ್ಷರಿಗೆ ತಿಳಿಸಿದರು.
     ಕೃಷಿ, ತೋಟಗಾರಿಕೆ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕೆಎಂಎಫ್,ಆರೋಗ್ಯ ಮುಂತಾದ ಇಲಾಖೆಗಳು  ಸಹ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಸ್ವೀಪ್ ಕಾರ್ಯಕ್ರಮ ಮುಖಾಂತರ ಮತದಾರರ ಜಾಗೃತಿ ಉಂಟುಮಾಡಿದೆ ಎಂದು ತಿಳಿಸಿದರು.
         ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸ್ವೀಪ್ ಕಾರ್ಯಕ್ರಮ ಅತ್ಯುತ್ತಮವಾಗಿ ಅನುಷ್ಠಾನವಾಗುತ್ತಿರುವ ಬಗ್ಗೆ ಭಾರತ ಚುನಾವಣಾ ಆಯುಕ್ತರು ಪ್ರಶಂಸೆ ಮಾಡಿದ್ದಾರೆ. ಆದ್ದರಿಂದ  ಈ ಬಾರಿ ಜಿಲ್ಲೆಯಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ಮತದಾನ ಆಗುವಂತೆ ಎಲ್ಲರೂ ಕಾಯರ್ೋನ್ಮುಖರಾಗಲು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ತಿಳಿಸಿದ್ದಾರೆ.
        ಸಭೆಯಲ್ಲಿ ಮಹಾನಗರಪಾಲಿಕೆಯ ಆಯುಕ್ತರಾದ ಡಾ. ಹರೀಶ್ ಕುಮಾರ್,ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ  ಮಲ್ಲಿಕಾರ್ಜುನ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಮೋಸೆಸ್ ಜಯಶೇಖರ್ ಮುಂತಾದವರು ಹಾಜರಿದ್ದರು.

ಶಿಸ್ತುಬದ್ಧ ಆಕರ್ಷಕ ಮತದಾರರ ಜಾಗೃತಿ ಜಾಥಾ

ಮಂಗಳೂರು, ಎಪ್ರಿಲ್. 26:-ಮತದಾರರಲ್ಲಿ ಅವರ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ,ತಾಲೂಕು ಮತ್ತು ಗ್ರಾಮ ಪಂಚಾಯತ್ ಗಳು ಬೆಳ್ತಂಗಡಿ ತಾಲೂಕಿನಾದ್ಯಂತ ಹಮ್ಮಿಕೊಂಡಿದ್ದ ಮತದಾರರ ಜಾಥಾ ಸಮಾರೋಪವು ನೂರಾರು ವಾಹನಗಳಲ್ಲಿ ಅಧಿಕಾರಿಗಳು ಸಾರ್ವಜನಿಕರು ಹೆಚ್ಚಿನ ಉತ್ಸಾಹದಿಂದ ಪಾಲ್ಗೊಂಡಿದ್ದರು. ಬೆಳ್ತಂಗಡಿ ಪೇಟೆಯಿಂದ ಕಕ್ಕಿಂಜೆ ವರೆಗೆ ನಡೆದ ಮತದಾರರ ಜಾಥಾ ಮೆರವಣಿಗೆ ಅತ್ಯಾಕರ್ಷಕವಾಗಿ ಜನರನ್ನು ರಂಜಿಸಿತು.
ಜಾಥಾ ಮೆರವಣಿಗೆ ನಂತರ ಸಮಾರೋಪ ಭಾಷಣ ಮಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ . ಕೆ.ಎನ್.ವಿಜಯಪ್ರಕಾಶ್ ಅವರು ಮಾತನಾಡಿ ಪ್ರತಿಯೊಬ್ಬ ನಾಗರೀಕನೂ ತನ್ನ ಮತದಾನದ ಹಕ್ಕನ್ನು ಚಲಾಯಿಸಿ ಪರಿಣಾಮಕಾರಿ ಆಡಳಿತ ನೀಡುವ ಮೂಲಕ ಸರ್ಕಾರ ರಚನೆಯಲ್ಲಿ ಭಾಗವಹಿಸಿ ದೇಶದ ಅಭಿವೃದ್ಧಿಗೆ ನಾಂದಿ ಹಾಡಬೇಕೆಂದು ಕರೆಯಿತ್ತರು.
ತಹಶೀಲ್ದಾರ್ ಶ್ರೀನಿವಾಸ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನರೇಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ಸುಮಂಗಲಾ.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪುಟ್ಟಸ್ವಾಮಿ,ತಾಲೂಕು ಆರೋಗ್ಯಾಧಿಕಾರಿ ಡಾ.ಕಲಾಮಧು ವೇದಿಕೆಯಲ್ಲಿದ್ದರು.
ಲಾಯಿಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ಸ್ವಾಗತಿಸಿದರು. ತಾಲೂಕು ಪಂಚಾಯತ್ ಸಂಯೋಜಕ ಜಯಾನಂದ ಲಾಯಿಲಾ ಕಾರ್ಯಕ್ರಮ ನಿರ್ವಹಿಸಿದರು.  ಅಧಿಕಾರಿಗಳಾದ ಡಾ.ಸುಧಾಕರ ಶೆಟ್ಟಿ,ಪ್ರವೀಣ್ ಕುಮಾರ್ ಶೆಟ್ಟಿ, ಸುಭಾಶ್ಚಂದ್ರ ಹಾಗೂ ವಿವಿಧ ಇಲಾಖೆಗಳ ಮುಖ್ಯಸ್ಥರು ಜಾಥಾದಲ್ಲಿ ಪಾಲ್ಗೊಂಡರು.

ಚುನಾವಣಾ ದೂರುಗಳನ್ನು ಎಸ್.ಎಂ.ಎಸ್ ಮಾಡಿ


ಮಂಗಳೂರು, ಎಪ್ರಿಲ್. 26:-ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ದೂರುಗಳನ್ನು ಸಾರ್ವಜನಿಕರು,ಅಭ್ಯರ್ಥಿಗಳು ತಮ್ಮ ಮೊಬೈಲ್ ಮೂಲಕ 8123666266 ಸಂಖ್ಯೆಗೆ ಎಸ್ಎಂಎಸ್ ಮಾಡುವ ಮೂಲಕ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ದೂರುಗಳನ್ನು ಎಸ್ಎಂಎಸ್ ಮಾಡಬಹುದಾಗಿದೆ.

Daily report on voilation of Model Code of Conduct.

please click here

Thursday, April 25, 2013

ಶಾಂತ ಮತ್ತು ನ್ಯಾಯಯುತ ಚುನಾವಣೆಗೆ ಜಿಲ್ಲಾಡಳಿತ ಸಜ್ಜು: ಜಿಲ್ಲಾಧಿಕಾರಿ

ಮಂಗಳೂರು, ಏಪ್ರಿಲ್. 25.: ರಾಜ್ಯ ವಿಧಾನಸಭಾ ಚುನಾವಣೆ -2013 ನ್ನು ನಿಷ್ಪಕ್ಷಪಾತ ಹಾಗೂ ನ್ಯಾಯಯುತವಾಗಿ ನಡೆಸಲು ಸಮಗ್ರ ಜಿಲ್ಲಾಡಳಿತ ಕಾರ್ಯೋನ್ಮುಖವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹರ್ಷಗುಪ್ತ ಅವರು ಹೇಳಿದರು.
                 ಇಂದು ಮಂಗಳೂರು ಆಕಾಶವಾಣಿಯಲ್ಲಿ ನೇರಫೋನ್ ಇನ್ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಜಿಲ್ಲೆಯಾದ್ಯಂತ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನಿಗಾ ವಹಿಸಲು 2,500 ಅಧಿಕಾರಿಗಳು ಕಾರ್ಯತತ್ಪರರಾಗಿದ್ದಾರೆ.
          ಚುನಾವಣಾ ಕೆಲಸದಲ್ಲಿ ನಿರತವಾಗಿರುವ ಸುಮಾರು 8,500 ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮೊದಲ ಸುತ್ತಿನ ತರಬೇತಿ ನೀಡಲಾಗಿದೆ. ಜನರ ಸಮಸ್ಯೆಗೆ ಸ್ಪಂದಿಸಲು ಹಾಗೂ ಚುನಾವಣೆ ಸಂಬಂಧಿ ಯಾವುದೇ ದೂರುಗಳನ್ನು ಸ್ವೀಕರಿಸಲು ಜಿಲ್ಲಾ ಕಂಟ್ರೋಲ್ ರೂಮ್ 1077 ಸ್ಥಾಪಿಸಲಾಗಿದೆ.
ಮತದಾನದ ಪ್ರಮಾಣದಲ್ಲಿ ಹೆಚ್ಚಳ ದಾಖಲಿಸಲು ಮತದಾರರಲ್ಲಿ ಜಾಗೃತಿ ಮೂಡಿಸಲು ವಿಶೇಷ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಗೌಪ್ಯ ಮತದಾನಕ್ಕೆ ಹಾಗೂ ಯಾವುದೇ ಆಮಿಷಗಳಿಗೆ ಮತ್ತು ಬೆದರಿಕೆಗೆ ಮಣಿದು ಮತದಾನ ಮಾಡದಿರಲು ಮತಗಟ್ಟೆಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಎಲ್ಲದಕ್ಕೂ ಪುರಾವೆ ಬೇಕಿರುವುದಕ್ಕೆ ವಿಡಿಯೊಗ್ರಫಿ ನಡೆಯಲಿದೆ ಎಂದು ಕೇಳುಗಳ ಪ್ರಶ್ನೆಗೆ ಜಿಲ್ಲಾಧಿಕಾರಿಗಳು ಉತ್ತರಿಸಿದರು.
ಬಿಎಲ್ ಒ ಗಳು ವೋಟರ್ ಸ್ಲಿಪ್ ವಿತರಿಸುವಲ್ಲಿ ಯಾವುದೇ ನ್ಯೂನತೆಗಳಿಗೆ ಅವಕಾಶ ನೀಡದಿರಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಒಂದು ವೇಳೆ ಅಕಸ್ಮಾತ್ ಆಗಿ ವಿತರಣೆಯಲ್ಲಿ ತೊಂದರೆಯಾದರೂ ಮತದಾನದಂದು ಬಿಎಲ್ ಒಗಳ ಮತದಾನ ಕೇಂದ್ರದ ಬಳಿ ಇರುವುದರಿಂದ ಅರ್ಹ ಮತದಾರರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಆದರೆ ಮತದಾರರ ಪಟ್ಟಿಯಲ್ಲಿ ಹೆಸರಿರಬೇಕಾದುದು ಕಡ್ಡಾಯ. ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ಮತದಾನಕ್ಕೆ ಅವಕಾಶವಿರುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಕೇಳುಗರ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಿದರು.
ಮತದಾರರು ಮತದಾನ ಕೇಂದ್ರಕ್ಕೆ ತೆರಳಲು ತಮ್ಮ ವಾಹನಗಳನ್ನು ಉಪಯೋಗಿಸಬಹುದು. ಪಕ್ಷಗಳಿಂದ ವಾಹನ ವ್ಯವಸ್ಥೆ ಮಾಡುವುದು ಹಾಗೂ ಮತದಾರರನ್ನು ಮತಗಟ್ಟೆಗೆ ತಲುಪಿಸುವುದು ಅಪರಾಧ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದರು.
ಕನರ್ಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳನ್ನು ಚುನಾವಣಾ ಕರ್ತವ್ಯಕ್ಕೆ ಉಪಯೋಗಿಸುವುದರಿಂದ ಗ್ರಾಮಾಂತರ ಪ್ರದೇಶಗಳಲ್ಲಿ ಮತದಾನದ ದಿನ ಮತದಾರರಿಗೆ ಆಗುವ ಅನಾನುಕೂಲಗಳನ್ನು ತಪ್ಪಿಸುವ ಉದ್ದೇಶದಿಂದ ಕಾಲೇಜು ಬಸ್ಸುಗಳ ನೆರವು ಪಡೆಯಲು ಜಿಲ್ಲಾಡಳಿತ ಕ್ರಮಕೈಗೊಂಡಿದೆ.
ಅಂಗವಿಕಲರು ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ. ಅಶಕ್ತರು ಮತ್ತು ಅಂಗವಿಕಲರು ಮತದಾನ ಮಾಡಲು ಪೂರಕವಾಗುವಂತೆ ರಾಂಪ್ ಗಳನ್ನು ಹಾಗೂ 18 ವರ್ಷ ಮೇಲ್ಪಟ್ಟವರ ನೆರವು ಪಡೆಯಬಹುದು. ಮತದಾನ ಕೇಂದ್ರಗಳಲ್ಲಿ ನೀರು ಮತ್ತು ನೆರಳಿನ ವ್ಯವಸ್ಥೆಯನ್ನು ಮಾಡಲಾಗಿದೆ.
ಕಾರ್ಮಿಕರಿಗೆ ವೇತನ ಸಹಿತ ರಜೆ ಘೋಷಿಸಲು ಕಾರ್ಮಿಕ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ. ಹಾಗಾಗಿ ಎಲ್ಲ ಕಾರ್ಮಿಕರ ಮತದಾನ ಮಾಡಿ ಎಂದು ಕಾರ್ಮಿಕರೊಬ್ಬರ ಫೋನ್ ಕರೆಗೆ ಉತ್ತರಿಸಿದರು.
ಯಾವುದೇ ಅಕ್ರಮಗಳಿಗೆ ಸಂಬಂಧಿಸಿದ ಪುರಾವೆ ನೀಡಲು 1077 ಗೆ ಕರೆ ಮಾಡಿ ಇಂತಹ ವಿಷಯಕ್ಕೆ ಜಿಲ್ಲಾಧಿಕಾರಿಯೊಂದಿಗೆ ಮಾತನಾಡಬೇಕಿದೆ ಎಂದರೆ ತಾನು ಲಬ್ಯ ಎಂದು ಕೇಳುಗರ ಪ್ರಶ್ನೆಗೆ ಉತ್ತರಿಸಿದರು.
ಮತದಾನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿರುವ ಎಲ್ಲರೂ ಮತದಾನ ಮಾಡಲು ಅನುಕೂಲವಾಗುವಂತೆ ಪೋಸ್ಟಲ್ ಬ್ಯಾಲೆಟ್ ಮೂಲಕ ಮತದಾನಕ್ಕೆ ಅವಕಾಶ ನೀಡಲಾಗಿದೆ ಎಂದರು.
ಮಂಗಳೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥರಾದ ಡಾ ವಸಂತಕುಮಾರ್ ಪೆರ್ಲ ಅವರು ಫೋನ್ ಇನ್ ಕಾರ್ಯಕ್ರಮ ನಡೆಸಿಕೊಟ್ಟರು.

Daily report on voilation of Model Code of Conduct

please click here

ಸಹಾಯಕ ಖರ್ಚು ವೆಚ್ಚ ವೀಕ್ಷಕರ ವಿಶೇಷ ಸಭೆ

ಮಂಗಳೂರು, ಏಪ್ರಿಲ್. 25 : ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯನ್ನು ಸಮರ್ಪಕವಾಗಿ ನಡೆಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕೈಗೊಂಡಿರುವ ವಿನೂತನ ಕ್ರಮಗಳ ಬಗ್ಗೆ ಸಹಾಯಕ ಖರ್ಚುವೆಚ್ಚ ವೀಕ್ಷಕರಿಗೆ ಜಿಲ್ಲಾಧಿಕಾರಿ ಹರ್ಷಗುಪ್ತ ಅವರು ಮಾಹಿತಿ ನೀಡಿದರು.
           ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾಗಿದ್ದ ವಿಶೇಷ ಸಭೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು ಚುನಾವಣೆಯಲ್ಲಿ ಖಚರ್ುವೆಚ್ಚ ವೀಕ್ಷಕರ ಪಾತ್ರ ಅತ್ಯಂತ ಪ್ರಮುಖವಾಗಿದ್ದು ಅವರಿಗೆ ಅಗತ್ಯವಿರುವ ಎಲ್ಲ ಪೂರಕ ಮಾಹಿತಿಗಳನ್ನು ನೀಡಲು ಜಿಲ್ಲಾಡಳಿತ ಕೈಗೊಂಡಿರುವ ಆನ್ ಲೈನ್ ಮಾಹಿತಿಯ ಬಗ್ಗೆ ವಿವರಿಸಿದರು.
ಇದರಿಂದ ಖರ್ಚು ವೆಚ್ಚ ವೀಕ್ಷಕರಿಗೆ ಶ್ಯಾಡೋ ರಿಜಿಸ್ಟರ್ ನಿರ್ವಹಣೆಗೆ ಅನುಕೂಲವಾಗಲಿದೆ. ಪ್ರತಿಯೊಂದು ವರದಿಗೂ ವಿವಿಧ ಕರ್ತವ್ಯಗಳಲ್ಲಿ ನಿರತವಾಗಿರುವ ಅಧಿಕಾರಿಗಳನ್ನು ನಿರಂತರ ಸಂಪಕರ್ಿಸುವ ಹಾಗೂ ಮಾಹಿತಿ ಕೋರುವ ಕೆಲಸ ತಪ್ಪಲಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಅಧಿಕಾರಿಗಳು ತಮ್ಮ ಅಧಿಕಾರ ವ್ಯಾಪ್ತಿಯನ್ನು ಅರಿತು ಸಂಪೂರ್ಣವಾಗಿ ಕ್ರಮಕೈಗೊಳ್ಳಲು ಪ್ರೇರೇಪಿಸಿದ ಜಿಲ್ಲಾಧಿಕಾರಿಗಳು, ಕೆಲಸವನ್ನು ಸುಸೂತ್ರವಾಗಿ ನಿರ್ವಹಿಸಲು ತಾಂತ್ರಿಕತೆಯ ನೆರವಿನಿಂದ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. 

ಸಾರ್ವಜನಿಕರ ಮಾಹಿತಿಗಾಗಿ

ಮಂಗಳೂರು, ಏಪ್ರಿಲ್. 25: ರಾಜ್ಯ ವಿಧಾನಸಭಾ ಚುನಾವಣೆ-2013 ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು ಯಾವುದೇ ವ್ಯಕ್ತಿ ಯಾವುದೇ ಉದ್ದೇಶಕ್ಕೆ ರೂ.50,000 ರೂ.ಗಳಿಗಿಂತ ಹೆಚ್ಚು ನಗದು ತಮ್ಮ ಜೊತೆ ಇರಿಸಿಕೊಂಡಿದ್ದರೆ ಅದಕ್ಕೆ ಪೂರಕ ದಾಖಲೆಗಳನ್ನಿರಿಸಿಕೊಳ್ಳಬೇಕು.
ಜಿಲ್ಲೆಯ ಎಲ್ಲೆಡೆ ಅಕ್ರಮ ತಡೆಗೆ ಕಣ್ಗಾವಲಿರಿಸಲಾಗಿದ್ದು, ಅನುಮಾನಕ್ಕೆಡೆಯಾದ ನಗದು ಅಥವಾ ಉಡುಗೊರೆ ವಸ್ತುಗಳಿದ್ದರೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ  ಹರ್ಷ ಗುಪ್ತ ಅವರು ಮತ್ತೊಮ್ಮೆ ಎಚ್ಚರಿಸಿದ್ದಾರೆ.



Tuesday, April 23, 2013

ಸಮನ್ವಯ ಸಮಿತಿ ಸಭೆ


ಮಂಗಳೂರು ಏಪ್ರಿಲ್ 23:- ರಾಜ್ಯ ಸಾರ್ವತ್ರಿಕ ಚುನಾವಣೆ- 2013 ಚುನಾವಣೆ ಯಲ್ಲಿ ಸಮನ್ವಯ ತೆಯಿಂದ ಕಾರ್ಯ ಸಾಧಿಸಲು ಜಿಲ್ಲಾಧಿಕಾರಿ ಶ್ರೀ ಹರ್ಷಗುಪ್ತ ಅವರ ಅಧ್ಯಕ್ಷತೆ ಯಲ್ಲಿ ಜಿಲ್ಲಾಧಿ ಕಾರಿಗಳ ಕಚೇರಿಯಲ್ಲಿ ಪ್ರಮುಖ ಇಲಾಖಾ ಅಧಿಕಾರಿಗಳ ಸಭೆ ನಡೆಯಿತು. ತೆರಿಗೆ ಇಲಾಖೆ, ವಾಣಿಜ್ಯ ತೆರಿಗೆ ಇಲಾಖೆ, ಚುನಾವಣಾ ವೀಕ್ಷಕರು ಮತ್ತು ಅಸಿಸ್ಟೆಂಟ್ ಎಕ್ಸಪೆಂಡಿಚರ್ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಚುನಾವಣೆಯಲ್ಲಿ ಯಾವುದೇ ಅಕ್ರಮಗಳು ನಡೆಯದಂತೆ ತಡೆಯಲು ತೆರಿಗೆ ಇಲಾಖೆ ಪ್ರಮುಖ ಅಧಿಕಾರಿಗಳು ಕಾರ್ಯೋನ್ಮುಖರಾಗಿದ್ದಾರೆ. ಚುನಾವಣೆ  ಸಮಯದಲ್ಲಿ  ತೆರಿಗೆ ಇಲಾಖೆ ಅಧಿಕಾರಿಗಳ ಜವಾಬ್ದಾರಿ ಹಾಗು ಕಾರ್ಯ ನಿರ್ವಹಿಸುವ ರೀತಿಯನ್ನು ಇನ್ಕಮ್ಟ್ಯಾಕ್ಸ್ ಅಧಿಕಾರಿ ಶ್ರೀಮತಿ ಲಕ್ಷ್ಮಿ ಹಂದೆ ಅವರು ಅಧಿಕಾರಿ ಗಳಿಗೆ ವಿವರಿಸಿದರು. ಹತ್ತು ಲಕ್ಷ ರೂಪಾಯಿ ಗಳಿ ಗಿಂತ ಹೆಚ್ಚಿನ ಮೊತ್ತವನ್ನು ಸೀಜ್ ಮಾಡಿದ ಸಂದರ್ಭದಲ್ಲಿ 50,000 ರೂಪಾಯಿಗಳಿಗಿಂತ ಹೆಚ್ಚಿನ ಸಂದರ್ಭದಲ್ಲಿ ಪೊಲೀಸ್ ನೆರವು ಪಡೆಯುವ ಬಗ್ಗೆಯೂ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದರು.
ಸಮುದ್ರದ ಮೂಲಕ, ವಿಮಾನನಿಲ್ದಾಣ ಮೂಲಕ, ರೈಲ್ವೇ ಮೂಲಕ ಯಾವುದೇ ರೀತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉಡುಗೊರೆ, ಹಣ, ಬಂಗಾರ ಸಾಗಾಣಿಕೆಯನ್ನು ಪತ್ತೆ ಹಚ್ಚಲು ವಾಣಿಜ್ಯತೆರಿಗೆ ಇಲಾಖೆಗಳ ಸಹಕಾರ ಅಗತ್ಯವಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಯಾವುದೇ ಕಾರಣಕ್ಕೂ ನೀತಿ ಸಂಹಿತೆ ಉಲ್ಲಂಘನೆಯಾಗಬಾರದು. ಹಾಗೂ ಎಲ್ಲ ಖರ್ಚು ವೆಚ್ಚಗಳು ಲೆಕ್ಕಕ್ಕೆ ಸಿಗಬೇಕೆಂಬ ಉದ್ದೇಶದಿಂದ ಸಮಗ್ರ ವ್ಯವಸ್ಥೆ ಮಾಡಲಾಗಿದೆ. ಚುನಾವಣಾ ಅಕ್ರಮ ತಡೆಗೆ ಎಲ್ಲ ಅಧಿಕಾರಿಗಳಿಗೆ ಪೂರಕ ಅಧಿಕಾರ ನೀಡಲಾಗಿದ್ದು, ಅಧಿಕಾರವನ್ನು ಸದ್ಬಳಕೆ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಅಡಿಷನಲ್ ಕಮಿಷನರ್ ಇನ್ಕಮ್ಟ್ಯಾಕ್ಸ್ ಶ್ರೀ ಡಿ ಕೆ ಝಾ, ಎನ್ಎಮ್ ಪಿ ಟಿ ಪೋರ್ಟ್ ಸೆಕ್ರೆಟರಿ ಕಸ್ಟಮ್ಸ್ ಅಧಿಕಾರಿಗಳು, ಏರ್ಪೋರ್ಟ್ ಡೈರೆಕ್ಟರ್ ಶ್ರೀ ರಾಧಾಕೃಷ್ಣ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.