Friday, April 19, 2013

ಚುನಾವಣೆ ಮತ್ತು ಮತದಾನದ ಮಹತ್ವದ ಬಗ್ಗೆ ಜಾಗೃತಿ ಅಭಿಯಾನ

ಮಂಗಳೂರು, ಏಪ್ರಿಲ್.19: ಅಪ್ನಾದೇಶ್ ಮಾದರಿ ಗ್ರಾಮಾಭಿವೃದ್ಧಿ ಆಂದೋಲನ, ಸಮಾಜ ಕಾರ್ಯ ಸಂಸ್ಥೆ, ಜನ ಶಿಕ್ಷಣ ಟ್ರಸ್ಟ್, ಮಾದರಿ ಗ್ರಾಮ ವಿಕಾಸ ಕೇಂದ್ರ, ಸುಗ್ರಾಮ ಸಂಘ ಹಾಗೂ ಗ್ರಾಮ ಪಂಚಾಯತ್ ಗಳ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಮತದಾರರ ಜಾಗೃತಿ ಆಂದೋಲನದಲ್ಲಿ 'ಗಿರಿಸಿರಿ' ಕಲಾ ತಂಡದ ಆದಿವಾಸಿ ಕಲಾವಿದರು ಹಾಗೂ ಗ್ರಾಮ ವಿಕಾಸ ಕೇಂದ್ರಗಳ ಪ್ರೇರಕರು ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಲ್ಲಿ ಮತದಾರರ ಪಾಲುದಾರಿಕೆ, ಚುನಾವಣೆ ಮತ್ತು ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಜನಪದ ನೃತ್ಯ, ಬೀದಿ ನಾಟಕ, ಜಾಗೃತಿ ಗೀತೆ, ಪ್ರದರ್ಶನ ಕಾರ್ಯಕ್ರಮ.

No comments: